ಭಾರತದ ದಾಳಿ ಭೀತಿಗೆ ಪಾಕಿಸ್ತಾನದ ಮುಂಚೂಣಿ ನೆಲೆಗಳು ಖಾಲಿ!

Published : May 01, 2025, 06:41 AM ISTUpdated : May 01, 2025, 06:43 AM IST
ಭಾರತದ ದಾಳಿ ಭೀತಿಗೆ ಪಾಕಿಸ್ತಾನದ ಮುಂಚೂಣಿ ನೆಲೆಗಳು ಖಾಲಿ!

ಸಾರಾಂಶ

ಪಹಲ್ಗಾಂ ನರಮೇಧ ಪ್ರತೀಕಾರವಾಗಿ ಭಾರತದ ತಿರುಗೇಟಿಗೆ ಬೆದರಿರುವ ಪಾಕಿಸ್ತಾನ, ಇದೀಗ ಭಾರತದೊಂದಿಗಿನ ಗಡಿ ನಿಯಂತ್ರಣ ರೇಖೆ ಬಳಿಯಲ್ಲಿನ ತನ್ನ ಸೇನೆಯ ಮುಂಚೂಣಿ ಪಡೆಗಳನ್ನು ತೆರವುಗೊಳಿಸಿದೆ. ಜೊತೆಗೆ ಗಡಿ ಪೋಸ್ಟ್‌ಗಳ ಬಳಿ ಹಾಕಿದ್ದ ತನ್ನ ದೇಶದ ಧ್ಜಜಗಳನ್ನು ತೆರವುಗೊಳಿಸಿದೆ ಎಂದು ವರದಿಗಳು ತಿಳಿಸಿವೆ.

ನವದೆಹಲಿ (ಮೇ.1): ಪಹಲ್ಗಾಂ ನರಮೇಧ ಪ್ರತೀಕಾರವಾಗಿ ಭಾರತದ ತಿರುಗೇಟಿಗೆ ಬೆದರಿರುವ ಪಾಕಿಸ್ತಾನ, ಇದೀಗ ಭಾರತದೊಂದಿಗಿನ ಗಡಿ ನಿಯಂತ್ರಣ ರೇಖೆ ಬಳಿಯಲ್ಲಿನ ತನ್ನ ಸೇನೆಯ ಮುಂಚೂಣಿ ಪಡೆಗಳನ್ನು ತೆರವುಗೊಳಿಸಿದೆ. ಜೊತೆಗೆ ಗಡಿ ಪೋಸ್ಟ್‌ಗಳ ಬಳಿ ಹಾಕಿದ್ದ ತನ್ನ ದೇಶದ ಧ್ಜಜಗಳನ್ನು ತೆರವುಗೊಳಿಸಿದೆ ಎಂದು ವರದಿಗಳು ತಿಳಿಸಿವೆ.

ಕಳೆದ 6 ದಿನಗಳಿಂದ ಪಾಕಿಸ್ತಾನ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿ ಭಾರತದ ಕಡೆ ಸತತವಾಗಿ ಗುಂಡಿನ ದಾಳಿ ನಡೆಸುತ್ತಿದೆ. ಅದಕ್ಕೆ ಪ್ರತಿಯಾಗಿ ಭಾರತ ಕೂಡಾ ಸೂಕ್ತ ತಿರುಗೇಟು ನೀಡಿದೆ. ಅದರ ಬೆನ್ನಲ್ಲೇ ಪಾಕ್‌ ಸರ್ಕಾರದ ಹಲವು ಸಚಿವರೇ ಭಾರತದ ದಾಳಿ ಖಚಿತ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: 50 ಡಿಗ್ರಿಗೆ ತಲುಪಲಿದೆ ಪಾಕ್‌ನ ತಾಪಮಾನ, ಇದು ಜಗತ್ತಿನಲ್ಲೇ ಹೆಚ್ಚು!

ಈ ಹಿನ್ನೆಲೆಯಲ್ಲಿ ದಾಳಿಯ ಭೀತಿಗೆ ಒಳಗಾಗಿರುವ ಪಾಕ್‌ ಸೇನೆ ಮುಂಜಾಗ್ರತಾ ಕ್ರಮವಾಗಿ ತನ್ನ ಮುಂಚೂಣಿ ಪಡೆಗಳನ್ನು ಹಿಂದಕ್ಕೆ ಪಡೆದಿದೆ ಎನ್ನಲಾಗಿದೆ. ಇದು ಸಂಭವನೀಯ ಯುದ್ಧಕ್ಕಿಂತ ಮೊದಲೇ ಪಾಕಿಸ್ತಾನ ಸೇನೆಯ ನೈತಿಕ ಸ್ಥೈರ್ಯ ಕುಸಿದಿರುವ ಸಂಕೇತ ಎಂದು ವಿಶ್ಲೇಷಿಸಲಾಗಿದೆ.

ಮತ್ತೊಂದೆಡೆ ರಾಜಧಾನಿ ಇಸ್ಲಾಮಾಬಾದ್‌, ವಾಣಿಜ್ಯ ರಾಜಧಾನಿ ಕರಾಚಿ ಸೇರಿದಂತೆ ಪ್ರಮುಖ ನಗರಗಳನ್ನು ಮೇ 2ರವರೆಗೂ ಸಂಚಾರ ನಿಷೇಧಿತ ವಲಯ ಎಂದು ಘೋಷಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ