ಮೆನುನಿಂದ ಮಾಂಸಹಾರ ಮಾಯ: ಸಂಸತ್‌ ಕ್ಯಾಂಟೀನ್‌ ಶೀಘ್ರ ಸಸ್ಯಾಹಾರಿ!

Published : Jan 15, 2020, 10:18 AM IST
ಮೆನುನಿಂದ ಮಾಂಸಹಾರ ಮಾಯ:	ಸಂಸತ್‌ ಕ್ಯಾಂಟೀನ್‌ ಶೀಘ್ರ ಸಸ್ಯಾಹಾರಿ!

ಸಾರಾಂಶ

ಸಂಸತ್‌ ಕ್ಯಾಂಟೀನ್‌ ಶೀಘ್ರ ಸಸ್ಯಾಹಾರಿ!| ಮೆನುನಿಂದ ಮಾಂಸಾಹಾರ ಮಾಯ ಸಾಧ್ಯತೆ| ಕ್ಯಾಂಟೀನ್‌ ಗುತ್ತಿಗೆ ಮುಂಚೂಣಿಯಲ್ಲಿ ಹಲ್ದೀರಾಂ, ಬಿಕರ್‌ನೇವಾಲಾ| ಈ ಎರಡೂ ಕಂಪನಿಗಳು ಸಸ್ಯಾಹಾರಿ

ನವದೆಹಲಿ[ಜ.15]: ಸಂಸತ್‌ ಕ್ಯಾಂಟೀನ್‌ನಲ್ಲಿ ಸಂಸದರು, ಸಂಸತ್‌ ಸಿಬ್ಬಂದಿ ಹಾಗೂ ಇತರರಿಗೆ ನೀಡಲಾಗುತ್ತಿದ್ದ ಸಬ್ಸಿಡಿ ಸೌಲಭ್ಯ ಹೋಗಿದ್ದಾಯ್ತು. ಈಗ ಮಾಂಸಾಹಾರ ಕೂಡ ‘ಮೆನು’ದಿಂದ ಮಾಯವಾಗುವ ಸಾಧ್ಯತೆ ಇದೆ.

ಸಂಸತ್‌ ಭವನದಲ್ಲಿನ ಕ್ಯಾಂಟೀನ್‌ಗಳನ್ನು ಈವರೆಗೂ ಭಾರತೀಯ ರೈಲ್ವೆಯ ಅಂಗ ಸಂಸ್ಥೆಯಾದ ‘ಐಆರ್‌ಸಿಟಿಸಿ’ ನಿರ್ವಹಿಸಿಕೊಂಡು ಬರುತ್ತಿದೆ. ಆದರೆ ಐಆರ್‌ಸಿಟಿಸಿ ಒದಗಿಸುತ್ತಿರುವ ಆಹಾರದ ಗುಣಮಟ್ಟದ ಬಗ್ಗೆ ಸಂಸದರು ಹಾಗೂ ಇತರರಿಂದ ಆಕ್ಷೇಪ ವ್ಯಕ್ತವಾಗುತ್ತಿತ್ತು.

ತಲೆ ಎತ್ತಲಿದೆ ಹೊಸ ಸಂಸತ್‌ ಭವನ: 75ನೇ ಸ್ವಾತಂತ್ರ್ಯ ದಿನಕ್ಕೆ ಉಡುಗೊರೆ!

ಆದ್ದರಿಂದ ಹೊಸ ಕಂಪನಿಗಳಿಗೆ ಆಹಾರ ಗುತ್ತಿಗೆ ನೀಡುವ ಸಾಧ್ಯತೆ ಇದೆ. ‘ಬಿಕಾನೇರ್‌ವಾಲಾ’ ಹಾಗೂ ‘ಹಲ್ದೀರಾಂ’ ಕಂಪನಿಗಳು ಬಿಡ್ಡಿಂಗ್‌ನಲ್ಲಿ ಮುಂಚೂಣಿಯಲ್ಲಿದ್ದು, ಎರಡರಲ್ಲಿ ಒಂದಕ್ಕೆ ಗುತ್ತಿಗೆ ಹೊಣೆ ಹೋಗುವ ನಿರೀಕ್ಷೆಯಿದೆ. ಈ ಎರಡೂ ಕಂಪನಿಗಳು ಸಸ್ಯಾಹಾರಿ ಆಹಾರ ಮಾತ್ರ ಸಿದ್ಧಪಡಿಸುವ ಕಂಪನಿಗಳಾಗಿವೆ. ಹೀಗಾಗಿ ಇದೇ ಕಂಪನಿಗಳಗೆ ಗುತ್ತಿಗೆ ಸಿಕ್ಕರೆ ಸಂಸತ್‌ ಕ್ಯಾಂಟೀನ್‌ ‘ಮೆನು’ನಲ್ಲಿ ಮಾಂಸಾಹಾರ ಸಿಗಲಿಕ್ಕಿಲ್ಲ ಎಂದು ಹೇಳಲಾಗಿದೆ.

ಈಗ ಸಂಸದೀಯ ಆಹಾರ ಸಮಿತಿ ಅಸ್ತಿತ್ವದಲ್ಲಿಲ್ಲ. ಹೀಗಾಗಿ ಗುತ್ತಿಗೆಯನ್ನು ಯಾರಿಗೆ ನೀಡಬೇಕೆಂದು ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪೌರತ್ವ ಸಿಗುವ ಮುನ್ನವೇ ವೋಟರ್‌ ಲಿಸ್ಟ್‌ನಲ್ಲಿ ಹೆಸರು, ಸೋನಿಯಾ ಗಾಂಧಿಗೆ ನೋಟಿಸ್‌ ಕೊಟ್ಟ ದೆಹಲಿ ಕೋರ್ಟ್!
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ