
ಪಂಜಾಬ್ (ಜೂ.15) ಪಂಜಾಬ್ ವಿಧಾನಸಭೆ ಚುನಾವಣೆಗೆ ತಯಾರಿಗಳು ನಡೆಯುತ್ತಿದೆ. ಕೆಲ ತಿಂಗಳು ಇರುವಾಗಲೇ ಪಂಜಾಬ್ನಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಗುರು ದ್ರೋಹಿ, ಖಾಲ್ಸಾ ಪಂತದ ವಿರೋಧಿ ಎಂದು ಸಿಖ್ ಸರ್ವಶ್ರೇಷ್ಠ ಧಾರ್ಮಿಕ ಪೀಠ ಅಖಾಲ್ ತಕ್ತ್ ಘೋಷಿಸಿದೆ. ಈ ಘೋಷಣೆ ಹೊರಬೀಳುತ್ತಿದ್ದಂತೆ ಭಗವಂತ್ ಮಾನ್ ವಿರುದ್ದ ಪ್ರತಿಭಟನೆಗಳು, ಹೋರಾಟಗಳು ಆರಂಭಗೊಂಡಿದೆ.
ಭಗವಂತ್ ಮಾನ್ ಪಂಜಾಬ್ ಮುಖ್ಯಮಂತ್ರಿಯಾಗಿ ನಡೆದುಕೊಳ್ಳುತ್ತಿರುವ ರೀತಿ ತೀವ್ರ ನೋವುಂಟು ಮಾಡಿದೆ. ಭಗವಂತ್ ಮಾನ್ ಜೊತೆ ಖಾಲ್ಸಾ ಸಮುದಾಯ ಯಾವುದೇ ಸಂಬಂಧ ಇಟ್ಟುಕೊಳ್ಳುವುದು ಬೇಡ. ಪಂಜಾಬ್ ಮುಖ್ಯಮಂತ್ರಿಯಾಗಿರಬಹುದು. ಆದರೆ ಸಮುದಾಯ, ಧರ್ಮ, ಗುರುಗಳಿಗೆ ಗೌರವ ನೀಡಿದವರಿಗೆ ಯಾವುದೇ ಮನ್ನಣೆ, ಗೌರವ ಬೇಡ ಎಂದು ಅಖಾಲ್ ತಕ್ತ್ ಸೂಚನೆ ನೀಡಿದೆ.
ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ದ ಧಾರ್ಮಿಕ ಪೀಠ ಈ ನಿರ್ಧಾರಕ್ಕೆ ಬರಲು ಮಹತ್ವದ ಕಾರಣವಿದೆ. ಕೆಲ ತಿಂಗಳಲ್ಲಿ ಮಾನ್ ಅವರದ್ದು ಎನ್ನಲಾದ ವಿಡಿಯೋ ಒಂದು ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಭಗವಂತ್ ಮಾನ್ ಸಿಖ್ ಗುರುಗಳ ಫೋಟೋ ಮೇಲೆ, ಪೂಜ್ಯನೀಯ ಸಂತರ ಫೋಟೋ ಮೇಲೆ ಮದ್ಯ ಚಿಮುಕಿಸುವ ದೃಶ್ಯವಿತ್ತು.ಇದು ಕೋಲಾಹಲಕ್ಕೆ ಕಾರಣಾಗಿತ್ತು. ಇದೇ ವಿಡಿಯೋದಲ್ಲಿ ಕೆಲ ಅಕ್ಷೇಪಾರ್ಹ ಪದಗಳನ್ನು ಬಳಸಿದ್ದರು.
ಈ ವಿಡಿಯೋ ವೈರಲ್ ಆಗಿ ಕೋಲಾಹಲ ಸೃಷ್ಟಿಸುತ್ತಿದ್ದಂತೆ ಧಾರ್ಮಿಕ ಪೀಠ ಅಕಾಲ್ ತಕ್ತ್ ಭಗವಂತ್ ಮಾನ್ಗೆ ನೋಟಿಸ್ ನೀಡಿ ವಿವರಣೆ ಕೇಳಿತ್ತು. ಈ ಕುರಿತು ಧಾರ್ಮಿಕ ಪೀಠದ ಗುರುಗಳ ಮುಂದೆ ಹಾಜರಾದ ಭಗವಂತ್ ಮಾನ್, ಇದು ಎಐ ಸೃಷ್ಟಿಸಿದ ವಿಡಿಯೋ, ಇದು ನಾನಲ್ಲ. ಯಾರೂ ಎಐ ಬಳಸಿ ನಕಲಿ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದರು.
ವಿವರಣೆ ಪಡೆದ ಬಳಿಕ ಪಂಜಾಬ್ ಸರ್ಕಾರದಿಂದ ಈ ವಿಡಿಯೋ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಲು ಮನವಿ ಮಾಡಿತ್ತು. ಆದರೆ ಪಂಜಾಬ್ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡದೆ ಈ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸಿತ್ತು. ಹೀಗಾಗಿ ಧಾರ್ಮಿಕ ಪೀಠ ಕೇಂದ್ರ ಸರ್ಕಾರದ ವಿಧಿವಿಜ್ಞಾನಲಯದ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಇದು ಅಸಲಿ ವಿಡಿಯೋ ಎಂದು ಸಾಬೀತಾಗಿತ್ತು. ವರದಿ ಆಧರಿಸಿ ಮತ್ತೆ ಸಭೆ ಸೇರಿದ ಧಾರ್ಮಿಕ ಪೀಠ ಇದೀಗ ಭಗವಂತ್ ಮಾನ್ ಗುರು ದ್ರೋಹಿ ಹಾಗೂ ಸಿಖ್ ಸಮುದಾಯದ ವಿರೋಧಿ ಎಂದು ಘೋಷಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ