ಬಿಹಾರ ದಾಖಲೆ ಮತದಾನ ಎನ್‌ಡಿಎ ಜಯ ಸಂಕೇತ : ಮೋದಿ

Kannadaprabha News   | Kannada Prabha
Published : Nov 08, 2025, 05:03 AM IST
PM Narendra Modi

ಸಾರಾಂಶ

‘ಬಿಹಾರದ ಮತದಾರರು ಹಳೆಯ ದಾಖಲೆಗಳನ್ನು ಮುರಿದು, ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಿದ್ದಾರೆ. ಜನರು ನರೇಂದ್ರ ಮತ್ತು ನಿತೀಶರ ಕೆಲಸಗಳ ಮೇಲೆ ತಮ್ಮ ನಂಬಿಕೆಯನ್ನು ಮರುಸ್ಥಾಪಿಸಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಔರಂಗಾಬಾದ್‌/ಭಭುವಾ : ‘ಬಿಹಾರದ ಮತದಾರರು ಹಳೆಯ ದಾಖಲೆಗಳನ್ನು ಮುರಿದು, ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಿದ್ದಾರೆ. ಜನರು ನರೇಂದ್ರ ಮತ್ತು ನಿತೀಶರ ಕೆಲಸಗಳ ಮೇಲೆ ತಮ್ಮ ನಂಬಿಕೆಯನ್ನು ಮರುಸ್ಥಾಪಿಸಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

2ನೇ ಹಂತದ ವಿಧಾನಸಭೆ ಚುನಾವಣೆ ಎದುರಿಸಲಿರುವ ಔರಂಗಾಬಾದ್‌, ಭಭುವಾ ಕ್ಷೇತ್ರಗಳಲ್ಲಿ ಶುಕ್ರವಾರ ರ್‍ಯಾಲಿ ನಡೆಸಿದ ಅವರು, ಈ ಬಾರಿಯೂ ಬಿಜೆಪಿ-ಜೆಡಿಯು ಮೈತ್ರಿಕೂಟ ಗೆಲುವು ಸಾಧಿಸುವ ಕುರಿತು ವಿಶ್ವಾಸ ವ್ಯಕ್ತಪಡಿಸಿದರು. ಮತದಾರರು ಭಾರಿ ಪ್ರಮಾಣದಲ್ಲಿ ಮತ ಚಲಾಯಿಸಿ ವಿಪಕ್ಷಗಳ ಅಪಪ್ರಚಾರಕ್ಕೆ ತಿರುಗೇಟು ನೀಡಿದ್ದಾರೆ ಎಂದರು.

ಬಿಹಾರದ ಮತದಾರರು ಎಲ್ಲಾ ದಾಖಲೆಗಳನ್ನು ಮುರಿದರು

‘ನಿನ್ನೆ, ಬಿಹಾರದ ಮತದಾರರು ಎಲ್ಲಾ ದಾಖಲೆಗಳನ್ನು ಮುರಿದರು. ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಇಷ್ಟೊಂದು ಹೆಚ್ಚಿನ ಪ್ರಮಾಣದ ಮತದಾನ ನಡೆದಿರಲಿಲ್ಲ. ಹೆಚ್ಚಿನ ಶ್ರೇಯಸ್ಸು ತಾಯಂದಿರು ಮತ್ತು ಸಹೋದರಿಯರಿಗೆ ಸಲ್ಲುತ್ತದೆ. ಅವರು ಅಪಾರ ಸಂಖ್ಯೆಯಲ್ಲಿ ಬಂದು ಮತದಾನವನ್ನು ಶೇ.65ಕ್ಕೆ ಹೆಚ್ಚಿಸಿದರು. ಅವರೆಲ್ಲರೂ ನರೇಂದ್ರ ಮೋದಿ-ನಿತೀಶ್ ಕುಮಾರ್‌ ಅವರ ದಾಖಲೆಯ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂಬುದು ಸ್ಪಷ್ಟವಾಗಿದೆ’ ಎಂದರು.

ಬಿಜೆಪಿಗರಿಂದ ದಿಲ್ಲೀಲೂ ಮತ, ಬಿಹಾರದಲ್ಲೂ ಮತ: ರಾಗಾ

ಬಂಕಾ (ಬಿಹಾರ) : ಮತಗಳ್ಳತನ ಪ್ರಸ್ತಾಪಿಸಿ ಈಗಾಗಲೇ ಬಿಜೆಪಿ ಮೇಲೆ ಮುಗಿಬಿದ್ದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ದೆಹಲಿಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ ಬಿಜೆಪಿ ನಾಯಕರು ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲೂ ಮತ ಚಲಾಯಿಸಿದ್ದಾರೆ’ ಎಂದು ಶುಕ್ರವಾರ ಆರೋಪಿಸಿದ್ದಾರೆ.ಬಂಕಾದಲ್ಲಿ ನಡೆದ ಚುನಾವಣಾ ಸಭೆ ಉದ್ದೇಶಿಸಿ ಮಾತನಾಡಿದ ಗಾಂಧಿ, ‘ಹರ್ಯಾಣದಲ್ಲಿ 25 ಲಕ್ಷ ಮತ ಕದಿಯಲಾಗಿದೆ ಎಂಬ ಬಗ್ಗೆ ನಾನು ಪುರಾವೆ ಒದಗಿಸಿದ್ದೇನೆ. ಚುನಾವಣಾ ಆಯೋಗವು ಆರೋಪಗಳನ್ನು ನಿರಾಕರಿಸಲು ಸಾಧ್ಯವಿಲ್ಲ. ಬಿಜೆಪಿ ಹಾಗೂ ಮೋದಿ ಸಗಟು ಮತಗಳ್ಳತನದಲ್ಲಿ ತೊಡಗಿದೆ. ಇದನ್ನೇ ಬಿಹಾರದಲ್ಲಿ ಪುನರಾವರ್ತಿಸುವ ಯತ್ನ ನಡೆದಿದೆ. ಆದರೆ, ಬಿಹಾರದ ಜನರು ಇದು ಸಂಭವಿಸಲು ಬಿಡುವುದಿಲ್ಲ ಎಂದು ನನಗೆ ಖಚಿತವಾಗಿದೆ’ ಎಂದರು.

‘ದೆಹಲಿಯಲ್ಲಿ ಮತ ಚಲಾಯಿಸಿದ ಬಿಜೆಪಿ ನಾಯಕರು ಗುರುವಾರ ಬಿಹಾರ ಚುನಾವಣೆಯ ಮೊದಲ ಹಂತದಲ್ಲಿಯೂ ಮತ ಚಲಾಯಿಸಿದ್ದಾರೆ ಎಂದು ನನಗೆ ನಿನ್ನೆ ತಿಳಿಯಿತು’ ಕಿಡಿಕಾರಿದರು.ಇದೇ ವೇಳೆ, ‘ಮೋದಿ ಮುಖವನ್ನು 24 ಗಂಟೆಗಳ ಕಾಲ ತೋರಿಸಲು ಟೀವಿ ಚಾನೆಲ್‌ಗಳಿಗೆ ಬಿಜೆಪಿ ಹಣ ನೀಡುತ್ತದೆ’ ಎಂದು ರಾಹುಲ್‌ ಆರೋಪಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ