ಚಂಡಮಾರುತ ಬಳಿಕ ಕಡಲ ತೀರದಲ್ಲಿ ಚಿನ್ನ ಹೆಕ್ಕಲು ಜನರ ದೌಡು!

Published : Nov 29, 2020, 09:50 AM IST
ಚಂಡಮಾರುತ ಬಳಿಕ ಕಡಲ ತೀರದಲ್ಲಿ ಚಿನ್ನ ಹೆಕ್ಕಲು ಜನರ ದೌಡು!

ಸಾರಾಂಶ

ಚಂಡಮಾರುತದ ಬಳಿಕ ಸಮುದ್ರದಲ್ಲಿ ಮುಳುಗಿದ ಚಿನ್ನಾಭರಣಗಳು ದಡದಲ್ಲಿ ಬಂದು ಬಿದ್ದಿವೆ ಎಂದು ಜನರು ಕಡಲ ತೀರಗಳಿಗೆ ದೌಡಾಯಿಸಿದ್ದಾರೆ.

ಹೈದರಾಬಾದ್‌ (ನ.29): ಎರಡು ದಿನಗಳ ಹಿಂದೆ ದಕ್ಷಿಣದ ರಾಜ್ಯಗಳಲ್ಲಿ ಅವಾಂತರ ಸೃಷ್ಟಿಸಿದ್ದ ನಿವಾರ್‌ ಚಂಡ ಮಾರುತ ಚಿನ್ನವನ್ನು ಹೊತ್ತು ತಂದಿದೆ ಎನ್ನುವ ಗಾಳಿ ಸುದ್ದಿಯಿಂದಾಗಿ, ಆಂಧ್ರಪ್ರದೇಶದ ಸಮುದ್ರ ತೀರದಲ್ಲಿ ಜನ ಗುಂಪುಗೂಡಿದ್ದಾರೆ.

 ಆಂಧ್ರದ ಪೂರ್ವ ಗೋದಾವರಿ ಜಿಲ್ಲೆಯ ಎರಡು ಸಮುದ್ರ ತೀರಕ್ಕೆ ಜನ ಮುಂಜಾನೆಯಿಂದಲೇ ಬಂದು ಚಿನ್ನ ಹುಡುಕಾಟಲ್ಲಿ ತೊಡಗಿಕೊಂಡಿದ್ದಾರೆ.

ನಿವಾರ್‌ ಚಂಡ ಮಾರುತದ ರಭಸಕ್ಕೆ, ಈ ಹಿಂದೆ ಸಮುದ್ರದಲ್ಲಿ ಲೀನವಾಗಿದ್ದ ಹಳೇ ದೇಗುಲಗಳ ಚಿನ್ನ ಹಾಗೂ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ದಡಕ್ಕೆ ಬಂದಿದೆ ಎನ್ನುವ ಗಾಳಿ ಸುದ್ದಿ ನಂಬಿ ಜನ ತಂಡೋಪ ತಂಡವಾಗಿ ಸಮುದ್ರ ತೀರಕ್ಕೆ ಆಗಮಿಸಿ ಚಿನ್ನಕ್ಕಾಗಿ ಶೋಧ ನಡೆಸಿದ್ದಾರೆ. 

ಚಿನ್ನ ನೀನು ಬಲು ಚೆನ್ನ, ಮತ್ತೆ ಕುಸಿದ ಚಿನ್ನದ ದರ: ಹೀಗಿದೆ ಇಂದಿನ ದರ! ..

ಚಿನ್ನಕ್ಕಾಗಿ ಸ್ಥಳೀಯ ಮೀನುಗಾರರ ನಡುವೆ ಹೋಯ್‌ ಕೈ ಕೂಡ ನಡೆದಿದೆ. ಕೆಲವರು ತಮಗೆ ಚಿನ್ನ ಸಿಕ್ಕಿದೆ ಎಂದು ಹೇಳಿಕೊಂಡಿದ್ದು, ಯಾವುದೂ ಅಧಿಕೃತಗೊಂಡಿಲ್ಲ. ಪ್ರತೀ ಚಂಡಮಾರುತದ ಬಳಿಕ ಸಮುದ್ರ ತೀರಕ್ಕೆ ಚಿನ್ನ ಸಹಿತ ಅಮೂಲ್ಯ ವಸ್ತುಗಳು ದಡಕ್ಕೆ ಬರುತ್ತದೆ ಎನ್ನುವುದು ಸ್ಥಳೀಯ ಮೀನುಗಾರರ ನಂಬಿಕೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಿಲಯನ್ಸ್ ರಿಟೇಲ್‌ ಫ್ಯಾಷನ್ ಮತ್ತು ಲೈಫ್‌ಸ್ಟೈಲ್ ವಿಭಾಗದ ಸಿಒಒ ಆಗಿ ವಿನೀತ್ ಜೈನ್ ನೇಮಕ, ಈ ಹಿಂದೆ ಎಲ್ಲಿದ್ರು?
ಭಾರತೀಯ ಮಾರ್ಕೆಟ್‌ಗೆ Gen Z ಜನಾಂಗ ಎಷ್ಟು ದೊಡ್ಡ ಆಸ್ತಿ? ಅವರು ಶಾಪಿಂಗ್‌ ಮಾಡೋದು ಹೇಗೆ ಗೊತ್ತಾ?