
ನವದೆಹಲಿ(ಜೂ.13): ಕೊರೋನಾ ಸಂಬಂಧೀ ತಂತ್ರಜ್ಞಾನದ (ಲಸಿಕೆ, ಚಿಕಿತ್ಸೆ ಸೇರಿದಂತೆ) ಮೇಲೆ ಬೌದ್ಧಿಕ ಹಕ್ಕು ಹೊಂದುವುದನ್ನು ವಿರೋಧಿಸಿ ಭಾರತವು ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ಮಂಡಿಸಿದ ಗೊತ್ತುವಳಿ ಬೆಂಬಲಿಸಬೇಕು ಎಂದು ಜಿ-7 ದೇಶ ಪ್ರಧಾನಿ ನರೇಂದ್ರ ಮೋದಿ ಕೋರಿದ್ದಾರೆ. ಅಲ್ಲದೆ, ‘ಒಂದು ಭೂಮಿ-ಒಂದು ಆರೋಗ್ಯ’ ಇದು ನಮ್ಮ ಮಂತ್ರವಾಗಬೇಕು ಎಂದು ಕರೆ ನೀಡಿದ್ದಾರೆ.
ಕೇಂದ್ರ ಸಚಿವ ಸಂಪುಟಕ್ಕೆ ಜ್ಯೋತಿರಾದಿತ್ಯ ಸಿಂಧಿಯಾ ಎಂಟ್ರಿ?
ಜಿ-7 ದೇಶಗಳ ಶೃಂಗಸಭೆಯಲ್ಲಿ ಅತಿಥಿ ರಾಷ್ಟ್ರವಾಗಿ ಭಾರತಕ್ಕೆ ಬಂದಿದ್ದ ಆಹ್ವಾನ ಮನ್ನಿಸಿ ವರ್ಚುವಲ್ ಭಾಷಣ ಮಾಡಿದ ಮೋದಿ, ‘ಜಗತ್ತಿನ ಆರೋಗ್ಯ ಸುಧಾರಣೆ ಆಗಬೇಕು ಹಾಗೂ ಮುಂಬರುವ ಪಿಡುಗುಗಳು ದೂರ ಆಗಬೇಕು ಎಂದರೆ ಎಲ್ಲ ದೇಶಗಳ ಸಂಘಟಿತ ಪ್ರಯತ್ನ ಇರಬೇಕು.
ಖಾಸಗಿ ಆಸ್ಪತ್ರೆಗೆ 1.29 ಕೋಟಿ ಡೋಸ್, ಬಳಕೆ ಮಾಡಿದ್ದು 22 ಲಕ್ಷ ಮಾತ್ರ!
ಈ ನಿಟ್ಟಿನಲ್ಲಿ ಭಾರತಕ್ಕೆ ಇತ್ತೀಚಿನ ಕೊರೋನಾದ 2ನೇ ಅಲೆಯಲ್ಲಿ ಜಿ-7 ನೀಡಿದ ಬೆಂಬಲವೇ ಸಾಕ್ಷಿ. ಒಂದು ಭೂಮಿ-ಒಂದು ಆರೋಗ್ಯ ಎಂಬ ಸಂದೇಶವನ್ನು ಇಂದಿನ ಸಭೆ ನೀಡಬೇಕು’ ಎಂದು ಪ್ರಶಂಸಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ