
ರಾಯ್ಪುರ : ಛತ್ತೀಸ್ಗಢದ ಕೊನೆಯ ನಕ್ಸಲ್ ನಾಯಕ ಎನ್ನಿಸಿಕೊಂಡಿರುವ ಹಿರಿಯ ಮಾವೋವಾದಿ ಕಮಾಂಡರ್ ಪಾಪಾ ರಾವ್, ತನ್ನ ತಂಡದ ಸದಸ್ಯರ ಜತೆ ಮಂಗಳವಾರ ಶರಣಾಗಿದ್ದಾನೆ.
ಈ ಬಗ್ಗೆ ಮಾತನಾಡಿರುವ ಉಪಮುಖ್ಯಮಂತ್ರಿ ವಿಜಯ್ ಶರ್ಮಾ, ರಾವ್ ಶರಣಾಗತಿ ನಕ್ಸಲ್ ವಿರೋಧಿ ಹೋರಾಟದಲ್ಲಿ ಮಹತ್ವದ ಹೆಜ್ಜೆ. ಈ ಮೂಲಕ ಮಾ.31ರ ವೇಳೆಗೆ ಛತ್ತೀಸ್ಗಢ ನಕ್ಸಲ್ ಮುಕ್ತವಾಗಲಿದೆ ಎಂದಿದ್ದಾರೆ.
ಕಬೀರ್ಧಾಮ್ ಜಿಲ್ಲೆಯ ಇಲ್ಲಿಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಪಾ ರಾವ್ ಶಸ್ತ್ರಾಸ್ತ್ರ ತ್ಯಾಗದಿಂದ ರಾಜ್ಯದಲ್ಲಿ ಯಾವುದೇ ನಕ್ಸಲ್ ಕಾರ್ಯಚಟುವಟಿಕೆ ಇರುವುದಿಲ್ಲ ಎಂದು ಸ್ಪಷ್ಟವಾಗುತ್ತದೆ. ಇದು ಎಡಪಂಥೀಯ ಉಗ್ರರ ಜತೆ ರಾಜ್ಯ ನಡೆಸುತ್ತಿರುವ ಹೋರಾಟಕ್ಕೆ ಹೊಸ ಮೈಲಿಗಲ್ಲಾಗಲಿದೆ ಎಂದಿದ್ದಾರೆ.
ಬಸ್ತರ್ ಪ್ರದೇಶದಲ್ಲಿ ಸಕ್ರಿಯವಾಗಿದ್ದ ಪಾಪಾ ರಾವ್ ತನ್ನ ಮಾವೋವಾದಿಗಳ ದಂಡಕಾರಣ್ಯ ವಿಶೇಷ ವಲಯ ಸಮಿತಿಯ 12ಕ್ಕೂ ಹೆಚ್ಚು ಸದಸ್ಯರ ಜತೆ ಶರಣಾಗಿದ್ದಾನೆ. ಆತ 25 ವರ್ಷಗಳಿಂದ ನಕ್ಸಲ್ ಹೋರಾಟದಲ್ಲಿದ್ದು, ಹಲವು ದುಷ್ಕೃತ್ಯಗಳಲ್ಲಿ ಭಾಗಿಯಾಗಿ 76ಕ್ಕೂ ಹೆಚ್ಚು ಸೈನಿಕರ ಸಾವಿಗೆ ಕಾರಣನಾಗಿದ್ದಾನೆ. ಈತನ ಹಿಡಿದು ಕೊಟ್ಟವರಿಗೆ 25 ಲಕ್ಷ ರು. ಬಹುಮಾನ ಘೋಷಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ