ಮರದ ಕೆಳಗೆ ಪುದುಚೇರಿ ವಿಧಾನಸಭೆ ಕಲಾಪ!

Published : Jul 26, 2020, 10:00 AM ISTUpdated : Jul 26, 2020, 04:49 PM IST
ಮರದ ಕೆಳಗೆ ಪುದುಚೇರಿ ವಿಧಾನಸಭೆ ಕಲಾಪ!

ಸಾರಾಂಶ

ಮರದ ಕೆಳಗೆ ಪುದುಚೇರಿ ವಿಧಾನಸಭೆ ಕಲಾಪ!| ಶಾಸಕಗೆ ಕೋವಿಡ್‌ ಹಿನ್ನೆಲೆಯಲ್ಲಿ ತುರ್ತು ಕ್ರಮ|  ವಿಧಾನಸಭೆ ಹಾಲ್‌ನಲ್ಲಿ ಸೋಂಕು ನಿವಾರಕ ಔಷಧ ಸಿಂಪಡಣೆ ಕಾರ್ಯ

ಪುದುಚೇರಿ(ಜು.26): ಪ್ರಾದೇಶಿಕ ಸಮತೋಲನ ಮತ್ತಿತರೆ ವಿಷಯಕ್ಕಾಗಿ ವಿಧಾನಸಭೆ ಅಧಿವೇಶನವನ್ನು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆಸುವುದು ಗೊತ್ತು. ಆದರೆ ಪುದುಚೇರಿಯಲ್ಲಿ ರಾಜ್ಯ ವಿಧಾನಸಭೆಯ ಕಲಾಪವನ್ನು ಬೇವಿನ ಮರದ ಕೆಳಗೆ ನಡೆಸಿದ ಅಚ್ಚರಿಯ ಘಟನೆ ಶನಿವಾರ ನಡೆದಿದೆ.

ಜು.20ರಿಂದ ಪಾಂಡಿಚೇರಿ ವಿಧಾನಸಭೆಯ ಬಜೆಟ್‌ ಅಧಿವೇಶನ ಆರಂಭವಾಗಿತ್ತು. ಆದರೆ ಶುಕ್ರವಾರ ರಾತ್ರಿ ವಿಪಕ್ಷದ ಎಸ್‌.ಎಸ್‌.ಜೆ. ಜಯಲಾಲ್‌ ಕೊರೋನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ವಿಧಾನಸಭೆ ಹಾಲ್‌ನಲ್ಲಿ ಸೋಂಕು ನಿವಾರಕ ಔಷಧ ಸಿಂಪಡಣೆ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಮತ್ತೊಂದೆಡೆ ಅಧಿವೇಶನ ಮುಂದೂಡವತೆಯೂ ಇರಲಿಲ್ಲ.

ಕೊರೋನಾ ಮಧ್ಯೆ ಬಿಎಸ್‌ ಯಡಿಯೂರಪ್ಪಗೆ ಎದುರಾಯ್ತು ಕೋರ್ಟ್ ಸಂಕಷ್ಟ

ಹೀಗಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಸ್ಪೀಕರ್‌ ವಿಧಾನಸಭೆಯ ಮುಂದಿನ ಆವರಣದ ಬೇವಿನ ಮರದ ಕೆಳಗೆ ಶಾಮಿಯಾನ ಕುರ್ಚಿ ಹಾಕಿಸಿ ಅಲ್ಲೇ ಅಧಿವೇಶನಕ್ಕೆ ವ್ಯವಸ್ಥೆ ಮಾಡಿದ್ದಾರೆ. ಹೀಗೆ ಮಧ್ಯಾಹ್ನ 1.30ರಿಂದ 3.30ರವರೆಗೆ ಕಲಾಪ ನಡೆಸಲಾಗಿದೆ. ಕಲಾಪದಲ್ಲಿ ಯಾವುದೇ ಚರ್ಚೆಯಿಲ್ಲದೆ 9 ಸಾವಿರ ಕೋಟಿ ರು. ಬಜೆಟ್‌ಗೆ ಒಪ್ಪಿಗೆ ಪಡೆದ ಬಳಿಕ ದಿನದ ಅನಿರ್ದಿಷ್ಟಾವಧಿಗೆ ಅಧಿವೇಶನ ಮುಂದೂಡಲಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್