ಸಿಗರೇಟು ಸೇದುವ ಸೀತಾ ದೇವಿ, ದೇವರ ಅವಹೇಳನ ನಾಟಕ ಪ್ರದರ್ಶಿಸಿದ 5 ವಿದ್ಯಾರ್ಥಿಗಳು,ಪ್ರೊಫೆಸರ್ ಅರೆಸ್ಟ್ !

By Suvarna NewsFirst Published Feb 3, 2024, 9:57 PM IST
Highlights

ಸೀತಾ ದೇವಿ, ಲಕ್ಷ್ಣ, ರಾಮಾಯಣವನ್ನು ಅವಹೇಳನ ಮಾಡಿ ನಾಟಕ ಪ್ರದರ್ಶಿಸಿದ ಪುಣೆ ವಿಶ್ವವಿದ್ಯಾಲಯದ ಐವರು ವಿದ್ಯಾರ್ಥಿಗಳು, ಪ್ರೊಫೆಸರ್ ಅರೆಸ್ಟ್ ಆಗಿದ್ದಾರೆ.

ಪುಣೆ(ಫೆ.03) ಸಿಗರೇಟು ಸೇದುತ್ತಿರುವ ಸೀತಾ ದೇವಿ, ಅವಾಚ್ಯ ಶಬ್ದಗಳಿಂದ ಬಯುತ್ತಿರುವ ಲಕ್ಷ್ಮಣ ಒಳಗೊಂಡ ರಾಮಾಯವನ್ನೇ ಅಣಕಿಸುವ, ಹಿಂದೂ ದೇವರನ್ನು ಅವಹೇಳನ ಮಾಡುವ ನಾಟಕ ಪ್ರದರ್ಶನ ಭಾರಿ ವಿವಾದಕ್ಕೆ ಕಾರಣವಾಗಿದೆ. ಪುಣೆ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಈ ನಾಟಕ ಕೋಲಾಹಲ ಸೃಷ್ಟಿಸಿದೆ. ವಿವಾದ, ಆಕ್ರೋಶ ಹೆಚ್ಚಾಗುತ್ತಿದ್ದಂತೆ ಮಹಾರಾಷ್ಟ್ರ ಸರ್ಕಾರ ಮಧ್ಯಪ್ರವೇಶ ಮಾಡಿದೆ. ಇದೀಗ ನಾಟಕ ಪ್ರದರ್ಶಿಸಿದ ಐವರು ವಿದ್ಯಾರ್ಥಿಗಳು, ಪ್ರೊಫೆಸರನ್ನು ಪೊಲೀಸರು ಬಂಧಿಸಿದ್ದಾರೆ. 

ಪುಣೆ ಸಾವಿತ್ರಿಬಾಯಿ ಪುಲೆ ವಿಶ್ವವಿದ್ಯಾಲಯದ ಕಲಾ ಕೇಂದ್ರದಲ್ಲಿ ಈ ನಾಟಕ ಆಯೋಜನೆ ಮಾಡಲಾಗಿತ್ತು. ಪ್ರೊಫೆಸರ್ ನಿರ್ದೇಶಿತ ಈ ನಾಟಕವನ್ನು ಐವರು ವಿದ್ಯಾರ್ಥಿಗಳು ಪ್ರದರ್ಶನ ಮಾಡಿದ್ದರು. ಈ ನಾಟಕದಲ್ಲಿ ಸೀತಾ ದೇವಿ ಸಿಗರೇಟು ಸೇದುತ್ತಿರುವ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸುವ ಹಾಗೂ ಲಕ್ಷ್ಮಣ ಅತ್ಯಂತ ಕೆಟ್ಟ ಪದಗಳನ್ನು ಬಳಸಿ ನಾಟಕ ಪ್ರದರ್ಶಿಸಿದ್ದಾರೆ. 

Latest Videos

ಸೀತಾ ದೇವಿ ಬಾಯಲ್ಲಿ ಸಿಗರೇಟು, ರಾಮಾಯಣ ಅಣಕಿಸಿದ ವಿದ್ಯಾರ್ಥಿಗಳ ನಾಟಕ ವಿರುದ್ಧ ಭಾರಿ ಆಕ್ರೋಶ!

ರಾಮಾಯಣ, ಹಿಂದೂ ದೇವರನ್ನು ಅವಮಾನಿಸುವ ಈ ನಾಟಕ ಪ್ರದರ್ಶನಗೊಳ್ಳುತ್ತಿದ್ದಂತೆ ಎಬಿವಿಪಿ ವಿದ್ಯಾರ್ಥಿ ಸಂಘಟನೆ, ಆರ್‌ಆರ್‌ಎಸ್ ಮೂಲದ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೇರವಾಗಿ ವೇದಿಕೆಯತ್ತ ಆಗಮಿಸಿ ನಾಟಕ ನಿಲ್ಲಿಸಲು ಸೂಚಿಸಿದ್ದಾರೆ. ಇದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಎರಡು ಗುಂಪುಗಳ ನಡುವೆ ತಳ್ಳಾಟ-ನೂಕಾಟ ನಡೆದಿತ್ತು. ಕೊನೆಗೂ ನಾಟಕ ನಿಲ್ಲಿಸುವಲ್ಲಿ ಎಬಿವಿಪಿ ವಿದ್ಯಾರ್ಥಿ ಘಟಕ ಯಶಸ್ವಿಯಾಗಿತ್ತು. 

ಹಿಂದೂ ಧಾರ್ಮಿಕ ಭಾವನಗೆ ಧಕ್ಕೆ ತಂದ ಈ ನಾಟಕದ ವಿರುದ್ದ ಎಬಿವಿಪಿ ದೂರು ದಾಖಲಿಸಿತ್ತು. ಇತ್ತ ಹಿಂದೂ ದೇವರ ಅವಹೇಳನ ನಾಟಕದ ವಿಡಿಯೋ ಬಾರಿ ವೈರಲ್ ಆಗಿತ್ತು. ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಕಠಿಣ ಕ್ರಮಕ್ಕೆ ಮಹಾರಾಷ್ಟ್ರ ಸರ್ಕಾರ ಸೂಚನೆ ನೀಡಿತ್ತು. ಇದರ ಬೆನ್ನಲ್ಲೇ ಪೊಲೀಸರು ಪುಣೆ ವಿಶ್ವಿವಿದ್ಯಾಲಕ ಕಲಾ ಕೇಂದ್ರದ ಮುಖ್ಯಸ್ಥ ಪ್ರೊಫೆಸರ್ ಡಾ.ಪ್ರವೀಣ್ ಭೋಲೆ, ವಿದ್ಯಾರ್ಥಿಗಳಾದ ಭವೀಷ್ ಪಾಟಿಲ್, ಜಯ ಪಡ್ನೇಕರ್, ಪ್ರಥಮೇಶ್ ಸಾವಂತ್, ಖಷಿಕೇಶ್ ದಾಲ್ವಿ ಹಾಗೂ ಯಶ್ ಚಿಖ್ಲೆ ಅರೆಸ್ಟ್ ಆಗಿದ್ದಾರೆ.

ಯೇಸು ಹೊಗಳಿಕೆ..ಹಿಂದೂ ದೇವರುಗಳ ಬಗ್ಗೆ ಅಶ್ಲೀಲ ಮಾತು: ವ್ಯಕ್ತಿಯ ವಿಡಿಯೋ ವೈರಲ್‌

ಧಾರ್ಮಿಕ ಭಾವನೆಗೆ ಧಕ್ಕೆ ತರುವ ಉದ್ದೇಶ ತಮಗಿರಲಿಲ್ಲ ಅನ್ನೋ ಸ್ಪಷ್ಟನೆ ನೀಡಿದ್ದಾರೆ. ಆದರೆ ಇದರ ಹಿಂದೆ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರವು ಸ್ಪಷ್ಟ ಉದ್ದೇಶವಿದೆ ಎಂದು ಎಬಿವಿಪಿ ಹೇಳಿದೆ. ಇದೀಗ ದೇಶಾದ್ಯಂತ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಕಠಿಣ ಕ್ರಮ ಜರುಗಿಸುವಂತೆ ಒತ್ತಡ ಹೆಚ್ಚಾಗುತ್ತಿದೆ. 
 

click me!