7500ನೇ ಜನೌ​ಷಧಿ ಕೇಂದ್ರಕ್ಕೆ ಮೋದಿ ಚಾಲನೆ!

Published : Mar 08, 2021, 07:52 AM IST
7500ನೇ ಜನೌ​ಷಧಿ ಕೇಂದ್ರಕ್ಕೆ ಮೋದಿ ಚಾಲನೆ!

ಸಾರಾಂಶ

7500ನೇ ಜನೌ​ಷಧಿ ಕೇಂದ್ರಕ್ಕೆ ಮೋದಿ ಚಾಲನೆ| ಆರೋಗ್ಯ ಕ್ಷೇತ್ರ​ದ ಸುಧಾ​ರ​ಣೆ ಫಲವಾಗಿ ಬಡವರಿಗೆ ವಾರ್ಷಿಕ 50 ಸಾವಿ​ರ ಕೋಟಿ ಉಳಿ​ತಾ​ಯ

ನವ​ದೆ​ಹಲಿ​(ಮಾ.08): ಆರೋಗ್ಯ ಕ್ಷೇತ್ರ​ದಲ್ಲಿ ಕೇಂದ್ರ ಸರ್ಕಾರ ಕೈಗೊಂಡ ವಿವಿಧ ಸುಧಾ​ರಣಾ ಕ್ರಮ​ಗ​ಳಿಂದಾಗಿ ಬಡ​ವರ್ಗ ಮತ್ತು ಔಷ​ಧ​ಗ​ಳ ಅನಿ​ವಾ​ರ್ಯತೆ ಇರು​ವ​ವರು ವಾರ್ಷಿಕ 50 ಸಾವಿರ ಕೋಟಿ ರು. ಉಳಿ​ತಾಯ ಮಾಡು​ವಂತಾ​ಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ​ಪಾ​ದಿ​ಸಿ​ದ್ದಾರೆ.

ಬಡ ಜನ​ರಿಗೆ ಕೈಗೆ​ಟು​ಕುವ ದರ​ದಲ್ಲಿ ಔಷ​ಧ​ಗಳು, ವೈದ್ಯ​ಕೀಯ ಚಿಕಿತ್ಸೆ ಹಾಗೂ ವೈದ್ಯ​ಕೀಯ ಸಾಧ​ನ​ಗಳ ದರ​ವನ್ನೂ ತಮ್ಮ ಸರ್ಕಾರ ಇಳಿಕೆ ಮಾಡಿದ್ದು, ಇದ​ರಿಂದ ಬಡ​ಜ​ನ​ರಿಗೆ ಅನು​ಕೂ​ಲ​ವಾ​ಗಿದೆ ಎಂದು ಹೇಳಿ​ದ್ದಾರೆ. ಶಿಲ್ಲಾಂಗ್‌​ನ​ಲ್ಲಿ​ರುವ ಈಶಾನ್ಯ ಭಾರ​ತದ ಇಂದಿರಾ ಗಾಂಧಿ ಪ್ರಾದೇ​ಶಿಕ ಆರೋಗ್ಯ ಮತ್ತು ವೈದ್ಯ​ಕೀಯ ಸಂಸ್ಥೆ​(​ಎನ್‌​ಇ​ಜಿ​ಆ​ರ್‌​ಐ​ಎ​ಚ್‌​ಎಂಎ​ಸ್‌)ನಲ್ಲಿ ದೇಶದ 7500ನೇ ಜನೌ​ಷಧಿ ಕೇಂದ್ರವನ್ನು ಮೋದಿ ಅವರು ​ವಿ​ಡಿಯೋ ಕಾನ್ಫ​ರೆನ್ಸ್‌ ಮೂಲಕ ಉದ್ಘಾ​ಟಿ​ಸಿ ಬಳಿಕ ಅವರು ಮಾತನಾಡಿದರು.

ಜನ​ರಿಗೆ ಕೈಗೆ​ಟು​ಕುವ ದರ​ದಲ್ಲಿ ಪೂರೈ​ಸ​ಲಾ​ಗು​ತ್ತಿ​ರುವ ಜನೌ​ಷಧಿ ಯೋಜ​ನೆಯು ದೇಶದ ಉದ್ದ​ಗ​ಲಕ್ಕೂ ಹಬ್ಬಿ​ಕೊ​ಳ್ಳು​ತ್ತಿದೆ. ಜನೌ​ಷಧಿ ಯೋಜನೆ ಬಗ್ಗೆ ಅರಿವು ಮೂಡಿ​ಸಲು ಮಾ.1ರಿಂದ ಮಾ.7ರವ​ರೆಗೆ ಜನೌ​ಷಧಿ ವಾರ​ವಾಗಿ ಆಚ​ರಿ​ಸ​ಲಾ​ಗಿದೆ. ಅಲ್ಲದೆ ಜನೌ​ಷಧಿ ಕೇಂದ್ರ​ಗ​ಳಿಂದ ಈಶಾನ್ಯ ಭಾರ​ತದ ಗುಡ್ಡ​ಗಾಡು ಮತ್ತು ಬುಡ​ಕಟ್ಟು ಜನಾಂಗ​ದ​ವ​ರಿಗೆ ಭಾರೀ ಅನು​ಕೂ​ಲ​ವಾ​ಗಿದೆ ಎಂದು ಹೇಳಿ​ದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೋದಿಗೆ ಸಮಾಧಿ ತೋಡುತ್ತೇವೆ: ಕಾಂಗ್ರೆಸ್ ವೋಟ್ ಚೋರಿ ಸಮಾವೇಶದಲ್ಲಿ ಕಾರ್ಯಕರ್ತರ ಘೋಷಣೆ
'ಇದಪ್ಪಾ ಕಾನ್ಪಿಡೆನ್ಸ್‌ ಅಂದ್ರೆ..' ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಬರೋ ಮುನ್ನವೇ 12 ಸಾವಿರ ಲಡ್ಡು ಮಾಡಿಸಿಟ್ಟ ಸ್ಪರ್ಧಿ!