ಭಾರತೀಯ ಕಾಲಮಾನ ಪುನರುತ್ಥಾನದ ಪ್ರಯತ್ನ: ವಿಕ್ರಮಾದಿತ್ಯ ವೈದಿಕ ಗಡಿಯಾರಕ್ಕೆ ಪ್ರಧಾನಿ ಚಾಲನೆ

Published : Mar 01, 2024, 08:24 AM IST
ಭಾರತೀಯ ಕಾಲಮಾನ ಪುನರುತ್ಥಾನದ ಪ್ರಯತ್ನ: ವಿಕ್ರಮಾದಿತ್ಯ ವೈದಿಕ ಗಡಿಯಾರಕ್ಕೆ ಪ್ರಧಾನಿ ಚಾಲನೆ

ಸಾರಾಂಶ

ಭಾರತೀಯ ಕಾಲಮಾನದಂತೆ ಸಮಯವನ್ನು ಸೂಚಿಸುವ ಉಜ್ಜಯಿನಿಯ ವಿಕ್ರಮಾದಿತ್ರ ವೈದಿಕ ಗಡಿಯಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಚಾಲನೆ ನೀಡಿದರು. ಪ್ರಸ್ತುತ ಗ್ರೀನ್‌ವಿಚ್ ಮೂಲಕ ನಿರ್ಧರಿಸಲಾಗುತ್ತಿರುವ ಜಾಗತಿಕ ಸಮಯಕ್ಕೆ ಪರ್ಯಾಯವಾಗಿ ಭಾರತೀಯ ಸಂಪ್ರದಾಯದ ಮತ್ತೊಂದು ಕಾಲಮಾನವನ್ನು ಜಗತ್ತಿಗೆ ಪರಿಚಯಿಸುವ ಉದ್ದೇಶದೊಂದಿಗೆ ಈ ಗಡಿಯಾರದ ಯಂತ್ರವನ್ನು ಪುನರಾಭಿವೃದ್ಧಿ ಮಾಡಿ ಉದ್ಘಾಟಿಸಲಾಗಿದೆ.

ಭೋಪಾಲ್: ಭಾರತೀಯ ಕಾಲಮಾನದಂತೆ ಸಮಯವನ್ನು ಸೂಚಿಸುವ ಉಜ್ಜಯಿನಿಯ ವಿಕ್ರಮಾದಿತ್ರ ವೈದಿಕ ಗಡಿಯಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಚಾಲನೆ ನೀಡಿದರು. ಪ್ರಸ್ತುತ ಗ್ರೀನ್‌ವಿಚ್ ಮೂಲಕ ನಿರ್ಧರಿಸಲಾಗುತ್ತಿರುವ ಜಾಗತಿಕ ಸಮಯಕ್ಕೆ ಪರ್ಯಾಯವಾಗಿ ಭಾರತೀಯ ಸಂಪ್ರದಾಯದ ಮತ್ತೊಂದು ಕಾಲಮಾನವನ್ನು ಜಗತ್ತಿಗೆ ಪರಿಚಯಿಸುವ ಉದ್ದೇಶದೊಂದಿಗೆ ಈ ಗಡಿಯಾರದ ಯಂತ್ರವನ್ನು ಪುನರಾಭಿವೃದ್ಧಿ ಮಾಡಿ ಉದ್ಘಾಟಿಸಲಾಗಿದೆ. ಭಾರತೀಯ ಕಾಲಮಾನ ಪದ್ಧತಿ ಅತ್ಯಂತ ಪುರಾತನ, ಸೂಕ್ಷ್ಮ, ದೋಷರಹಿತ, ಕರಾರುವಕ್ಕಾದ ಮತ್ತು ನಂಬಿಕೆಗೆ ಅರ್ಹವಾದ ಸಮಯ ನಿರ್ಧಾರಕವಾಗಿದೆ.

ವಿಶೇಷತೆಯೇನು?:
300 ವರ್ಷಗಳ ಹಿಂದೆ ಭಾರತದ ಮಧ್ಯಭಾಗದಲ್ಲಿರುವ ಉಜ್ಜಯಿನಿಯಲ್ಲಿರುವ 'ಸಮಯ ನಿರ್ಧಾರಕ ಯಂತ್ರ'ದ ಮೂಲಕ ಸಮಯವನ್ನು ನಿರ್ಧರಿಸಲಾಗುತ್ತಿತ್ತು. ಬಳಿಕ ಅದನ್ನು ಗ್ರೀನ್‌ವಿಚ್‌ಗೆ ಸ್ಥಳಾಂತರ ಮಾಡಿದ್ದರಿಂದ ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಮಧ್ಯರಾತ್ರಿಯಿಂದ ದಿನವನ್ನು ಆರಂಭ ಮಾಡಲಾಗುತ್ತಿತ್ತು. ಆದರೆ ಇದರ ಬದಲು ಸೂರ್ಯೋದಯ ವೇಳೆ ದಿನದ ಆರಂಭವಾಗಿ ಅದೇ ವೇಳೆ ದಿನಾಂಕ ಬದಲಿಸಬೇಕು ಎಂಬ ಉದ್ದೇಶದಿಂದ ವಿಕ್ರಮಾದಿತ್ಯ ವೈದಿಕ ಗಡಿಯಾರಕ್ಕೆ ಚಾಲನೆ ನೀಡಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದು 'ಕಾಲಮಾನ ನಿರ್ಧಾರಕ' ಆಗಬೇಕು ಎಂಬುದನ್ನು ಪ್ರತಿಪಾದಿಸಲು ಭಾರತಕ್ಕೆ ಅನುಕೂಲ ಮಾಡಿಕೊಡಲಿದೆ.

ಫೆ.24 ಮೋದಿಗೆ ಸ್ಮರಣೀಯ ದಿನ, 22 ವರ್ಷ ಹಿಂದೆ ಮೊದಲ ಬಾರಿಗೆ ಚುನಾವಣೆ ಸ್ಪರ್ಧಿಸಿದ್ದ ಪ್ರಧಾನಿ!

ಗಡಿಯಾರದಲ್ಲಿ ಏನಿದೆ?
ವಿಕ್ರಮಾದಿತ್ಯ ವೈದಿಕ ಗಡಿಯಾರದಲ್ಲಿ ಭಾರತೀಯ ಪಂಚಾಂಗ ಪದ್ಧತಿಯ ಎಲ್ಲ ಅಂಶಗಳೂ ಅಡಕವಾಗಿವೆ. ಪ್ರಮುಖವಾಗಿ ಸಂವತ್ಸರ, ಮಾಸ, ಗ್ರಹಗಳ ಸ್ಥಿತಿ, ಚಂದ್ರನ ಸ್ಥಿತಿ, ಪರ್ವಗಳು, ಶುಭಾಶುಭ ಮುಹೂರ್ತಗಳು, ಗತಿ, ನಕತ್ರ, ಸೂರ್ಯ ಮತ್ತು ಚಂದ್ರ ಗ್ರಹಣಗಳನ್ನು ಕರಾರುವಕ್ಕಾಗಿ ಈ ಗಡಿಯಾರದ ಮೂಲಕ ತಿಳಿಯಬಹುದಾಗಿದೆ. ಅಲ್ಲದೆ ಆಕಾಶಕಾಯ ಗಳ ಚಲನೆಯ ಆಧಾರದ ಮೇಲೆ ಕರಾರುವಕ್ಕಾಗಿ ಸಮಯವನ್ನು ಲೆಕ್ಕ ಮಾಡಲಾಗುತ್ತದೆ.

500 ವರ್ಷಗಳಿಂದಲೂ ಈ ಚರ್ಚಲ್ಲಿ ನೇತಾಡ್ತಿದೆ ಮೃತದೇಹ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್