ವಿಭಜನೆ ಬಳಿಕ ಸಂಕಷ್ಟಕ್ಕೆ ಸಿಕ್ಕ ಪಾಕ್‌ ಮತ್ತೆ ಭಾರತ ಸೇರಲಿ: ಭಾಗವತ್‌!

Published : Feb 26, 2021, 09:04 AM IST
ವಿಭಜನೆ ಬಳಿಕ ಸಂಕಷ್ಟಕ್ಕೆ ಸಿಕ್ಕ ಪಾಕ್‌ ಮತ್ತೆ ಭಾರತ ಸೇರಲಿ: ಭಾಗವತ್‌!

ಸಾರಾಂಶ

ವಿಭಜನೆ ಬಳಿಕ ಸಂಕಷ್ಟಕ್ಕೆ ಸಿಕ್ಕ ಪಾಕ್‌ ಮತ್ತೆ ಭಾರತ ಸೇರಲಿ: ಭಾಗವತ್‌|  ‘ಅಖಂಡ ಭಾರತ’ದ ಅಗತ್ಯತೆಯ ಬಗ್ಗೆ ಪ್ರತಿಪಾದಿಸಿರುವ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್

ಹೈದರಾಬಾದ್(ಫೆ.26)‌: ‘ಅಖಂಡ ಭಾರತ’ದ ಅಗತ್ಯತೆಯ ಬಗ್ಗೆ ಪ್ರತಿಪಾದಿಸಿರುವ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ಭಾರತದಿಂದ ಬೇರ್ಪಟ್ಟಿರುವ ಪಾಕಿಸ್ತಾನ ಈಗ ಸಂಕಷ್ಟಕ್ಕೆ ಸಿಲುಕಿರುವುದೇ ಇದಕ್ಕೊಂದು ಜ್ವಲಂತ ಉದಾಹರಣೆ ಆಗಿದೆ ಎಂದು ಹೇಳಿದ್ದಾರೆ.

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್‌, ಹಿಂದೂ ಧರ್ಮದ ಮೂಲಕ ಅಖಂಡ ಭಾರತದ ಪರಿಕಲ್ಪನೆ ಸಾಧ್ಯವಿದೆ. ವಿಶ್ವದ ಕಲ್ಯಾಣಕ್ಕೋಸ್ಕರ ವೈಭವದ ಅಖಂಡ ಭಾರತ ನಿರ್ಮಾಣವನ್ನು ಸಾಕಾರಗೊಳಿಸಬಹುದು. ಈ ಹಿಂದೆ ಪಾಕಿಸ್ತಾನ ವಿಂಗಡನೆ ಆಗಿರುವುದನ್ನು ಯಾರೂ ನಂಬಿರಲಿಲ್ಲ. ಆದರೆ, ಪಾಕಿಸ್ತಾನ ಭಾರತದಿಂದ ವಿಭಜನೆಗೊಂಡಿತು. ಇಂದು ಆ ದೇಶ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಹೀಗಾಗಿ ಭಾರತದ ಜೊತೆ ಗುರುತಿಸಿಕೊಂಡಿದ್ದ ಪ್ರದೇಶಗಳು ತಮ್ಮ ಮುಂಬರುವ ವಿಪತ್ತಿನಿಂದ ಪಾರಾಗಲು ಭಾರತದ ಜೊತೆ ಮತ್ತೆ ವಿಲೀನಗೊಳ್ಳುವ ಅಗತ್ಯವಿದೆ.

ಆದರೆ, ಅದನ್ನು ಬಲವಂತವಾಗಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಜನರಲ್ಲಿ ದೇಶಭಕ್ತಿಯ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಭಾರತ ಏಕೀಕರಣಗೊಂಡರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ದೊರೆಯಲಿದೆ. ವಿಸುದೈವ ಕುಟುಂಬಕಂ (ಇಡೀ ವಿಶ್ವವೇ ಒಂದು ಕುಟುಂಬ) ಎಂದು ನಂಬಿರುವ ಭಾರತ ವಿಶ್ವಕ್ಕೆ ಮತ್ತೊಮ್ಮೆ ಸಂತೋಷ ಹಾಗೂ ಶಾಂತಿಯನ್ನು ನೀಡಬಹುದಾಗಿದೆ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!