'ನಾನು ಐಪಿಎಸ್‌ ಆಫೀಸರ್‌ ಆಗಿದ್ದೇನೆ..' ಅಮ್ಮನ ತಬ್ಬಿಕೊಂಡು ಹೇಳುವಾಗಲೇ ವ್ಯಕ್ತಿಯನ್ನ ಎತ್ತಾಕಿಕೊಂಡು ಹೋದ ಪೊಲೀಸ್!

Published : Sep 20, 2024, 10:03 PM IST
'ನಾನು ಐಪಿಎಸ್‌ ಆಫೀಸರ್‌ ಆಗಿದ್ದೇನೆ..' ಅಮ್ಮನ ತಬ್ಬಿಕೊಂಡು ಹೇಳುವಾಗಲೇ ವ್ಯಕ್ತಿಯನ್ನ ಎತ್ತಾಕಿಕೊಂಡು ಹೋದ ಪೊಲೀಸ್!

ಸಾರಾಂಶ

ಆರೋಪಿಯನ್ನು ಮಿಥಿಲೇಶ್‌ ಮಜಿ ಎಂದು ಗುರುತಿಸಲಾಗಿದೆ. ಐಪಿಎಸ್ ಅಧಿಕಾರಿಯ ಸಮವಸ್ತ್ರದ ಸಲುವಾಗಿ ಖೈರಾದ ಮಂಜೋ ಸಿಂಗ್ ಎಂಬಾತನಿಗೆ 2 ಲಕ್ಷ ರೂಪಾಯಿ ನೀಡಿದ್ದಾಗಿಯೂ ತಿಳಿಸಿದ್ದಾರೆ. ಪೊಲೀಸರು ಮಿಥಿಲೇಶ್‌ನನ್ನು ಬಂಧಿಸಲು ಹೋದಾಗ, 'ನಾನು ಐಪಿಎಸ್‌' ಎಂದೂ ಹೇಳಿದ್ದಾನೆ.

ಪಾಟ್ನಾ (ಸೆ.20): ಐಪಿಎಸ್‌ ಅಧಿಕಾರಿಯಂತೆ ನಟಿಸಿದ್ದ ಕಾರಣಕ್ಕಾಗಿ ಬಿಹಾರದ ಜಮುಯಿ ಜಿಲ್ಲೆಯ 18 ವರ್ಷದ ಯುವಕನನ್ನು ಪೊಲೀಸರು ಬಂದಿಸಿದ್ದಾರೆ. ಜಿಲ್ಲೆಯ ಸಿಕಂದರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಆರೋಪಿಯನ್ನು ಮಿಥಿಲೇಶ್‌ ಮಜಿ ಎಂದು ಗುರುತಿಸಲಾಗಿದೆ. ಐಪಿಎಸ್ ಅಧಿಕಾರಿಯ ಸಮವಸ್ತ್ರದ ಸಲುವಾಗಿ ಖೈರಾದ ಮಂಜೋ ಸಿಂಗ್ ಎಂಬಾತನಿಗೆ 2 ಲಕ್ಷ ರೂಪಾಯಿ ನೀಡಿದ್ದಾಗಿಯೂ ತಿಳಿಸಿದ್ದಾರೆ. ಪೊಲೀಸರು ಮಿಥಿಲೇಶ್‌ನನ್ನು ಬಂಧಿಸಲು ಹೋದಾಗ, 'ನಾನು ಐಪಿಎಸ್‌' ಎಂದೂ ಹೇಳಿದ್ದಾನೆ. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಎಸ್‌ಡಿಪಿಒ ಸತೀಶ್ ಸುಮನ್, “ನಕಲಿ ಐಪಿಎಸ್ ಅಧಿಕಾರಿಯಂತೆ ತಿರುಗಾಡುತ್ತಿದ್ದ ಯುವಕನನ್ನು ಸಿಕಂದರಾ ಪೊಲೀಸರು ಬಂಧಿಸಿದ್ದಾರೆ. ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಇದರಲ್ಲಿ ಭಾಗಿಯಾಗಿರುವ ಎಲ್ಲಾ ಗ್ಯಾಂಗ್ ಸದಸ್ಯರನ್ನು ಬಂಧಿಸಲಾಗುವುದು' ಎಂದಿದ್ದಾರೆ. ಸಮವಸ್ತ್ರದ ಜೊತೆಗೆ ಸಿಂಗ್ ನೀಡಿದ ಪಿಸ್ತೂಲ್ ಅನ್ನು ಮಾಂಝಿಯಿಂದ ವಶಪಡಿಸಿಕೊಳ್ಳಲಾಗಿದೆ.

“ಮನೋಜ್ ಸಿಂಗ್ ಅವರಿಗೆ ನಾನು 2 ಲಕ್ಷ ರೂಪಾಯಿ ಕೊಟ್ಟರೆ ನನಗೆ ಪೊಲೀಸ್ ಕೆಲಸ ಕೊಡಿಸುವುದಾಗಿ ಹೇಳಿದ್ದ. ಒಂದು ತಿಂಗಳ ಹಿಂದೆಯೇ ಅವರಿಗೆ ಹೆಚ್ಚಿನ ಮೊತ್ತ ನೀಡಿದ್ದೆ. ಖೈರಾ ಶಾಲೆಯ ಬಳಿ ನನಗೆ ಸಮವಸ್ತ್ರ ಮತ್ತು ಪಿಸ್ತೂಲ್ ಕೊಟ್ಟಿದ್ದರು. ಅಮ್ಮನಿಗೆ ವಿಷಯ ತಿಳಿಸಲು ಊರಿಗೆ ಬಂದಿದ್ದೆ. ಇದಾದ ಬಳಿಕ ಉಳಿದ 30,000 ರೂ.ಗಳನ್ನು ನೀಡಲು ಖೈರಾಗೆ ತೆರಳಿದ್ದೆ. ಈ ವೇಳೆ ಸಿಕಂದರಾ ಚೌಕ್‌ನಲ್ಲಿ ಪೊಲೀಸರು ನಮ್ಮನ್ನು ಹಿಡಿದರು' ಎಂದು ಮಿಥಿಲೇಶ್‌ ಮಾಂಝಿ ಹೇಳಿದ್ದಾನೆ.

Explainer: ಶೇ.90 ರಷ್ಟು ಹಿಂದೂಗಳೇ ಇರುವ ಸಂಪೂರ್ಣ ಗ್ರಾಮವೇ ತಮ್ಮದು ಎಂದ ವಕ್ಫ್‌ ಬೋರ್ಡ್‌, ಏನಿದು ಇಡೀ ವಿವಾದ!

ತಾನು ಐಪಿಎಸ್ ಅಧಿಕಾರಿಯಾಗಿದ್ದೇನೆ ಎಂದು ತನ್ನ ತಾಯಿಗೆ ತಿಳಿಸಲು ಪೊಲೀಸ್‌ ಯುನಿಫಾರ್ಮ್‌ ಮತ್ತು ಪಿಸ್ತೂಲ್‌ನೊಂದಿಗೆ ತನ್ನ ಸ್ವಗ್ರಾಮಕ್ಕೆ ಬಂದಿದ್ದ. ಈ ವೇಳೆ ಈತನನ್ನು ಬಂಧಿಸಲಾಗಿದೆ.ಬಂಧನಕ್ಕೂ ಮುನ್ನ ಸಿಕಂದರ ಚೌಕ್‌ನಲ್ಲಿ ಸುತ್ತಾಡುತ್ತಾ ತಾನು ಐಪಿಎಸ್ ಆಗಿರುವ ಬಗ್ಗೆ ಜನರಿಗೆ ಹೇಳುತ್ತಿದ್ದ. ಖುಷಿಯಲ್ಲಿ ಸಮೋಸ ಮತ್ತು ಇತರ ಆಹಾರವನ್ನು ಸೇವಿಸುತ್ತಿದ್ದ.  ಈ ವೇಳೆ ಈತನ ಚಟುವಟಿಕೆಗಳ ಬಗ್ಗೆ ಅನುಮಾನಗೊಂಡು ಪೊಲೀಸರಿಗೆ ಯಾರೋ ಒಬ್ಬರು ಮಾಹಿತಿ ನೀಡಿದ್ದರು.

ಪೊಲೀಸ್ ಠಾಣೆಯಲ್ಲೇ ಕಳ್ಳತನ, ವಶಪಡಿಸಿಟ್ಟಿದ್ದ 16 ಮದ್ಯದ ಬಾಟಲಿ ಕದ್ದೊಯ್ದ 6 ಮಹಿಳೆಯರು!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೇವಸ್ಥಾನದ ಕಾರ್ತಿಕ ದೀಪದ ಪರವಾಗಿ ತೀರ್ಪು ನೀಡಿದ ಜಡ್ಜ್‌, ಸೇಡು ತೀರಿಸಿಕೊಳ್ಳಲು ಮುಂದಾದ ತಮಿಳುನಾಡು ಸರ್ಕಾರ!
15 ವರ್ಷಗಳಿಂದ ನಾಪತ್ತೆ: ವಿಡಿಯೋ ವೈರಲ್ ಬಳಿಕ ಮರಳಿ ಕುಟುಂಬ ಸೇರಿದ ಮಾಜಿ ಯೋಧ