ನಿಮ್ಮ ನೆರವು ಬೇಕಿದೆ, ಕೂಡುಗೈ ದಾನಿ ರತನ್ ಟಾಟಾ ಮೊದಲ ಬಾರಿಗೆ ಸಾರ್ವಜನಿಕರಲ್ಲಿ ಮನವಿ!

Published : Jun 27, 2024, 11:24 AM ISTUpdated : Jun 27, 2024, 11:39 AM IST
ನಿಮ್ಮ ನೆರವು ಬೇಕಿದೆ, ಕೂಡುಗೈ ದಾನಿ ರತನ್ ಟಾಟಾ ಮೊದಲ ಬಾರಿಗೆ ಸಾರ್ವಜನಿಕರಲ್ಲಿ ಮನವಿ!

ಸಾರಾಂಶ

ರತನ್ ಟಾಟಾ ಇದೇ ಮೊದಲ ಬಾರಿಗೆ ಸಾರ್ವಜನಿಕರಲ್ಲಿ ಸಹಾಯ ಬೇಡಿದ್ದಾರೆ. ಸಂಕಷ್ಟದ ಸಮಯದಲ್ಲಿ ಸಹಾಯ ಹಸ್ತ ಚಾಚುವುದರಲ್ಲಿ ರತನ್ ಟಾಟಾ ಮುಂಚೂಣಿಯಲ್ಲಿದ್ದಾರೆ. ಆದರೆ ಇದೀಗ ತುರ್ತಾಗಿ ನೆರವಿನ ಅಗತ್ಯವಿದೆ ಎಂದು ರತನ್ ಟಾಟಾ ಮನವಿ ಮಾಡಿದ್ದಾರೆ. ರತನ್ ಟಾಟಾ ಈ ರೀತಿ ಮನವಿ ಮಾಡಿದ್ದು ಯಾಕೆ?

ಮುಂಬೈ(ಜೂ.27) ಉದ್ಯಮಿ ರತನ್ ಟಾಟಾ ಶ್ರೀಮಂತ ಉದ್ಯಮಿ. ಆದರೆ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ರತನ್ ಟಾಟಾ ಎಲ್ಲರ ಅಚ್ಚುಮೆಚ್ಚು. ಕೋವಿಡ್ ಸಂದರ್ಭದಲ್ಲಿ ಸಾವಿರಾರು ಕೋಟಿ ರೂಪಾಯಿ ಹಣವನ್ನು ದೇಣಿಯಾಗಿ ನೀಡಿದ್ದಾರೆ. ಇದೊಂದೆ ಅಲ್ಲ ಪ್ರತಿ ಭಾರಿ ಭಾರತಕ್ಕೆ ಸಂಕಷ್ಟ ಎದುರಾದಾಗ ರತನ್ ಟಾಟಾ ನೆರವು ನೀಡಿದ್ದಾರೆ. ಇದೇ ಮೊದಲ ಬಾರಿಗೆ ರತನ್ ಟಾಟಾ ಸಾರ್ವಜನಿಕರಲ್ಲಿ ನರೆವು ಕೇಳಿದ್ದಾರೆ. ಹೌದು, ಒಂದು ನಾಯಿಯ ಪ್ರಾಣ ಉಳಿಸಲು ರತನ್ ಟಾಟಾ ಸಾರ್ವಜನಿಕರಲ್ಲಿ ವಿಶೇಷ ಮನವಿ ಮಾಡಿದ್ದಾರೆ. 

ರತನ್ ಟಾಟಾ ತಮ್ಮ ಇನ್‌ಸ್ಟಾಗ್ರಾಂ ಖಾತೆ ಮೂಲಕ ಸಹಾಯ ಕೋರಿದ್ದಾರೆ. 7 ತಿಂಗಳ ನಾಯಿ ಮರಿಯೊಂದನ್ನು ಆಸ್ಪತ್ರೆ ದಾಖಲಿಸಲಾಗಿದೆ. ಈ ನಾಯಿ ಪ್ರಾಣ ಉಳಿಸಲು ಯಾರಾದರೂ ನಾಯಿ ರಕ್ತ ದಾನ ಮಾಡಬೇಕಿದೆ. ತುರ್ತಾಗಿ ರಕ್ತದ ಅವಶ್ಯಕತೆ ಇದೆ ಎಂದು ರತನ್ ಟಾಟಾ ಮನವಿ ಮಾಡಿದ್ದಾರೆ.

ತಾಜ್ ಹೊಟೆಲ್‌ನಲ್ಲಿ ಬೀದಿ ನಾಯಿಗೆ ರಾಜ ಮರ್ಯಾದೆ, ರತನ್ ಟಾಟಾ ಸೂಚನೆ ಭಾರಿ ಮೆಚ್ಚುಗೆ!

ನನಗೆ ನಿಮ್ಮ ನೆರವು ಬೇಕಿದೆ. 7 ತಿಂಗಳ ನಾಯಿ ಮರಿಯೊಂದು ನಮ್ಮ ಪ್ರಾಣಿಗಳ ಆಸ್ಪತ್ರೆಯಲ್ಲಿ ದಾಖಲಾಗಿದೆ. ಈ ನಾಯಿಗೆ ತುರ್ತಾಗಿ ರಕ್ತ ನೀಡಬೇಕು.  ಜ್ವರ ಹಾಗೂ ಇತರ ಕೆಲ ಆರೋಗ್ಯ ಸಮಸ್ಯೆಯಿಂದ ನಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಮಗೆ ಈಗ ಮುಂಬೈನಲ್ಲಿ  ತುರ್ತಾಗಿ ನಾಯಿಯ ರಕ್ತದಾನ ಮಾಡುವರು ಬೇಕಾಗಿದ್ದಾರೆ. ರಕ್ತದಾನ ಮಾಡುವ ನಾಯಿ ಆರೋಗ್ಯವಾಗಿರಬೇಕ. 1 ರಿಂದ 8 ವರ್ಷದೊಳಗಿರಬೇಕು. ಕನಿಷ್ಠ 25 ಕೆಜಿ ಅಥವಾ ಅದಕ್ಕಿಂತ ಹೆಚ್ಚಿರಬೇಕು. ಸಂಪೂರ್ಣ ಲಸಿಕೆ ಪಡೆದಿರಬೇಕು. ಇತರ ಯಾವದೇ ಸಮಸ್ಯಗಳು ಇರಬಾರದು. ಕಳೆದ 6 ತಿಂಗಳಲ್ಲಿ ಜ್ವರ ಸೇರಿದಂತೆ ಇತರ ಸೋಂಕಿನಿಂದ ಬಳಲಿರಬಾರದು. ಈ ಮಾನದಂಡಗಳನ್ನು ಹೊಂದಿರುವ ಸಾಕು ನಾಯಿಗಳಿದ್ದರೆ ರಕ್ತ ದಾನ ಮಾಡಲು ತಕ್ಷಣವೇ ಸಂಪರ್ಕಿಸಿ ಎಂದು ರತನ್ ಟಾಟಾ ಮನವಿ ಮಾಡಿದ್ದಾರೆ.

 

 

 ರತನ್ ಟಾಟಾ ಈ ಪೋಸ್ಟ್ ಹಾಕಿದ ಬೆನ್ನಲ್ಲೇ 5 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ. ಹಲವರು ಕಮೆಂಟ್ ಮಾಡಿದ್ದಾರೆ. ನಾನು ತಯಾರಿದ್ದೇನೆ, ಸಂಪರ್ಕಿಸಿದ್ದೇನೆ ಎಂದು ಪ್ರತಿಕ್ರಿಯೆಸಿದ್ದಾರೆ. ಶ್ರೀಮಂತ ಉದ್ಯಮಿ ರತನ್ ಟಾಟಾ ಮನವಿ ಮಾಡಿದರೆ ಇಡೀ ಭಾರತವೇ ನಿಮ್ಮ ಹಿಂದೆ ನಿಲ್ಲಲಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ರತನ್ ಟಾಟಾ ಅವರ 165,00,00,000 ರೂ. ವೆಚ್ಚದ ಪ್ರಾಣಿಗಳ ಆಸ್ಪತ್ರೆ ಕಾರ್ಯಾಚರಣೆಗೆ ಸಿದ್ಧ!

ರತನ್ ಟಾಟಾ  ವಿಶೇಷ ಆಸಕ್ತಿಯಿಂದ ಮುಂಬೈನಲ್ಲಿ ಟಾಟಾ ಟ್ರಸ್ಟ್ ಪ್ರಾಣಿಗಳ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. ಈ ಆಸ್ಪತ್ರೆಯಲ್ಲಿ ಬೀದಿ ನಾಯಿಗಳಿಗೂ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ನಾಯಿಗಳ ಕುರಿತು ವಿಶೇಷ ಪ್ರೀತಿ ಹೊಂದಿರು ರತನ್ ಟಾಟಾ, ಐಷಾರಾಮಿ ತಾಜ್ ಹೊಟೆಲ್ ಪಕ್ಕದಲ್ಲಿ, ಒಳಗೆ ಬೀದಿ ನಾಯಿಗಳು ಆಶ್ರಯ ಪಡೆದಿದ್ದರೆ, ಅವುಗಳನ್ನು ಓಡಿಸಬಾರದು ಎಂದು ಸಿಬ್ಬಂದಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್