ಪಾಕಿಸ್ತಾನ ಗಢ ಗಢ: ಗಡಿಯಲ್ಲಿ ಯುದ್ಧ ವಿಮಾಗಳ ಹಾರಾಟ, ಮತ್ತಷ್ಟು ಕಣ್ಗಾವಲು!

Published : May 10, 2020, 03:17 PM ISTUpdated : May 10, 2020, 03:29 PM IST
ಪಾಕಿಸ್ತಾನ ಗಢ ಗಢ: ಗಡಿಯಲ್ಲಿ ಯುದ್ಧ ವಿಮಾಗಳ ಹಾರಾಟ, ಮತ್ತಷ್ಟು ಕಣ್ಗಾವಲು!

ಸಾರಾಂಶ

ಭಾರತ ಕಾರ್ಯಾಚರಣೆ ನಡೆಸಲಿದೆ ಎಂಬ ಭಯ| ಭಾರತದ ಗಡಿ ಪ್ರದೇಶದ ಬಳಿ ಪಾಕಿಸ್ತಾನ ವಾಯುಸೇನೆಯ ಕಣ್ಗಾವಲು| ಹಂದ್ವಾಡಾ ಉಗ್ರ ದಾಳಿಯ ಪ್ರತೀಕಾರದ ಬೆನ್ನಲ್ಲೇ ಪಾಕಿಸ್ತಾನದಿಂದ ಮತ್ತಷ್ಟು ಪೆಟ್ರೋಲಿಂಗ್

ಶ್ರೀನಗರ(ಮೇ.10): ವಿಶ್ವಾದ್ಯಂತ ಕೊರೋನಾ ಆತಂಕ ಹುಟ್ಟು ಹಾಕಿದೆ. ಭಾರತ ಸೇರಿದಂತೆ ಬಹುತೇಕ ಎಲ್ಲಾ ರಾಷ್ಟ್ರಗಳಿಗೂ ಕೊರೋನಾ ವ್ಯಾಪಿಸಿದ್ದು, ನೆರೆ ರಾಷ್ಟ್ರ ಪಾಕಿಸ್ತಾನದಲ್ಲೂ ಇದು ಅಪಾರ ಸಾವು ನೋವು ಉಂಟು ಮಾಡಿದೆ. ಈ ನಡುವೆ ಪಾಕಿಸ್ತಾನಕ್ಕೆ ಭಾರತದ ಭಯ ಕಾಡಲಾರಂಭಿಸಿದೆ. ಹೌದು ಜಮ್ಮು ಕಾಶ್ಮೀರದ ಹಂದ್ವಾಡಾ ಪ್ರದೇಶದಲ್ಲಿಭಾರತೀಯ ಯೋಧರ ಮೇಲೆ ನಡೆದಿದ್ದ ಉಗ್ರ ದಾಳಿ ಬಳಿಕ ಇದು ತನ್ನ ಗಡಿ ಪ್ರದೇಶದಲ್ಲಿ ಪೆಟ್ರೋಲಿಂಗ್(ಕಣ್ಗಾವಲು) ಹೆಚ್ಚಿಸಿದೆ.

ಪಿಒಕೆ ಹಿಡಿತಕ್ಕೆ ಭಾರತ ರಣತಂತ್ರ, ಹವಾಮಾನ ಮುನ್ಸೂಚನೆ ಪ್ರಸಾರ!

ಜಮ್ಮು ಕಾಶ್ಮೀರದ ಹಂದ್ವಾಡಾದಲ್ಲಿ ಉಗ್ರರೊಂದಿಗಿನ ಕಾಳಗದಲ್ಲಿ ಭಾರತೀಯ ಸೇನೆಯ ಕರ್ನಲ್ ಆಶುತೋಷ್ ಶರ್ಮಾ ಸೇರಿ ಐವರು ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತ್ಯುತ್ತರ ಎಂಬಂತೆ ಭಾರತೀಯ ಸೇನೆಯು ಹಿಜ್ಬುಲ್‌ ಕಮಾಂಡರ್ ರಿಯಾಜ್‌ ನಾಯ್ಕೂನನ್ನು ಹೊಡೆದುರುಳಿಸಿತ್ತು. ಭಾರತ ಇಷ್ಟಕ್ಕೇ ಸುಮ್ಮನಾಗದೇ ಇನ್ನಷ್ಟು ಕಾರ್ಯಾಚರಣೆ ನಡೆಸಿ ಹಂದ್ವಾಡಾ ದಾಳಿಗೆ ಮತ್ತಷ್ಟು ಪ್ರತೀಕಾರ ತೀರಿಸಿಕೊಳ್ಳಲಿದೆ ಎಂಬ ಭಯ ಸದ್ಯ ಪಾಕಿಸ್ತಾನವನ್ನು ಕಾಡಲಾರಂಭಿಸಿದೆ. ಹೀಗಾಗೇ ಈ ಘಟನೆ ಮರುಕ್ಷಣದಿಂದಲೇ ಪಾಕ್ ವಾಯುಸೇನೆ ಫ್ಲೈಯಿಂಗ್ ಆಪರೇಷನ್ ಹೆಚ್ಚಿಸಿದೆ.

ಪಾಕ್ ಸೇನಾ ಮೇಜರ್ ಸೇರಿ 6 ಯೋಧರ ಹತ್ಯೆ; ದಾಳಿ ಹೊಣೆ ಹೊತ್ತ ಬಲೂಚ್ ಲಿಬರೇಶನ್ ಆರ್ಮಿ!

ಸುದ್ದಿ ಸಂಸ್ಥೆ ANI ಅನ್ವಯ ಜಮ್ಮು ಕಾಶ್ಮೀರದ ಹಂದ್ವಾಡಾದಲ್ಲಿ ಉಗ್ರರು ನಡೆಸಿದ್ದ ದಾಳಿಯಲ್ಲಿ ಭಾರತೀಯ ಸೇನೆಯ ಯೋಧರು ಹುತಾತ್ಮರಾಗಿದ್ದರು. ಇದಾದ ಬಳಿಕ ಭಾರತ ತನ್ನ ಮೇಲೂ ಕಾರ್ಯಾಚರಣೆ ನಡೆಸಬಹುದೆಂಬ ಪಾಕಿಸ್ತಾನವನ್ನು ಕಾಡಲಾರಂಭಿಸಿದೆ. ಈ ನಿಟ್ಟಿನಲ್ಲಿ ಮತ್ತಷ್ಟು ಎಚ್ಚರಗೊಂಡಿರುವ ಪಾಕಿಸ್ತಾನ ತನ್ನ ಗಡಿಭಾಗದಲ್ಲಿ ಜೆಟ್ ವಿಮಾನಗಳನ್ನು ಹಾರಾಟ ಆರಂಭಿಸಿ, ಕಣ್ಗಾವಲು ಇಡಲಾರಂಭಿಸಿದೆ ಎಂದಿದೆ.

ಭಾರತೀಯ ಸೇನಾ ಗುಂಡಿಗೆ ಹಿಜ್ಬುಲ್ ಕಮಾಂಡರ್ ಬಲಿ; ಕಾಶ್ಮೀರದಲ್ಲಿ ಇಂಟರ್ನೆಟ್ ಸ್ಥಗಿತ!

ಇನ್ನು ಸರ್ಕಾರದ ಉನ್ನತ ಮೂಲಗಳಿಂದ ANIಗೆ ಸಿಕ್ಕ ಮಾಹಿತಿ ಅನ್ವಯ ಹಂದ್ವಾಡಾ ಎನ್‌ಕೌಂಟರ್ ವೇಳೆ, ಮೊದಲಿಂದಲೂ ಪಾಕಿಸ್ತಾನದ ವಿಮಾನವೊಂದು ಹಾರಾಟ ನಡೆಸುತ್ತಿದ್ದು, ಈ ಸಂಬಂಧ ಭಾರತಕ್ಕೂ ಮಾಹಿತಿ ಇದೆ ಎಂದಿದೆ. ಅಲ್ಲದೇ ಎನ್ಕೌಂಟರ್‌ನಲ್ಲಿ ಕರ್ನಲ್ ಉತಾತ್ಮರಾದ ಬೆನ್ನಲ್ಲೇ ಪಾಕಿಸ್ತಾನದ ವಾಯುಸೇನೆ ಗಸ್ತು ಹಾರಾಟ ಆರಂಭಿಸಿದೆ. ಪಾಕ್ ವಾಯುಸೇನೆಯ ಎಫ್ 16 ಹಾಗೂ ಜೆಎಫ್ 17 ಸೇರಿ ಅನೇಕ ಯುದ್ಧ ವಿಮಾಗಳು ಭಾರತೀಯ ಗಡಿ ಬಳಿ, ಪಾಕಿಸ್ತಾನ ಪ್ರದೇಶದಲ್ಲಿ ಗಸ್ತು ನಡೆಸುತ್ತಿವೆ. ಇವುಗಳನ್ನು ನಮ್ಮ ಭಾರತೀಯ ಸೇನೆಯೂ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮದುವೆಯಾಗಿ 5 ತಿಂಗಳಿಗೆ ಸಹ ನಟಿ ನಿಧನ; ನಾಗಿಣಿ ಧಾರಾವಾಹಿ ನಟ ದೀಕ್ಷಿತ್‌ ಶೆಟ್ಟಿ ಬಿಚ್ಚಿಟ್ಟ ಸತ್ಯ ಏನು?
ಅಮ್ಮಾ ನಂಗೆ ಸ್ಪೆಷಲ್ ಕ್ಲಾಸ್ ಇದೆ ಎಂದು ಸ್ಕೂಲ್ ಡ್ರೆಸ್‌ನಲ್ಲೇ ಓಯೋ ರೂಮಿನಲ್ಲಿ ಹಾಜರಾದ ಹುಡುಗಿ!