
ನವದೆಹಲಿ(ಡಿ.20): ಕೇಂದ್ರ ಸರ್ಕಾರ ಕಳೆದ 6 ವರ್ಷಗಳ ಅವಧಿಯಲ್ಲಿ ಕೈಗೊಂಡ ಹಲವು ಸುಧಾರಣೆಗಳಿಂದಾಗಿ ಭಾರತದ ಬಗೆಗಿನ ಜಾಗತಿಕ ಪರಿಕಲ್ಪನೆಯೇ ಬದಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 6 ತಿಂಗಳ ಹಿಂದೆ ಜಾರಿಗೊಳಿಸಿದ ಕೃಷಿ ಸುಧಾರಣೆಗಳು ರೈತರಿಗೆ ಫಲ ನೀಡಲು ಆರಂಭಿಸಿವೆ ಎಂದೂ ತಿಳಿಸಿದ್ದಾರೆ.
ಕೈಗಾರಿಕಾ ಸಂಸ್ಥೆ ಅಸೋಚಾಮ್ನ ಸಂಸ್ಥಾಪನಾ ಸಪ್ತಾಹದಲ್ಲಿ ಮಾತನಾಡಿದ ಅವರು, ಭಾರತದಲ್ಲೇಕೆ ಹೂಡಿಕೆ ಮಾಡಬೇಕು ಎಂದು ಹಿಂದೆಲ್ಲಾ ಉದ್ಯಮಿಗಳು ಪ್ರಶ್ನಿಸುತ್ತಿದ್ದರು. ಆದರೆ ಕಳೆದ 6 ವರ್ಷಗಳಲ್ಲಿ ಸರ್ಕಾರ ಕೈಗೊಂಡ ಸುಧಾರಣೆಗಳ ಪರಿಣಾಮವಾಗಿ ಭಾರತದಲ್ಲಿ ಏಕೆ ಹೂಡಬಾರದು ಎಂದು ಕೇಳುವಂತಾಗಿದೆ. 1500 ಹಳೆಯ, ನಿಷ್ಕಿ್ರಯ ಕಾಯ್ದೆಗಳನ್ನು ರದ್ದುಗೊಳಿಸಿದ್ದೇವೆ. ಬದಲಾದ ಹೂಡಿಕೆ ವ್ಯವಸ್ಥೆಗೆ ತಕ್ಕಂತೆ ಹೊಸ ಕಾಯ್ದೆಗಳನ್ನು ರೂಪಿಸಿದ್ದೇವೆ ಎಂದು ಹೇಳಿದರು.
ಭಾರತದಲ್ಲಿ ದುಬಾರಿ ತೆರಿಗೆ ಇದ್ದ ಕಾರಣಕ್ಕೆ ಅಲ್ಲೇಕೆ ಹೂಡಿಕೆ ಮಾಡಬೇಕು ಎಂದು ಹೂಡಿಕೆದಾರರು ಕಾರಣ ನೀಡುತ್ತಿದ್ದರು. ಆದರೆ ಈಗ ಸ್ಪರ್ಧಾತ್ಮಕ ತೆರಿಗೆ ದರವಿರುವುದರಿಂದ ಹೂಡಿಕೆ ಏಕೆ ಮಾಡಬಾರದು ಎನ್ನುತ್ತಿದ್ದಾರೆ. ಮೊದಲೆಲ್ಲಾ ಹೂಡಿಕೆದಾರರಿಗೆ ಕೆಂಪುಪಟ್ಟಿಎದುರಾಗುತ್ತಿತ್ತು. ಆದರೆ ಈಗ ಕೆಂಪಹಾಸಿನ ಸ್ವಾಗತ ಕೋರಲಾಗುತ್ತಿದೆ. ಹಿಂದೆಲ್ಲಾ ಸರ್ಕಾರದ ಮಧ್ಯಪ್ರವೇಶ ಹೆಚ್ಚಿತ್ತು. ಆದರೆ ಸರ್ಕಾರದ ಮೇಲೆ ಖಾಸಗಿ ವಲಯ ವಿಶ್ವಾಸವಿರಿಸಿದೆ. ಹೀಗಾಗಿ ಭಾರತದಲ್ಲೇಕೆ ಹೂಡಿಕೆ ಮಾಡಬಾರದು ಎಂಬ ಪರಿಕಲ್ಪನೆ ಬಂದಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ