ರೈಲು ದುರಂತ ಸ್ಥಳದಲ್ಲಿ 3 ರಾತ್ರಿ, 2 ಹಗ​ಲು ಬಿಡುವಿಲ್ಲದೆ ಕಳೆದ ರೈಲ್ವೆ ಸಚಿವ ವೈಷ್ಣವ್‌

Published : Jun 06, 2023, 06:52 AM ISTUpdated : Jun 06, 2023, 07:17 AM IST
ರೈಲು ದುರಂತ ಸ್ಥಳದಲ್ಲಿ 3 ರಾತ್ರಿ, 2 ಹಗ​ಲು ಬಿಡುವಿಲ್ಲದೆ ಕಳೆದ  ರೈಲ್ವೆ ಸಚಿವ ವೈಷ್ಣವ್‌

ಸಾರಾಂಶ

ಒಡಿಶಾ ರೈಲು ದುರಂತದ ಬಳಿಕ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಸ್ಥಳದಲ್ಲಿ ಸ್ವತಃ ಮೊಕ್ಕಾಂ ಹೂಡಿ ಅಲ್ಲಿನ ಎಲ್ಲಾ ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಾ ಮೂರು ನಿದ್ರೆ ಇಲ್ಲದ ರಾತ್ರಿ 2 ಹಗಲುಗಳನ್ನು ಕಳೆದಿದ್ದು, ಅವರ ಶ್ರಮಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗ್ತಿದೆ.

ಬಾಲಸೋರ್‌ (ಒ​ಡಿ​ಶಾ​): ಇಲ್ಲಿ ಸಂಭವಿಸಿದ ತ್ರಿವಳಿ ರೈಲು ಅಪಘಾತದ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ 3 ನಿದ್ರೆಯಿಲ್ಲದ ರಾತ್ರಿಗಳು ಮತ್ತು 2 ವಿಶ್ರಾಂತಿ ಇಲ್ಲದ ಹಗಲುಗಳನ್ನು ಘಟನಾ ಸ್ಥಳದಲ್ಲೇ ಕಳೆದಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ಬಳಿಕ ಹೊಸ ಹಳಿಗಳನ್ನು ಜೋಡಿಸಿ, ರೈಲು ಸಂಚಾರ ಆರಂಭವಾಗುವವರೆಗೆ ಶ್ರಮವಹಿಸಿ ಕರ್ತವ್ಯ ಪಾಲನೆ ಮಾಡಿದ್ದಾರೆ. ಒಂದು ಕಡೆ ವಿಪಕ್ಷಗಳು ಸೇರಿ ಹಲ​ವರು ರೈಲ್ವೆ ಸಚಿ​ವರ ರಾಜೀ​ನಾ​ಮೆಗೆ ಒತ್ತಾ​ಯಿ​ಸು​ತ್ತಿ​ದ್ದರೂ, ಇನ್ನೊಂದು ಕಡೆ ವೈಷ್ಣವ್‌ ಅವರ ಈ ಶ್ರಮ ವ್ಯಾಪಕ ಮೆಚ್ಚು​ಗೆಗೆ ಪಾತ್ರ​ವಾ​ಗಿ​ದೆ.

3 ದಿನ ಹಗಲು-ರಾತ್ರಿ ಶ್ರಮ​:

ಗೋವಾ ಮತ್ತು ಮುಂಬೈ ಸಂಪರ್ಕಿಸುವ ವಂದೇ ಭಾರತ್‌ ರೈಲು ಚಾಲನೆ ಸಮಾರಂಭಕ್ಕಾಗಿ ಶುಕ್ರವಾರ ಸಾಯಂಕಾಲ ಸಚಿವ ವೈಷ್ಣವ್‌ ಗೋವಾಗೆ (Goa) ಹೋಗಿ​ದ್ದರು. ಆದರೆ ಅದೇ ವೇಳೆ ರೈಲು ಅಪ​ಘಾ​ತದ ಸುದ್ದಿ ಬಂತು. ವಿಷಯ ತಿಳಿದು ದೆಹಲಿಗೆ ವಿಮಾ​ನ​ದಲ್ಲಿ ಶುಕ್ರವಾರ ರಾತ್ರಿಯೇ ಮರ​ಳಿ​ದರು. ವಿಮಾನ ನಿಲ್ದಾಣದಲ್ಲೇ ಕುಳಿತು ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು. ಆದ​ರೆ, ಒಡಿಶಾಗೆ (Odisha)ಹೋಗುವ ವಿಮಾನ ಶನಿ​ವಾರ ಬೆಳಗ್ಗೆ 4 ಗಂಟೆಗೆ ಇತ್ತು. ಹೀಗಾಗಿ ಅಲ್ಲಿ​ಯ​ವ​ರೆಗೆ ಕಾಯದೇ ಬೆಳಗ್ಗೆ 3 ಗಂಟೆಗೇ ಬಾಡಿಗೆ ವಿಮಾನ ಮಾಡಿ​ಕೊಂಡು ಒಡಿಶಾ ತಲು​ಪಿ​ದ​ರು. ತಕ್ಷಣವೇ ಘಟನಾ ಸ್ಥಳವನ್ನು ತಲುಪಿ ಮೇಲ್ವಿಚಾರಣೆ ಆರಂಭಿಸಿದರು.

ಬಳಿಕ ಶನಿ​ವಾ​ರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿ​ಗೆ ಘಟನೆಯ ವಿವರಗಳನ್ನು ತಿಳಿಸಿ, ಸ್ಥಳೀಯ ಆಸ್ಪತ್ರೆಗಳಲ್ಲಿ ಸಕಲ ವ್ಯವಸ್ಥೆಗಳನ್ನು ಮಾಡುವಂತೆ ಸೂಚಿಸಿದರು. ನಿರಂತರವಾಗಿ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು, ರಕ್ಷಣಾ ಕಾರ್ಯಾಚರಣೆ ವಿಳಂಬವಾಗದಂತೆ ಎಚ್ಚರ ವಹಿಸಿದರು. ಬಳಿಕ ಶನಿ​ವಾರ ಇಡೀ ರಾತ್ರಿ ಘಟನೆ ನಡೆದ ಸ್ಥಳದಲ್ಲೇ ಇದ್ದುಕೊಂಡು ರಕ್ಷಣಾ ಕಾರ್ಯಾಚರಣೆಯ ಬಳಿಕ ಹಳಿ ಅಳವಡಿಸುವ ಕಾರ್ಯದ ಮೇಲ್ವಿಚಾರಣೆ ನಡೆಸಿದರು.

ಬದಲಾದ ಬೋಗಿ, ಬದುಕುಳಿಯಿತು ಜೀವ; ಅಪಘಾತ ರೈಲಿನಲ್ಲಿದ್ದ 110 ಕನ್ನಡಿಗರು ಸೇಫ್!

ಇನ್ನು ಭಾನು​ವಾರ ಕೂಡ ಬೆಳಗ್ಗೆ ಕಾರ್ಮಿ​ಕರ ಜತೆಗೇ ನಿಂತು ಹಳಿ ಜೋಡಣೆ ಕಾರ್ಯ ಪೂರ್ಣ ಆಗು​ವಂತೆ ನೋಡಿ​ಕೊಂಡರು. ಭಾನುವಾರ ರಾತ್ರಿ ವೇಳೆಗೆ ಕಾಮಗಾರಿ ಪೂರ್ಣಗೊಂಡು ಮೊದಲ ರೈಲು ಸಂಚಾರ ಆರಂಭಿ​ಸಿ​ದಾಗ, ಕೈಬೀಸಿ ಹಾಗೂ ರೈಲಿ​ನೆ​ದುರೇ ಕೈಮು​ಗಿ​ದು ಕರ್ತವ್ಯ ಪೂರ್ತಿ​ಗೊ​ಳಿ​ಸಿ​ದ​ರು.  ವೈಷ್ಣವ್‌ ಅವರ ಈ ಕಾರ್ಯ​ತ​ತ್ಪ​ರತೆ ವ್ಯಾಪಕ ಮೆಚ್ಚು​ಗೆಗೆ ಪಾತ್ರ​ವಾ​ಗಿ​ದೆ.

Odisha Train Tragedy: ಚಿಕ್ಕಮಗಳೂರಿನ 110 ಜೈನ ಯಾತ್ರಾರ್ಥಿಗಳು ಬದುಕಿರುವುದಕ್ಕೆ ತಿರುವೇ ವಿಶಾಪಟ್ಟಣಂ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿರೋಧದ ಮಧ್ಯೆ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಶಂಕು
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌