ಕಾಂಗ್ರೆಸ್ ಗಣ್ಯರು ಪಂಜಾಬ್ ಸಿಎಂ ಪುತ್ರನ ವಿವಾಹದಲ್ಲಿ ಭಾಗಿ, ನವಜೋತ್ ಸಿಂಗ್ ಸಿಧು ಗೈರು!

Published : Oct 11, 2021, 04:18 PM IST
ಕಾಂಗ್ರೆಸ್ ಗಣ್ಯರು ಪಂಜಾಬ್ ಸಿಎಂ ಪುತ್ರನ ವಿವಾಹದಲ್ಲಿ ಭಾಗಿ, ನವಜೋತ್ ಸಿಂಗ್ ಸಿಧು ಗೈರು!

ಸಾರಾಂಶ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಂಜಾಬ್ ಸಿಎಂ ಪುತ್ರ ನವಜಿತ್ ಸಿಂಗ್ ಸರಳ ವಿವಾಹದಲ್ಲಿ ವೈಹಾಕಿ ಜೀವನಕ್ಕೆ ಕಾಲಿಟ್ಟ ಚರಣಜಿತ್ ಪುತ್ರ ಕಾಂಗ್ರೆಸ್ ನಾಯಕರು ಭಾಗಿ, ನವಜೋತ್ ಸಿಂಗ್ ಸಿಧು ಗೈರು

ಪಂಜಾಬ್(ಅ.11): ಪಂಜಾಬ್(Punjab) ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನಿ(Charanjit Singh Channi) ಪುತ್ರ ನವಜಿತ್ ಸಿಂಗ್ ಸರಳವಾಗಿ ವೈವಾಹಿಕ(Marriage) ಜೀವನಕ್ಕೆ ಕಾಲಿಟ್ಟಿದ್ದಾರೆ. ಭಾನುವಾರ(ಅ.11) ಮೊಹಾಲಿಯ ಗುರುದ್ವಾರದಲ್ಲಿ ನಡೆದ ಸರಳ ವಿವಾಹ ಕಾರ್ಯಕ್ರಮದಲ್ಲಿ ನವಜಿತ್ ಸಿಂಗ್ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಮದುವೆ ಸಮಾರಂಭದಲ್ಲಿ ಪಂಜಾಬ್ ಕಾಂಗ್ರೆಸ್ ನಾಯಕರು, ಗಣ್ಯರು ಪಾಲ್ಗೊಂಡಿದ್ದರು. ಆದರೆ ನವಜೋತ್ ಸಿಂಗ್ ಸಿಧು(Navjot singh sidhu) ಮಾತ್ರ ಗೈರಾಗಿದ್ದಾರೆ. ಈ ಮೂಲಕ ಸಿಧು, ಕಾಂಗ್ರೆಸ್‌(Congress) ನಾಯಕರ ಜೊತೆಗಿನ ಮುನಿಸು ಹೆಚ್ಚಿಸಿದ್ದಾರೆ.

ನಡುನೀರಿನಲ್ಲಿ ಕೈ ಬಿಟ್ಟ ಸಿಧು: ಕೋಪಗೊಂಡ ಕಾಂಗ್ರೆಸ್‌ನಿಂದ ತಿರುಗೇಟು!

ಚರಣ್‌ಜಿತ್ ಸಿಂಗ್ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬೆನ್ನಲ್ಲೇ ಸಿಧು ಜೊತೆಗಿನ ವೈಮನಸ್ಸು ಹೆಚ್ಚಾಯಿತು. ಪಂಜಾಬ್ ಕಾಂಗ್ರೆಸ್ ಒಳಗಿನ ಒಳಜಗಳ ಹೆಚ್ಚಾಯಿತು. ಚರಣಜಿತ್ ಸಿಂಗ್ ಸಿಎಂ ಆಯ್ಕೆಗೆ ಒಕೆ ಎಂದಿದ್ದ ಸಿಧುಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಹೀಗಾಗಿ ಚರಣ್‌ಜಿತ್ ಸಿಂಗ್ ವಿರುದ್ಧ ವಿರೋಧ ಕಟ್ಟಿಕೊಂಡಿರುವ ನವಜೋತ್ ಸಿಂಗ್, ಸಿಎಂ ಪುತ್ರನ ಮದುವೆಗೆ ಗೈರಾಗಿದ್ದಾರೆ.

ನಿಂತಲ್ಲಿ ನಿಲ್ಲದ ಸಿಧು ಇತಿಹಾಸ, ಎಲ್ಲರ ವಿರುದ್ಧವೂ ಸದಾ ಮುನಿಸು!

ನವಜೋತ್ ಸಿಂಗ್ ಸಿಧು ನೇರವಾಗಿ ವೈಷ್ಣೋವಿ ದೇವಿ(Vaishno Devi) ಮಂದಿರಕ್ಕೆ ಭೇಟಿ ನೀಡಿದ್ದಾರೆ. ಇತ್ತ ಪುತ್ರನ ಮದುವೆ ಸಂಭ್ರಮವನ್ನು ಸಿಎಂ ಚರಣಜಿತ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

 

'ನಾನು ಮೊದಲೇ ಹೇಳಿದ್ದೆ...': ಸಿಧು ರಾಜೀನಾಮೆ ಬೆನ್ನಲ್ಲೇ ಮೌನ ಮುರಿದ ಕ್ಯಾಪ್ಟನ್!

ಜುಲೈ ತಿಂಗಳಲ್ಲಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷನಾಗಿ ನವಜೋತ್ ಸಿಂಗ್ ಸಿಧು ಆಯ್ಕೆಯಾಗಿದ್ದರು.  ಕಳೆದ ಹಲವು ವರ್ಷಗಳಿಂದ ಸಿಎಂ ಆಗಿದ್ದ ಕ್ಯಾಪ್ಟನ್ ಅಮರಿಂದರ್ ಸಿಂಗ್ ವಿರುದ್ಧ ಒಳಗೊಳಗೆ ಕತ್ತಿ ಮಸೆಯುತ್ತಿದ್ದ ಸಿಧು ಅಧ್ಯಕ್ಷನಾದ ಬಳಿಕ ಸೇಡು ತೀರಿಸಿಕೊಂಡರು. ಅಮರಿಂದರ್ ಸಿಂಗ್ ಸಿಎಂ ಸ್ಥಾನದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾದ ನವಜೋತ್ ಸಿಂಗ್, ಅಷ್ಟೇ ವೇಗದಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. 

ಪಂಜಾಬ್‌ ಕಾಂಗ್ರೆಸ್‌ಗೆ ಬಿಗ್ ಶಾಕ್: ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ನವಜೋತ್ ಸಿಂಗ್!

ಚರಣಜಿತ್ ಸಿಂಗ್ ಸಿಎಂ ಆದ ಬಳಿಕ ದಿಢೀರ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿಧು, ಕಾಂಗ್ರೆಸ್ ಪಕ್ಷದಲ್ಲಿ ಇರುವುದಾಗಿ ಘೋಷಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವ ಮೊದಲೇ ಪಂಜಾಬ್ ಕಾಂಗ್ರೆಸ್‌ನಿಂದ ಒಂದು ಕಾಲು ಹೊರಗಿಟ್ಟಿದ್ದ ಸಿಧು, ಆಮ್ ಆದ್ಮಿ ಪಕ್ಷದತ್ತ ಒಲವು ತೋರಿದ್ದರು. ಆಪ್ ಮೂಲಕ ಪಂಜಾಬ್ ಸಿಎಂ ಆಗುವ ಕನಸು ಕಂಡಿದ್ದರು. ಇದೀಗ ಅದೇ ಕನಸಿನಲ್ಲಿದ್ದಾರೆ ಅನ್ನೋದು ರಾಜಕೀಯ ಪಂಡಿತರ ಅಭಿಪ್ರಾಯ. ಇದೇ ಕಾರಣಕ್ಕೆ ಪಂಜಾಬ್ ಕಾಂಗ್ರೆಸ್ ವಿರೋಧಿ ನಾಯಕರಿಂದ ಸಿಧು ದೂರ ಉಳಿದಿದ್ದಾರೆ ಎಂದು ಹೇಳಲಾಗುತ್ತಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

18 ದಿನದಲ್ಲಿ 10 ಲಕ್ಷ ಪ್ರಯಾಣಿಕರ ಇಂಡಿಗೋ ಟಿಕೆಟ್‌ ರದ್ದು
ಬೆಂಗ್ಳೂರಲ್ಲಿ ಸಿ-130 ವಿಮಾನ ವಿರ್ವಹಣಾ ಕೇಂದ್ರಕ್ಕೆ ಶಂಕು