ಭಾರತದ ಮೊದಲ ವರ್ಟಿಕಲ್ ಲಿಫ್ಟ್ ಪಂಬನ್ ಸಮುದ್ರ ಸೇತುವೆಗೆ ಪ್ರಧಾನಿ ಮೋದಿ ಚಾಲನೆ!

Published : Apr 06, 2025, 02:12 PM ISTUpdated : Apr 06, 2025, 02:13 PM IST
 ಭಾರತದ ಮೊದಲ ವರ್ಟಿಕಲ್ ಲಿಫ್ಟ್ ಪಂಬನ್ ಸಮುದ್ರ ಸೇತುವೆಗೆ ಪ್ರಧಾನಿ ಮೋದಿ ಚಾಲನೆ!

ಸಾರಾಂಶ

ರಾಮೇಶ್ವರಕ್ಕೆ ಪ್ರಮುಖ ಸಂಪರ್ಕ ರಸ್ತೆಯಾದ ಪಂಬನ್ ರೈಲು ಸೇತುವೆ ಉದ್ಘಾಟನೆಯಾಗಿದೆ. ಪ್ರಧಾನಿ ಮೋದಿ ನೂತನ ಸೇತುವೆಯನ್ನು ಉದ್ಘಾಟಿಸಿ ರೈಲು ಸಂಚಾರಕ್ಕೆ ಚಾಲನೆ ನೀಡಿದರು.

Pamban Rail Bridge Opening : ಆಧ್ಯಾತ್ಮಿಕ ತಾಣವಾಗಿರುವ ರಾಮೇಶ್ವರಕ್ಕೆ ರೈಲು ಸೇತುವೆ ಪ್ರಮುಖ ಸಂಪರ್ಕ ರಸ್ತೆಯಾಗಿದೆ. 100 ವರ್ಷಗಳಷ್ಟು ಹಳೆಯದಾದ ಈ ಸೇತುವೆ ಕೆಲವು ವರ್ಷಗಳ ಹಿಂದೆ ಹಾಳಾಗಿತ್ತು. ನಂತರ ಕೇಂದ್ರ ಸರ್ಕಾರ ಹೊಸ ಸೇತುವೆ ನಿರ್ಮಿಸಲು ಯೋಜಿಸಿತ್ತು. ಅದರಂತೆ 2020 ರಿಂದ ಹೊಸ ಸೇತುವೆ ನಿರ್ಮಾಣ ಕಾರ್ಯ ಆರಂಭವಾಯಿತು. ಕೊರೊನಾ, ಸಮುದ್ರದ ಗಾಳಿ ಮತ್ತು ಸವಾಲಿನ ಹವಾಮಾನದ ನಡುವೆಯೂ ಪಂಬನ್ ಸೇತುವೆ ನಿರ್ಮಾಣ ಕಾರ್ಯ ಕಳೆದ ವರ್ಷಾಂತ್ಯಕ್ಕೆ ಪೂರ್ಣಗೊಂಡಿತ್ತು. ಸಮುದ್ರದ ಮಧ್ಯೆ 550 ಕೋಟಿ ರೂ. ವೆಚ್ಚದಲ್ಲಿ ಹೊಸ ರೈಲ್ವೆ ಸೇತುವೆ ನಿರ್ಮಿಸಲಾಗಿದೆ. ಹೊಸ ಸೇತುವೆಯಲ್ಲಿ 72.5 ಮೀಟರ್ ಉದ್ದದ ಕೇಂದ್ರ ಭಾಗವಿದೆ. ಇದರ ಮೂಲಕ ಹಡಗುಗಳು ಬಂದು ಹೋಗಲು ಈಗಾಗಲೇ ಮನುಷ್ಯರಿಂದ ಮೇಲೆತ್ತಲ್ಪಟ್ಟ ಸೇತುವೆಯ ಬದಲಿಗೆ ಯಂತ್ರದ ಮೂಲಕ 17 ಮೀಟರ್ ಎತ್ತರಕ್ಕೆ ಸೇತುವೆಯನ್ನು ಎತ್ತುವಂತೆ ಸೇತುವೆಯನ್ನು ನಿರ್ಮಿಸಲಾಗಿದೆ.

ಪಂಬನ್ ರೈಲು ಸೇತುವೆ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಶ್ರೀಲಂಕಾದಿಂದ ಹೆಲಿಕಾಪ್ಟರ್ ಮೂಲಕ ಮಂಡಪಂಗೆ ಆಗಮಿಸಿದರು. ತಮಿಳುನಾಡು ರಾಜ್ಯಪಾಲ ರವಿ, ಕೇಂದ್ರ ಸಚಿವ ಎಲ್.ಮುರುಗನ್, ತಮಿಳುನಾಡು ಸಚಿವ ತಂಗಂ ತೆನ್ನರಸು, ಬಿಜೆಪಿ ರಾಜ್ಯ ಅಧ್ಯಕ್ಷ ಅಣ್ಣಾಮಲೈ, ಶರತ್ ಕುಮಾರ್. ಜಿ.ಕೆ.ವಾಸನ್ ಸೇರಿದಂತೆ ಹಲವರು ಸ್ವಾಗತಿಸಿದರು. ನಂತರ ಸ್ವಲ್ಪ ಸಮಯ ವಿಶ್ರಾಂತಿ ಪಡೆದು ರೇಷ್ಮೆ ಪಂಚೆ ಅಂಗಿಯೊಂದಿಗೆ ಸಮಾರಂಭ ನಡೆಯುವ ಪಂಬನ್ ಸೇತುವೆಗೆ ಆಗಮಿಸಿದರು. ದಾರಿಯುದ್ದಕ್ಕೂ ಸಾರ್ವಜನಿಕರು ಪ್ರಧಾನಿಗಳನ್ನು ಸ್ವಾಗತಿಸಿದರು.

ಸೇತುವೆ ದಾಟಿದ ನೌಕಾಪಡೆ ಹಡಗು
ಪಂಬನ್ ಸೇತುವೆಯಲ್ಲಿ ರೈಲು ಸಂಚಾರಕ್ಕೆ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಿಸಿದರು. 550 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಸೇತುವೆಯ ಮಧ್ಯಭಾಗವನ್ನು ಮೇಲಕ್ಕೆತ್ತುವುದನ್ನು ವೀಕ್ಷಿಸಿದರು. ಆಗ ಕರಾವಳಿ ಕಾವಲು ಪಡೆಯ ಹಡಗುಗಳು ಸೇತುವೆಯ ಕೆಳಗೆ ಹಾದು ಹೋದವು. ಇದನ್ನು ಕೈ ಬೀಸಿ ಆನಂದಿಸಿದ ಪ್ರಧಾನಿ ಮೋದಿ, ಈ ಕಾರ್ಯಕ್ರಮದ ನಂತರ ರಾಮೇಶ್ವರದಲ್ಲಿರುವ ರಾಮನಾಥಸ್ವಾಮಿ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು. ಈಗಾಗಲೇ ಈ 2.08 ಕಿ.ಮೀ. ಉದ್ದದ ಸೇತುವೆಯಲ್ಲಿ ರೈಲುಗಳ ಪ್ರಾಯೋಗಿಕ ಸಂಚಾರ ಆರಂಭವಾಗಿದೆ.

ಇದನ್ನೂ ಓದಿ: Waqf 2025: ಕಾಂಗ್ರೆಸ್ ಇರೋವರೆಗೆ ನಾವು ಹೆದರಬೇಕಿಲ್ಲ ಜಾರ್ಖಂಡ ಸಚಿವ ಇರ್ಫಾನ್ ಅನ್ಸಾರಿ ಹೇಳಿಕೆ ವಿಡಿಯೋ ವೈರಲ್!

ಪಂಬನ್ ಸೇತುವೆ
ಈ ಸೇತುವೆ ಭಾರತದ ನೆಲವನ್ನೂ ರಾಮೇಶ್ವರ ದ್ವೀಪವನ್ನೂ ಸಂಪರ್ಕಿಸುತ್ತದೆ. ಇದನ್ನು 1914ರಲ್ಲಿ ನಿರ್ಮಿಸಲಾಗಿದೆ. ಈ ರೈಲ್ವೆ ಸೇತುವೆಯನ್ನು ‘ಕ್ಯಾಂಟಿಲಿವರ್ ಸಿಸ್ಟಂ’ನಲ್ಲಿ ನಿರ್ಮಿಸಲಾಗಿದೆ. ಈ ಸೇತುವೆ ಸಮುದ್ರದ ಮೇಲೆ ನಿರ್ಮಿಸಿರುವ ದೇಶದ ಮೊದಲನೆ ಸೇತುವೆಯಾಗಿದೆ. ದೇಶದ ಎರಡನೇ ಅತಿ ಉದ್ದದ ಸೇತುವೆಗೂ ಇದು ಪಾತ್ರವಾಗಿದೆ. ಇದು 2.3 ಕಿ. ಮೀ. ಉದ್ದವಿದ್ದು, ಪಾಕ್ ಜಲಸಂಧಿಯನ್ನು ಹಾದುಹೋಗುತ್ತದೆ.

ಭಾರತ ಹಾಗೂ ಶ್ರೀಲಂಕಾ ನಡುವೆ ವ್ಯಾಪಾರ ಸಂಬಂಧ ಸುಧಾರಿಸುವ ಉದ್ದೇಶದಿಂದ 19ನೇ ಶತಮಾನದ ಕೊನೆಯಲ್ಲಿ ಈ ಸೇತುವೆ ನಿರ್ಮಿಸಲಾಗಿದೆ ಎಂದು ತಿಳಿದು ಬಂದಿದೆ. ಗುಜರಾತ್‌ನ ಕಛ್‌ನಿಂದ ಬಂದ ಕಾರ್ಮಿಕರು 3 ವರ್ಷದಲ್ಲಿ ಸೇತುವೆ ನಿರ್ಮಿಸಿದರು ಎನ್ನಲಾಗಿದೆ.

ಇದನ್ನೂ ಓದಿ: ರಾಮನವಮಿ: ಮರ್ಯಾದಾ ಪುರುಷೋತ್ತಮನ ಹಣೆಗೆ ಬೆಳಕಿನ ತಿಲಕವಿಟ್ಟ ಸೂರ್ಯ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಭಾರತ-ಆಫ್ರಿಕಾ ಫೈನಲ್ ಫೈಟ್ - ಟೆಸ್ಟ್ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌