ಜೋಶಿಮಠದ 233 ಕುಟುಂಬ ಸ್ಥಳಾಂತರ, ಬಿರುಕುಬಿಟ್ಟಿದೆ 826 ಮನೆ !

Published : Jan 15, 2023, 10:21 PM ISTUpdated : Jan 15, 2023, 10:33 PM IST
ಜೋಶಿಮಠದ  233 ಕುಟುಂಬ ಸ್ಥಳಾಂತರ, ಬಿರುಕುಬಿಟ್ಟಿದೆ 826 ಮನೆ !

ಸಾರಾಂಶ

ಉತ್ತರಖಂಡದ ಜೋಶಿಮಠದ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಇಂದು ಪ್ರಧಾನಿ ಕಚೇರಿ ಅಧಿಕಾರಿಗಳು ಜೋಶಿಮಠಕ್ಕೆ ತೆರಳಿ ಸಮೀಕ್ಷೆ ನಡೆಸಿದ್ದಾರೆ. ಇತ್ತ 233 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ.

ಡೆಹ್ರಾಡೂನ್‌(ಜ.15) : ದೇವಭೂಮಿ ಎಂದೇ ಜನಪ್ರಿಯವಾಗಿರುವ ಉತ್ತರಖಂಡ ಇದೀಗ ಡೇಂಜರ್ ಝೋನ್ ಆಗಿ ಮಾರ್ಪಾಡಾಗಿದೆ. ಇದು ಕೇವಲ ಉತ್ತರಖಂಡದಲ್ಲಿ ಎಂದು ಸಮಾಧಾನಪಡಬೇಕಾಗಿಲ್ಲ. ಕಾರಣ ದಿಕ್ಕು ದೆಸೆಯಿಲ್ಲದ ಅಭಿವೃದ್ಧಿ, ಪರಿಸರಕ್ಕೆ ವಿರುದ್ಧವಾಗಿ ಸಾಗುತ್ತಿರುವ ನಡೆಗಳೇ ಈ ದುರಂತಕ್ಕೆ ಕಾರಣವಾಗಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಕಚೇರಿ ಅಧಿಕಾರಿಗಳು, ಸ್ಥಳೀಯ ಅಧಿಕಾರಿಗಳ ಜೊತೆ ಜೋಶಿಮಠ ಸರ್ವೇ ಮಾಡಿದ್ದಾರೆ. ಜೋಶಿಮಠದ 826 ಮನಗಗಳು ಬಿರುಕು ಬಿಟ್ಟಿದೆ. ಇಧರಲ್ಲಿ 165 ಮನೆಗಳು ಅತ್ಯಂತ ಅಪಾಯಕಾರಿ ಪರಿಸ್ಥಿತಿಯಲ್ಲಿದೆ ಎಂದು ವರದಿ ನೀಡಲಾಗಿದೆ. ಇಂದು 17 ಕುಟಂಬಳು ಸೇರಿ ಒಟ್ಟು 233 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ.  

ಆದಿ ಶಂಕರಾಚಾರ್ಯರ ಪವಿತ್ರ ಕ್ಷೇತ್ರವಾದ ಉತ್ತರಾಖಂಡದ ಜೋಶಿಮಠದಲ್ಲಿ ಉಂಟಾಗಿರುವ ಬಿರುಕುಗಳು ಮತ್ತಷ್ಟುವಿಸ್ತಾರಗೊಂಡಿರುವುದರಿಂದ ಔಲಿ ರೋಪ್‌ವೇ ಬಳಿ ಇರುವ ಹೊಟೆಲ್‌ಗಳು ಒಂದನ್ನೊಂದು ಅಂಟಿಕೊಳ್ಳುವಷ್ಟುವಾಲಿಕೊಂಡಿವೆ.

 

ಜೋಶಿಮಠದ ಕುರಿತು ಹೇಳಿಕೆ ನೀಡುವಂತಿಲ್ಲ: ಸರ್ಕಾರಿ ಅಧಿಕಾರಿಗೆಳಿಗೆ ಕೇಂದ್ರ ತಾಕೀತು

ನಗರದಲ್ಲಿ ಬಿರುಕು ಬಿಟ್ಟಿರುವ ಮನೆಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದ್ದು, ಇದು 826ಕ್ಕೆ ತಲುಪಿದೆ. ಇದರಲ್ಲಿ 165 ಮನೆಗಳು ವಾಸಕ್ಕೆ ಯೋಗ್ಯವಲ್ಲ ಎಂದು ಗುರುತಿಸಲಾಗಿದೆ. 233 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಈ ಮೊದಲು ವಾಲಿಕೊಂಡಿದ್ದ ಮಲಾರಿ ಮತ್ತು ಮೌಂಟ್‌ ವೀವ್‌ ಹೋಟೆಲ್‌ಗಳ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ. ಈ ಹೊಟೆಲ್‌ಗಳಿಂದ 100 ಮೀ. ದೂರದಲ್ಲಿರುವ ಸ್ನೋ ಕ್ರೆಸ್ಟ್‌ ಮತ್ತು ಕೊಮೆಟ್‌ ಎಂಬ ಮತ್ತೆರಡು ಹೋಟೆಲ್‌ಗಳು ಭಾನುವಾರ ವಾಲಿಕೊಂಡಿವೆ. ಈ ಮೊದಲು ಈ 2 ಹೊಟೆಲ್‌ಗಳ ನಡುವಿನ ಅಂತರ 4 ಅಡಿಗಳಷ್ಟಿತ್ತು. ಈಗ ಅದು ಕೆಲವೇ ಇಂಚುಗಳಿಗೆ ಕಡಿಮೆಯಾಗಿದೆ. ಔಲಿ ರೋಪ್‌ವೇ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಸ್ಥಳದ ಸಮೀಪವೇ ಈ ದುರಂತ ಸಂಭವಿಸಿದೆ.

ರೋಪ್‌ವೇ ಬಳಿಯಲ್ಲೇ 4 ಇಂಚು ಅಗಲದ 20 ಅಡಿ ಉದ್ದವಿರುವ ಬಿರುಕು ಕಾಣಿಸಿಕೊಂಡಿದೆ ಎಂದು ರೋಪ್‌ವೇ ಎಂಜಿನಿಯರ್‌ ದಿನೇಶ್‌ ಭಟ್‌ ಹೇಳಿದ್ದಾರೆ.ಭೂಕಂಪಗಳು ಹಾಗೂ ಅಭಿವೃದ್ಧಿ ಕಾರ್ಯಗಳಿಂದಾಗಿ ಉತ್ತರಾಖಂಡದ ಜೋಶಿಮಠದಲ್ಲಿ ಭೂಕುಸಿತ ಸಂಭವಿಸಿದ್ದು, ವಾಸಕ್ಕೆ ಅಯೋಗ್ಯ ನಗರ ಎನಿಸಿಕೊಂಡಿದೆ. ಜೋಶಿಮಠ ಅಲ್ಲದೇ ರಾಜ್ಯದ ಇನ್ನೂ ಹಲವು ಸ್ಥಳಗಳು ಇದೇ ರೀತಿಯ ಭೂ ಕುಸಿತದ ಭೀತಿಗೆ ಒಳಗಾಗಿವೆ. ತೆಹ್ರಿ, ಮನಾ, ಧರಾಸು, ಹರ್ಷಿಲ್‌ ಗೌಚಾರ್‌, ಪಿತೋರ್‌ಗಢ ಮುಂತಾದ ಪ್ರದೇಶಗಳಲ್ಲೂ ಭೂಕುಸಿತ ಉಂಟಾಗುವ ಸಾಧ್ಯತೆಗಳು ದಟ್ಟವಾಗಿವೆ. ಜೋಶಿಮಠದಂತೆ ಹಿಮಾಲಯದ ತಪ್ಪಲಿನಲ್ಲಿರುವ ಈ ಸ್ಥಳಗಳಲ್ಲಿ ಕೈಗೊಂಡಿರುವ ಬೃಹತ್‌ ಕಾಮಗಾರಿಗಳು ಈ ದುರಂತಕ್ಕೆ ಕಾರಣವಾಗುವ ಸಾಧ್ಯತೆಗಳಿವೆ.

Joshimath Sinking: 12 ದಿನಗಳಲ್ಲಿ 5.4 ಸೆಂಟಿಮೀಟರ್‌ ಕುಸಿದ ಜೋಶಿಮಠ, ಇಸ್ರೋ ಸ್ಯಾಟಲೈಟ್‌ ಇಮೇಜ್‌!

ಜೋಶಿಮಠ ಅಲ್ಲದೇ ರಾಜ್ಯದ ಇನ್ನೂ ಹಲವು ಸ್ಥಳಗಳು ಇದೇ ರೀತಿಯ ಭೂ ಕುಸಿತದ ಭೀತಿಗೆ ಒಳಗಾಗಿವೆ. ತೆಹ್ರಿ, ಮನಾ, ಧರಾಸು, ಹರ್ಷಿಲ್‌ ಗೌಚಾರ್‌, ಪಿತೋರ್‌ಗಢ ಮುಂತಾದ ಪ್ರದೇಶಗಳಲ್ಲೂ ಭೂಕುಸಿತ ಉಂಟಾಗುವ ಸಾಧ್ಯತೆಗಳು ದಟ್ಟವಾಗಿವೆ. ಜೋಶಿಮಠದಂತೆ ಹಿಮಾಲಯದ ತಪ್ಪಲಿನಲ್ಲಿರುವ ಈ ಸ್ಥಳಗಳಲ್ಲಿ ಕೈಗೊಂಡಿರುವ ಬೃಹತ್‌ ಕಾಮಗಾರಿಗಳು ಈ ದುರಂತಕ್ಕೆ ಕಾರಣವಾಗುವ ಸಾಧ್ಯತೆಗಳಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂದು ರಾತ್ರಿ 8ರ ಒಳಗೆ ಟಿಕೆಟ್ ಮೊತ್ತ ಮರುಪಾವತಿಸಿ : ಇಂಡಿಗೋಗೆ ಕೇಂದ್ರ ಗಡುವು
India Latest News Live: ಆಯೋಧ್ಯೆಯ ಬಾಬ್ರಿ ಮಸೀದಿಯನ್ನೇ ಹೋಲುವಂತಹ ಮಸೀದಿಗೆ ಶಂಕು ಸ್ಥಾಪನೆ