
ನವದೆಹಲಿ(ಸೆ.04) ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ದಿಗ್ಗಜ ಪಂಡಿತ್ ಜಸ್ ರಾಜ್ ಅಪಾರ ಸಂಗೀತ ಸಂಪತ್ತನ್ನು ಬಿಟ್ಟು ಅಗಲಿದ್ದರು. ಪ್ರಧಾನಿ ನರೇಂದ್ರೆ ಮೋದಿ ಆದಿಯಾಗಿ ದಿಗ್ಗಜರು ಸಾಧಕನಿಗೆ ನಮನ ಸಲ್ಲಿಸಿದ್ದರು.
ಪಂಡಿತ್ ಜಸ್ ರಾಜ್ ಪುತ್ರಿ ದುರ್ಗಾ ಜಸ್ ರಾಜ್ ಅವರಿಗೆ ವೈಯಕ್ತಿಕವಾಗಿ ಸಂತಾಪ ಪತ್ರ ಬರೆದಿರುವ ಪ್ರಧಾನಿ ಮೋದಿ ಜಸ್ ರಾಜ್ ಸಂಗೀತ ಸಾಧನೆಯನ್ನು ಕೊಂಡಾಡಿದ್ದಾರೆ.
ಸಂಗೀತ ಲೋಕವನ್ನೇ ಆವರಿಸಿಕೊಂಡಿದ್ದ ಜಸ್ ರಾಜ್ ಅವರ ಅಗಲಿಕೆ ತುಂಬಲಾರದ ನಷ್ಟ. ಅವರ ಗಾನ ಆಸ್ವಾದನೆ ಬೇರೆ ಲೋಕಕ್ಕೆ ಕೊಂಡೊಯ್ತುತ್ತಿತ್ತು ಎಂದು ಸ್ಮರಿಸಿಕೊಂಡಿದ್ದಾರೆ.
ಶಾಸ್ತ್ರೀಯ ಸಂಗೀತ ಲೋಕ ಎಲ್ಲರನ್ನು ಒಳಕ್ಕೆ ಬಿಟ್ಟುಕೊಳ್ಳುವುದಿಲ್ಲ. ಆದರೆ ಜಸ್ ರಾಜ್ ದಿಗ್ಗಜರಾಗಿ ಕಾಣಿಸಿಕೊಂಡಿದ್ದರು. ನಮ್ಮ ಸ್ಮರಣೆಯಲ್ಲಿ ಅವರು ಸದಾ ಇರುತ್ತಾರೆ ಎಂದು ಮೋದಿ ಹೇಳಿದ್ದಾರೆ.
ಭಾರತದ ಸರ್ವೋಚ್ಛ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ ಹಾಗೂ ಪದ್ಮಭೂಷಣ್ ಪುರಸ್ಕಾರಕ್ಕೆ ಗಾಯಕ ಪಾತ್ರವಾಗಿದ್ದು ಅಮೆರಿಕದ ನ್ಯೂ ಜರ್ಸಿಯಲ್ಲಿ ನಿಧನರಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ