
ನವದೆಹಲಿ (ನ. 09): ದೇಶದ ಅತೀ ಶ್ರೀಮಂತ ದೇಗುಲಗಳಲ್ಲಿ ಒಂದಾದ ತಿರುವನಂತಪುರಂನ ಪದ್ಮನಾಭಸ್ವಾಮಿ ದೇಗು ಲದ ನೆಲ ಮಾಳಿಗೆಯಲ್ಲಿ ರುವ ಸಂಪತ್ತನ್ನು ಪತ್ತೆ ಹಚ್ಚಬೇಕೆಂದು 2011 ರಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಈಗ ಪುರಿಯ ಜಗನ್ನಾಥ ದೇಗುಲದ ಬಗ್ಗೆಯೂ ಇಂಥಹದ್ದೊಂದು ಆದೇಶ ನೀಡಿದೆ.
ಅಯೋಧ್ಯೆ ತೀರ್ಪು: ವಿವಾದ ಇರುವುದೇ 2.77 ಎಕರೆ ಭೂಮಿಗಾಗಿ!
ಒಡಿಶಾದ ಒಳಗೂ ಹೊರಗೂ ಪುರಿ ಜಗನ್ನಾಥ ದೇಗುಲಕ್ಕೆ ಸುಮಾ ರು 60,418 ಎಕರೆ ಅಂದರೆ 244.5 ಚದರ ಕಿ.ಮೀ ಭೂಮಿ ಇದ್ದು, ಇದು ಪುರಿ ಪಟ್ಟಣಕ್ಕಿಂತ 15 ಪಟ್ಟು ಹೆಚ್ಚು. ದೇಗುಲದ ಸುಪರ್ದಿಯಲ್ಲಿ ಹಲವು ಕ್ವಾರಿ ಹಾಗೂ ಗಣಿ ಗಾರಿಕೆಗಳಿದ್ದು, ಲೈಸೆನ್ಸ್ ಪಡೆದವರು ದೇಗುಲಕ್ಕೆ ಹಣ ಪಾವತಿ ಮಾಡುತ್ತಿಲ್ಲ ಎನ್ನುವುದು ನ್ಯಾಯಾಲಯದ ಗಮನಕ್ಕೆ ಬಂದಿದೆ. ಹಾಗಾಗಿ ಉಳಿದ ಭೂ ಆಸ್ತಿಗಳ ದಾಖಲೆಗಳನ್ನು ಸಲ್ಲಿಕೆ ಮಾಡಿ ಎಂದು ಸುಪ್ರೀಂ ಹೇಳಿದೆ.
ನ್ಯಾ. ಅರುಣ್ ಮಿಶ್ರಾ, ನ್ಯಾ. ಎಂಆರ್ ಶಾ ಹಾಗೂ ನ್ಯಾ.ರವೀಂದ್ರ ಭಟ್ ಅವರಿದ್ದ ಪೀಠ ನಿರ್ದೇಶನ ನೀಡಿದ್ದು, ಆರು ತಿಂಗಳೊಳಗೆ ರಾಜ್ಯದ ಒಳಗೂ ಹೊರಗೂ ಇರುವ ದೇಗುಲದ ಭೂಮಿಗಳ ಬಗ್ಗೆ ದಾಖಲೆಗಳನ್ನು ಸಲ್ಲಿಸ ಬೇಕು. ಅಲ್ಲದೇ ಅವುಗಳ ಬಳಕೆ ಹಾಗೂ ಅದರಿಂದ ಬರುವ ಆದಾಯ, ಬರಬೇಕಿರುವ ಆದಾಯದ ಬಗ್ಗೆಯೂ ಮಾಹಿತಿ ನೀಡಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ