'ಕೊರೋನಾ ಪಿಡುಗಿನ ಅಂತ್ಯದತ್ತ ಭಾರತ'

Published : Mar 08, 2021, 07:41 AM IST
'ಕೊರೋನಾ ಪಿಡುಗಿನ ಅಂತ್ಯದತ್ತ ಭಾರತ'

ಸಾರಾಂಶ

ಕೊರೋನಾ ಪಿಡುಗಿನ ಅಂತ್ಯದತ್ತ ಭಾರತ| ಈ ಹಂತದಲ್ಲಿ ರಾಜಕೀಯ ಬಿಟ್ಟು ಎಲ್ಲರೂ ಲಸಿಕೆ ಪಡೆಯಬೇಕು| ಪಿಡುಗು ಅಂತ್ಯಗೊಳಿಸಲು ಇದು ಮಹತ್ವದ ಘಟ್ಟ: ಹರ್ಷವರ್ಧನ್‌

ನವ​ದೆ​ಹ​ಲಿ(ಮಾ.08): ಮಹಾ​ಮಾರಿ ಕೊರೋನಾ ವೈರಸ್‌ ಅಟ್ಟ​ಹಾ​ಸದ ಕೊನೇ ಹಂತ​ದಲ್ಲಿ ನಾವಿ​ದ್ದೇವೆ. ಕೊರೋನಾ ವಿರು​ದ್ಧದ ಈ ಹೋರಾ​ಟ​ದಲ್ಲಿ ನಾವು ಜಯ​ಶೀ​ಲ​ರಾ​ಗ​ಲಿ​ದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿ​ವ ಡಾ. ಹರ್ಷ​ವ​ರ್ಧನ್‌ ಹೇಳಿ​ದ್ದಾರೆ.

ದೆಹ​ಲಿ​ಯಲ್ಲಿ ಭಾನು​ವಾರ ನಡೆದ 62ನೇ ದೆಹ​ಲಿ ರಾಜ್ಯ ವೈದ್ಯ​ಕೀಯ ಕಾನ್ಫ​ರೆ​ನ್ಸ್‌ ಉದ್ದೇ​ಶಿಸಿ ಮಾತ​ನಾ​ಡಿ​ದ ಡಾ. ವ​ರ್ಧನ್‌ ಅವರು, ‘ಕೊರೋನಾ ವಿರು​ದ್ಧದ ನಮ್ಮ ಈ ಹೋರಾಟ ಯಶ​ಸ್ವಿ​ಯಾ​ಗ​ಬೇ​ಕಾ​ದರೆ ಲಸಿಕೆ ಅಭಿ​ಯಾ​ನ​ದಲ್ಲಿ ರಾಜ​ಕೀಯ ಬೆರೆ​ಸ​ಬಾ​ರದು. ಲಸಿ​ಕೆ ಅಭಿ​ವೃ​ದ್ಧಿಯ ಹಿಂದಿನ ವಿಜ್ಞಾ​ನದ ಶ್ರಮ​ದ ಮೇಲೆ ಭರ​ವ​ಸೆ​ಯಿ​ಡ​ಬೇಕು ಹಾಗೂ ಕೊನೆ​ಯ​ದಾಗಿ ನಮ್ಮ ಸುತ್ತ​ಮು​ತ್ತ​ಲಿ​ರು​ವ​ವ​ರಿಗೆ ಅವರ ಸರದಿ ಬಂದಾಗ ಲಸಿಕೆ ಪಡೆ​ಯಬೇಕೆಂಬ ಮಂತ್ರ​ಗ​ಳನ್ನು ಪಾಲಿ​ಸ​ಬೇ​ಕು’ ಎಂದು ಹೇಳಿ​ದರು.

ಇಡೀ ವಿಶ್ವವೇ ಕೊರೋ​ನಾ​ದಿಂದ ಮುಕ್ತ​ವಾ​ಗದ ಹೊರತು ಭಾರತ ದೇಶ ಈ ಸೋಂಕಿ​ನಿಂದ ಮುಕ್ತ​ವಾ​ಗ​ಲಾರದು. ಬಡ ಮತ್ತು ಅಭಿ​ವೃ​ದ್ಧಿ​ಶೀಲ ರಾಷ್ಟ್ರ​ಗ​ಳಲ್ಲಿ ಸೋಂಕಿನ ತೀವ್ರತೆ ಮುಂದು​ವ​ರಿ​ದ್ದಲ್ಲಿ, ಆ ಸೋಂಕು ನಮ್ಮ ದೇಶಕ್ಕೂ ವ್ಯಾಪಿ​ಸ​ಲಿದೆ. ಹೀಗಾಗಿ ಪ್ರತಿ​ಯೊ​ಬ್ಬ​ರಿಗೂ ಲಸಿಕೆ ಪೂರೈ​ಕೆ​ಯಾ​ಗ​ಬೇ​ಕಿದೆ ಎಂದು ಅಭಿ​ಪ್ರಾ​ಯ​ಪ​ಟ್ಟಿ​ದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನಾಯ​ಕ​ತ್ವ​ದ​ಲ್ಲಿ 62 ರಾಷ್ಟ್ರ​ಗ​ಳಿಗೆ 5.51 ಕೋಟಿ ಲಸಿ​ಕೆ​ಯ ಡೋಸ್‌​ಗ​ಳನ್ನು ಪೂರೈ​ಸಿದ ಭಾರ​ತವು ವಿಶ್ವದ ಔಷ​ಧಾ​ಲ​ಯ​ವಾಗಿ ಮಾರ್ಪ​ಟ್ಟಿತು ಎಂದು ಪ್ರತಿ​ಪಾ​ದಿ​ಸಿ​ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ಪಹಲ್ಗಾಂ ಉಗ್ರ ದಾಳಿ: ಕೋರ್ಟ್‌ಗೆ 1597 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ
Vote Chori Row: 'ನಿಮ್ಮ ಮನಸಿಗೆ ಏನಾಗಿದೆ?..' ಪ್ರತಿಪಕ್ಷಗಳಿಗೆ ದೇವೇಗೌಡ ಎಚ್ಚರಿಕೆ