ಆರ್ಥಿಕ ಸಂಕಷ್ಟದಲ್ಲಿದ್ದ ಪಾಕಿಸ್ತಾನದಲ್ಲಿ ಬೃಹತ್ ಚಿನ್ನದ ನಿಕ್ಷೇಪ ಪತ್ತೆ! ಅದರ ಮೌಲ್ಯ ಎಷ್ಟು ಸಾವಿರ ಕೋಟಿ ಗೊತ್ತಾ?

Published : Mar 05, 2025, 06:48 AM ISTUpdated : Mar 05, 2025, 11:36 AM IST
ಆರ್ಥಿಕ ಸಂಕಷ್ಟದಲ್ಲಿದ್ದ ಪಾಕಿಸ್ತಾನದಲ್ಲಿ ಬೃಹತ್ ಚಿನ್ನದ ನಿಕ್ಷೇಪ ಪತ್ತೆ! ಅದರ ಮೌಲ್ಯ ಎಷ್ಟು ಸಾವಿರ ಕೋಟಿ ಗೊತ್ತಾ?

ಸಾರಾಂಶ

ಆರ್ಥಿಕವಾಗಿ ಭಾರೀ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ಭಾರೀ ದೊಡ್ಡ ನಿಧಿಯೊಂದು ಸಿಕ್ಕಿದೆ. ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಸಿಂಧೂ ನದಿಯ ಪಾತ್ರದಲ್ಲಿ ಭಾರೀ ಪ್ರಮಾಣದ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಇದರ ಮೌಲ್ಯ 80000 ಕೋಟಿ ರು. ಇರಬಹುದು ಎಂದು ಸರ್ಕಾರ ಅಂದಾಜಿಸಿದೆ.

ಇಸ್ಲಾಮಾಬಾದ್‌ (ಮಾ.5): ಆರ್ಥಿಕವಾಗಿ ಭಾರೀ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ಭಾರೀ ದೊಡ್ಡ ನಿಧಿಯೊಂದು ಸಿಕ್ಕಿದೆ. ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಸಿಂಧೂ ನದಿಯ ಪಾತ್ರದಲ್ಲಿ ಭಾರೀ ಪ್ರಮಾಣದ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಇದರ ಮೌಲ್ಯ 80000 ಕೋಟಿ ರು. ಇರಬಹುದು ಎಂದು ಸರ್ಕಾರ ಅಂದಾಜಿಸಿದೆ.

ಚಿನ್ನದ ನಿಕ್ಷೇಪದ ಇರುವ ಕುರಿತು ಕಳೆದ ತಿಂಗಳೇ ಮಾಹಿತಿ ಇತ್ತಾದರೂ, ಆ ಮಾಹಿತಿಯನ್ನು ಇದೀಗ ಸರ್ಕಾರ ಖಚಿತಪಡಿಸಿದ್ದು, ಗಣಿಗಾರಿಕೆಗೆ ಹರಾಜು ಶುರು ಮಾಡುವಂತೆ ಸರ್ಕಾರ ಅಧಿಕಾರಿಗಳಿಗೆ ಸೂಚಿಸಿದೆ.

ಪಾಕಿಸ್ತಾನದ ಪಂಜಾಬ್‌ನ ಅಟೋಕ್‌ ಜಿಲ್ಲೆಯಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದ್ದು, ಇದನ್ನು ಗಣಿಗಾರಿಕೆ ಮತ್ತು ಹರಾಜು ಹಾಕಲು ಪ್ರಕ್ರಿಯೆಗಳು ನಡೆಯುತ್ತಿದೆ ಎಂದು ಚಿನ್ನದ ನಿರ್ವಹಣೆಯ ಹೊಣೆ ಹೊತ್ತಿರುವ ಪಾಕಿಸ್ತಾನದ ರಾಷ್ಟ್ರೀಯ ಎಂಜಿನಿಯರಿಂಗ್‌ ಸರ್ವೀಸಸ್‌ (ನೆಸ್‌ಪಾಕ್‌)ನ ನಿರ್ದೇಶಕ ಝರ್ಗಾಂ ಇಶಾಕ್‌ ಖಾನ್‌ ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಪಂಚದಲ್ಲೇ ಅತಿ ದೊಡ್ಡ ಚಿನ್ನದ ಗಣಿ: ಈ ದೇಶದಲ್ಲಿ ತೋಡಿದಷ್ಟು ಬಂಗಾರ!

ಈ ಚಿನ್ನವು ನಿಕ್ಷೇಪವು ಭಾರತದ ಹಿಮಾಲಯದ ತಪ್ಪಲಿನ ಸಿಂಧೂ ನದಿ ಮೂಲಕ ಪಾಕಿಸ್ತಾನಕ್ಕೆ ಹರಿದುಬಂದಿವೆ. ಸಾಮಾನ್ಯವಾಗಿ ದೊಡ್ಡ ಗಟ್ಟಿಯ ರೂಪದಲ್ಲಿರುವ ಚಿನ್ನವು, ನದಿಯಲ್ಲಿ ಸಾವಿರಾರು ಕಿ.ಮೀ ದೂರ ಹರಿದು ಬರುವ ವೇಳೆ ತನ್ನ ಆಕಾರವನ್ನು ಬದಲಾಯಿಸಿ, ಸಣ್ಣ ಸಣ್ಣ ಹರಳು ಅಥವಾ ಮರಳಿನ ರೂಪದಲ್ಲಿ ಪಾಕಿಸ್ತಾನದ ನದಿ ತೀರದಲ್ಲಿ ಸಂಗ್ರಹವಾಗಿದೆ ಎಂದು ಭೂಗರ್ಭಶಾಸ್ತ್ರಜ್ಞರು ಹೇಳಿದ್ದಾರೆ.

ಇಲ್ಲಿ ಚಿನ್ನ ಇರುವಿಕೆಯ ಸುದ್ದಿ ಹರಿದಾಡುತ್ತಿದ್ದಂತೆ ಗಣಿಗಾರಿಕೆ ಕಂಪನಿಗಳು ಪಂಜಾಬ್‌ಗೆ ಆಗಮಿಸಿದ್ದವು. ಚಿನ್ನ ತೆಗೆಯಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಭಾರಿ ಒತ್ತಡ ಹಾಕಿದ್ದವು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..