
ನವದೆಹಲಿ (ಸೆ. 02) ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ ಒಂದಿಷ್ಟು ಅಂಶಗಳನ್ನು ಪಟ್ಟಿ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ದಾಳಿ ಮಾಡಿದ್ದಾರೆ. ಟ್ವಿಟ್ ಮಾಡಿರುವ ರಾಹುಲ್ ಮೋದಿ ನಿರ್ಮಿತ ವಿಪತ್ತುಗಳಿಂದ ದೇಶ ಸಂಕಷ್ಟ ಎದುರಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಜಿಡಿಪಿ ಮಹಾಕುಸಿತದ ನಂತರ ರಾಹುಲ್ ಮಾಡಿರುವ ಟ್ವೀಟ್ ಮಹತ್ವ ಪಡೆದುಕೊಂಡಿದೆ. ಕೇಂದ್ರ ಸರ್ಕಾರ ಆರ್ಥಿಕ ಸುಧಾರಣೆಗೆ ಯಾವುದೇ ಹೆಜ್ಜೆ ತೆಗೆದುಕೊಂಡಿಲ್ಲ ಎಂದು ಮೇಲಿಂದ ಮೇಲೆ ಆರೋಪ ಮಾಡಿಕೊಂಡು ಬಂದಿದ್ದರು.
ಆರ್ಥಿಕ ತಜ್ಞರಾದ ರಾಹುಲ್ ಕೇಂದ್ರಕ್ಕೆ ಕೊಟ್ಟ ಅದ್ಭುತ ಸಲಹೆ
* ಜಿಡಿಪಿ ಮಹಾಕುಸಿತ- ಶೇ.23.9
* 45 ವರ್ಷಗಳಲ್ಲಿ ಕಂಡರಿಯದ ನಿರುದ್ಯೋಗ
* 12 ಕೋಟಿ ಉದ್ಯೋಗ ನಷ್ಟ
* ರಾಜ್ಯಗಳಿಗೆ ಜಿಎಸ್ಟಿ ಬಾಕಿ
* ಜಾಗತಿಕವಾಗಿ ಅತ್ಯಂತ ಹೆಚ್ಚು ಕೊರೋನಾ ದೈನಂದಿನ ಪ್ರಕರಣ, ಸಾವುಗಳು
* ಗಡಿಗಳಲ್ಲಿ ಬಾಹ್ಯ ದೇಶಗಳ ಆಕ್ರಮಣ.
ರಾಹುಲ್ ಗಿಂತ ಮೊದಲು ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಸಹ ಮೋದಿ ಮೇಲೆ ವಾಗ್ದಾಳಿ ಮಾಡಿದ್ದರು. ಮಾನವ ತಾನು ತಪ್ಪು ಮಾಡಿಕೊಂಡು ಅದನ್ನು ದೇವರ ಮೇಲೆ ಹಾಕುವ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ