ಪವನ್ ಕಲ್ಯಾಣ ಭಾಷಣದ ನಡುವೆ ಟವರ್ ಏರಿದವರನ್ನು ಕೆಳಕ್ಕಿಳಿಯಲು ಸೂಚಿಸಿದ ಮೋದಿ!

Published : Mar 17, 2024, 07:06 PM IST
ಪವನ್ ಕಲ್ಯಾಣ ಭಾಷಣದ ನಡುವೆ ಟವರ್ ಏರಿದವರನ್ನು ಕೆಳಕ್ಕಿಳಿಯಲು ಸೂಚಿಸಿದ ಮೋದಿ!

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಆಂಧ್ರ ಪ್ರದೇಶದಲ್ಲಿ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ಮೋದಿ ಭಾಷಣಕ್ಕೆ ಕಿಕ್ಕಿರಿದ ಜನ ಸೇರಿದ್ದರು.  ಈ ವೇಳೆ ಜನರು ಭಾಷಣ ಕೇಳಲು ಟವರ್ ಏರಿದ್ದಾರೆ.ಈ ವೇಳೆ ಮೋದಿ, ಟವರ್ ಹತ್ತಿದವರು ಕೆಳಕ್ಕೆ ಇಳಿಯಲು ಮನವಿ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.  

ಆಂಧ್ರ ಪ್ರದೇಶ(ಮಾ.17) ಲೋಕಸಭಾ ಚುನಾವಣೆ ಘೋಷಣೆಯಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಆಂಧ್ರ ಪ್ರದೇಶದ ಪಲ್ನಾಡು ಜಿಲ್ಲೆಯಲ್ಲಿ ಬೃಹತ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಎನ್‌ಡಿಗೆ ಮೈತ್ರಿಗೆ ಆಗಮಿಸಿದ ಚಂದ್ರಬಾಬು ನಾಯ್ಡು, ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಸೇರಿದಂತೆ ಪ್ರಮುಖರು ಮೋದಿ ಜೊತೆ ವೇದಿಕೆ ಹಂಚಿಕೊಂಡಿದ್ದರು. ಪವನ್ ಕಲ್ಯಾಣ್ ಚುನಾವಣಾ ಪ್ರಚಾರ ಭಾಷಣ ಆರಂಭಿಸಿದ ಕೆಲ ಹೊತ್ತಲ್ಲೇ ಮೋದಿ ಮಧ್ಯಪ್ರವೇಶಿಸಿದ್ದಾರೆ. ಪವನ್ ಕಲ್ಯಾಣ್ ಭಾಷಣ ನಿಲ್ಲಿಸಿ, ಮೈಕ್ ಮೂಲಕ, ಟವರ್ ಹತ್ತಿದ ಎಲ್ಲರೂ ಕೆಳಕ್ಕೆ ಇಳಿಯುವಂತೆ ಸೂಚಿಸಿದ್ದಾರೆ.  ವಿದ್ಯುತ್ ತಂತಿಗಳು ಹಾದು ಹೋಗುತ್ತಿದೆ. ಹೀಗಾಗಿ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಪೊಲೀಸರು ಈ ರೀತಿ ಟವರ್ ಏರಲು ಅವಕಾಶ ನೀಡಬಾರದು ಎಂದು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಮೈದಾನ ಕಾರ್ಯಕರ್ತರು, ಬೆಂಬಲಿಗರಿಂದ ತುಂಬಿ ತುಳುಕುತ್ತಿತ್ತು. ಪ್ರಧಾನಿ ನರೇಂದ್ರ ಮೋದಿ, ನಾಯಕ ಪವನ್ ಕಲ್ಯಾಣ್ ಭಾಷಣ ಕೇಳಲು ಜನರು ಮೈದಾನದಲ್ಲಿನ ಟವರ್ ಏರಿದ್ದಾರೆ. ಮೈದಾನದಲ್ಲಿ ಬೆಳಕಿನ ವ್ಯವಸ್ಥೆಗಾಗಿ ಟವರ್ ಹಾಕಲಾಗಿತ್ತು. ಈ ಟವರ್ ಹತ್ತಿದ್ದಾರೆ. ವಿದ್ಯುತ್ ವೈಯರ್‌ಗಳಿರುವ ಈ ಟವರ್ ಹತ್ತಿ ಮೋದಿ, ಪವನ್ ಕಲ್ಯಾಣ್, ಬಿಜೆಪಿಗೆ ಜೈಕಾರ ಹಾಕಿದ್ದಾರೆ. 

Lok sabha election 2024: ಬಿಸಲುನಾಡು ಕಲಬುರಗಿ ಆಯ್ತು, ನಾಳೆ ಮಲೆನಾಡಿಗೆ ಪ್ರಧಾನಿ ಮೋದಿ!

ಪವನ್ ಕಲ್ಯಾಣ್ ಭಾಷಣ ಆರಂಭಿಸಿದ ಬೆನ್ನಲ್ಲೇ ಟವರ್ ಹತ್ತಿರುವುದನ್ನು ಗಮನಿಸಿದ ಮೋದಿ, ನೇರವಾಗಿ ಪವನ್ ಬಳಿ ಭಾಷಣ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಬಳಿಕ ಮೈಕ್ ಪಡೆದುಕೊಂಡು, ಟವರ್ ಹತ್ತಿದ ಎಲ್ಲರೂ ಕೆಳಕ್ಕಿಳಿಯಲು ಸೂಚಿಸಿದ್ದಾರೆ. ತಕ್ಷಣವೆ ಪೊಲೀಸರು ಟವರ್ ಹತ್ತಿದ ಎಲ್ಲರನ್ನೂ ಕೆಳಕ್ಕಳಿಸಲು ಸೂಚಿಸಿದ್ದಾರೆ.

 

 

ಇತ್ತ ಚಂದ್ರಬಾಬು ನಾಯ್ಡು ಕೈಮುಗಿದ ಟವರ್ ಇಳಿಯುವಂತೆ ಸನ್ನೆ ಮಾಡಿದ್ದಾರೆ. ಟವರ್ ಮೇಲೆ ವಿದ್ಯುತ್ ವಯರ್‌ಗಳಿವೆ.ನೀವು ಟವರ್ ಹತ್ತಿದರೆ ಹೇಗೆ? ನಿಮ್ಮ ಪ್ರತಿಯೊಂದು ಜೀವ ನಮಗೆ ಮುಖ್ಯ ಎಂದು ಮೋದಿ ಹೇಳಿದ್ದಾರೆ. ಬಹುತೇಕರು ಕೆಳಕ್ಕಿಳಿದರೆ, ಕೆಲವರು ಮಾತ್ರ ಜೈಕಾರ ಹಾಕುತ್ತಲೇ ಟವರ್ ಮೇಲಿದ್ದರು. ಮಾಧ್ಯಮಗಳು ನಿಮ್ಮ ಫೋಟೋ ತೆಗೆದಿದ್ದಾರೆ. ಇದೀಗ ನೀವು ಕೆಳಕ್ಕಿಳಿಯಿರಿ ಎಂದು ಮೋದಿ ಮನವಿ ಮಾಡಿದ್ದಾರೆ. ಪೊಲೀಸರೇ ಈ ಟವರ್ ಹತ್ತಲು ಬಿಡಬೇಡಿ. ಅನಾಹುತಗಳು ಸಂಭವಸಿದರೆ ಅದರ ನೋವು ತಡೆದುಕೊಳ್ಳಲು ಸಾಧ್ಯವಾಗಲ್ಲ ಎಂದು ಮೋದಿ ಮನವಿ ಮಾಡಿದ್ದಾರೆ.

Narendra Modi: ನಾಳೆ ಶಿವಮೊಗ್ಗಕ್ಕೆ ಪ್ರಧಾನಿ ಮೋದಿ ಭೇಟಿ: 2 ಲಕ್ಷಕ್ಕೂ ಹೆಚ್ಚು ಜನರು ಭಾಗಿಯಾಗುವ ನಿರೀಕ್ಷೆ !

ಟವರ್ ಮೇಲಿನಿಂದ ಕೆಳಗಿಳಿದ ಬಳಿಕ ಪವನ್ ಕಲ್ಯಾಣ್ ಭಾಷಣ ಮುಂದುವರಿಸಿದ್ದಾರೆ. ಆಂಧ್ರ ಪ್ರದೇಶದಲ್ಲಿ ಮೋದಿ ಅಬ್ಬರದ ಚುನಾವಣಾ ಪ್ರಚಾರ ನಡೆಸಿದ್ದಾರೆ. ಆಂಧ್ರ ಪ್ರದೇಶದಲ್ಲಿ ಬಿಜೆಪಿ 6 ಲೋಕಸಭಾ ಕ್ಷೇತ್ರ ಹಾಗೂ 10 ವಿಧಾನಸಬಾ ಸ್ಥಾನದಲ್ಲಿ ಸ್ಪರ್ಧಿಸುತ್ತಿದೆ. ಎನ್‌ಡಿಎ ಮೈತ್ರಿ ಪಕ್ಷ ಟಿಡಿಪಿ 17 ಲೋಕಸಭಾ ಕ್ಷೇತ್ರ ಹಾಗೂ 144 ವಿಧಾನಸಭಾ ಸ್ಥಾನದಲ್ಲಿ ಸ್ಪರ್ಧಿಸುತ್ತಿದೆ. ಇನ್ನು ಪವನ್ ಕಲ್ಯಾಣ ಜನಸೇನಾ ಪಕ್ಷ 2 ಲೋಕಸಭಾ ಸ್ಥಾನ ಹಾಗೂ 21 ವಿಧಾನಸಭಾ ಕ್ಷೇತ್ರಗಳಿಗೆ ಸ್ಪರ್ಧಿಸುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?