
ಭೋಪಾಲ್(ಡಿ.28): ಮದುವೆಯ ಮೊದಲ ವಾರ್ಷಿಕೋತ್ಸವಕ್ಕಾಗಿ ಪ್ರತಿಯೊಬ್ಬ ದಂಪತಿ ಕುತೂಹಲದಿಂದ ಕಾಯುತ್ತಿರುತ್ತಾರೆ. ಅದನ್ನು ಅವಿಸ್ಮರಣೀಯವಾಗಿಸಲು ಅವರು ಅನೇಕ ಯೋಜನೆಗಳನ್ನು ಮಾಡುತ್ತಾರೆ. ಆದರೆ ಅದೇ ದಿನ ದಂಪತಿ ಸಾವನ್ನಪ್ಪಿದರೆ, ಏನಾಗುತ್ತದೆ? ಇಂತಹುದ್ದೊಂದು ಕ್ಷಣ ಊಹಿಸಲೂ ಸಾಧ್ಯವಿಲ್ಲ. ಆದರೀಗ ಇಂತಹದೊಂದು ಹೃದಯ ಕಲಕುವ ಸುದ್ದಿ ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ಸಂಭವಿಸಿದೆ. ಮದುವೆಯ ಮೊದಲ ವಾರ್ಷಿಕೋತ್ಸವದಂದು, ಗಂಡ ಮತ್ತು ಹೆಂಡತಿ ಮತ್ತು ಸೋದರ ಮಾವ ಹಿಂತಿರುಗುತ್ತಿದ್ದರು. ಈ ವೇಳೆ ಸಹಜವಾಗಿ ಹಾಡು, ನಗು, ಸಂಭ್ರಮ ಸಡಗರವಿತ್ತು. ಆದರೆ ಇದೇ ವೇಳೆ ಸಂಭವಿಸಿದ ಭೀಕರ ಅಪಘಾತ ಮೂವರನ್ನು ಬಲಿ ಪಡೆದಿದೆ. ನೋಡ ನೋಡುತ್ತಿದ್ದಂತೆಯೇ ರಸ್ತೆಯಲ್ಲಿ ರಕ್ತ ಜಿನುಗಿದೆ.
ಕ್ಷಣಮಾತ್ರದಲ್ಲಿ ಯಮನ ಪಾದ ಸೇರಿದ ಮೂವರು
ವಾಸ್ತವವಾಗಿ, ಪಾಲಿ ನಿವಾಸಿ ವೀರಮಾರಂ ಘಾಂಚಿ (25), ಅವರ ಪತ್ನಿ ಮೀನಾ ಮತ್ತು ಮೈದುನ ಡಾ. ಹೇಮರಾಜ್ ಅಲಿಯಾಸ್ ಬಬೂಲ್ ಭಾಟಿ ಭಾನುವಾರ ರಾತ್ರಿ ಸ್ಕೂಟಿಯಲ್ಲಿ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿ ಧಾಬಾದಿಂದ ಹಿಂತಿರುಗುತ್ತಿದ್ದರು. ಇದೇ ವೇಳೆ ಮುಂಬೈನ ಭಿವಂಡಿ ಹೆದ್ದಾರಿಯಲ್ಲಿ ಅಪರಿಚಿತ ವಾಹನವೊಂದು ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಅಪಘಾತ ಎಷ್ಟು ಭೀಕರವಾಗಿತ್ತೆಂದರೆ, ಸೋದರ ಮಾವ ಸ್ಥಳದಲ್ಲೇ ಮೃತಪಟ್ಟರೆ, ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ರಕ್ತದಲ್ಲಿ ಮುಳುಗಿದ ರಸ್ತೆಯಲ್ಲಿ ಹೋದರು, ಉಳಿಸಲು ಯಾರೂ ಇರಲಿಲ್ಲ
ಈ ಭೀಕರ ದುರಂತ ತಡರಾತ್ರಿ ಸಂಭವಿಸಿದೆ. ಅಪಘಾತದ ಬಳಿಕ ರಕ್ತದ ಮಡುವಿನಲ್ಲಿದ್ದ ಪತಿ-ಪತ್ನಿ ಹಾಗೂ ಮೈದುನ ರಸ್ತೆಯಲ್ಲೇ ನರಳಾಡಿದ್ದಾರೆ. ಕತ್ತಲೆಯಿಂದಾಗಿ ಯಾರೂ ಅವರನ್ನು ನೋಡಲಿಲ್ಲ. ನಂತರ ಸೋಮವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ದಿಬ್ಬಣಕ್ಕೆ ತೆರಳುತ್ತಿದ್ದ ಬಸ್ನಲ್ಲಿದ್ದವರ ಕಣ್ಣಿಗೆ ಈ ಅಪಘಾತ ಕಂಡಿದೆ. ಕೆಳಗೆ ಇಳಿದಾಗ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಏಕೆಂದರೆ ವೀರಮಾರಾಂ ಮತ್ತು ಅಲ್ಲೇ ಹೇಮರಾಜ್ ಮೃತಪಟ್ಟಿದ್ದರು. ಆದರೆ ಮೀನಾ ಉಸಿರಾಡುತ್ತಿದ್ದರು. ಹೇಗಾದರೂ, ಆಕೆಯನ್ನು ತಕ್ಷಣ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದು ಪೊಲೀಸರಿಗೆ ಕರೆ ಮಾಡಿದ್ದಾರೆ. ಆದರೆ ಚಿಕಿತ್ಸೆ ಸಮಯದಲ್ಲಿ ಅವರು ಮುಂಬೈನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು.
ವಾರ್ಷಿಕೋತ್ಸವದಂದು ಅಕ್ಕ ಭಾವನನ್ನು ಅಭಿನಂದಿಸಲು ಬಂದಿದ್ದ ಮೈದುನ
ಮೃತ ವೀರಮಾರಾಂ ಮತ್ತು ಮೀನಾ ಅವರ ವಿವಾಹವು 26 ಡಿಸೆಂಬರ್ 2020 ರಂದು ಪಾಲಿಯಲ್ಲಿ ನಡೆಯಿತು. ಪತಿ ಮುಂಬೈನ ಥಾಣೆಯ ಮುಂಬ್ರಾ ಪ್ರದೇಶದ ಗೋದಾವರಿ ಬಿಲ್ಡಿಂಗ್ನಲ್ಲಿರುವ ಫ್ಲಾಟ್ನಲ್ಲಿ ವಾಸಿಸುತ್ತಿದ್ದರು. ಮುಂಬೈನಲ್ಲಿಯೇ ಮೆಡಿಕಲ್ ಸ್ಟೋರ್ ನಡೆಸುತ್ತಿದ್ದರು. ಭಾನುವಾರ ಅವರ ಮೊದಲ ವಿವಾಹ ವಾರ್ಷಿಕೋತ್ಸವವಾಗಿತ್ತು. ಹಾಗಾಗಿ ಮೀನಾ ಅವರ ಸಹೋದರ ಹೇಮರಾಜ್ ಭಾಟಿ ಕೂಡ ಈ ದಂಪತಿಗೆ ಅಭಿನಂದಿಸಲು ಪಾಲಿಯಿಂದ ಮುಂಬೈಗೆ ಬಂದಿದ್ದಾರೆ. ಮೂವರೂ ರಾತ್ರಿ ಸ್ಕೂಟಿಯಲ್ಲಿ ಭಿವಂಡಿ ಹೆದ್ದಾರಿಯಲ್ಲಿರುವ ಧಾಬಾದಲ್ಲಿ ಆಹಾರ ಸೇವಿಸಲು ಹೋಗಿದ್ದರು. ಆಹಾರ ಸೇವಿಸಿ ಮನೆಗೆ ಮರಳುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಪೊಲೀಸರು ಶವವನ್ನು ಹೊರತೆಗೆದು ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ