ಬಿಜೆಪಿ ವಿರೋಧಿಸಿದ ಮಾತ್ರಕ್ಕೆ ಹಿಂದೂ ವಿರೋಧಿಗಳಲ್ಲ: RSS ನಾಯಕ ಜೋಶಿ!

Published : Feb 10, 2020, 09:40 AM ISTUpdated : Feb 10, 2020, 09:42 AM IST
ಬಿಜೆಪಿ ವಿರೋಧಿಸಿದ ಮಾತ್ರಕ್ಕೆ ಹಿಂದೂ ವಿರೋಧಿಗಳಲ್ಲ: RSS ನಾಯಕ ಜೋಶಿ!

ಸಾರಾಂಶ

ಬಿಜೆಪಿ ವಿರೋಧಿಸಿದ ಮಾತ್ರಕ್ಕೆ ಹಿಂದೂ ವಿರೋಧಿಗಳಲ್ಲ: ಜೋಶಿ|  ಬಿಜೆಪಿಯ ಸೈದ್ಧಾಂತಿಕ ಸಂಸ್ಥೆಯಾದ ಆರ್‌ಎಸ್‌ಎಸ್‌ನ ಈ ಹೇಳಿಕೆಯಿಂದ ಭಾರೀ ಸಂಚಲನ

ಪಣಜಿ[ಫೆ.10]: ಹಿಂದು ಸಮುದಾಯವೆಂದರೆ, ಬಿಜೆಪಿ ಎಂದು ಭಾವಿಸಬೇಕಿಲ್ಲ. ಅಲ್ಲದೆ, ಬಿಜೆಪಿ ವಿರೋಧಿಸುವವರು ಹಿಂದುಗಳ ವಿರೋಧಿಗಳೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಆರ್‌ಸ್‌ಎಸ್‌ ಪ್ರಧಾನ ಕಾರ್ಯದರ್ಶಿ ಸುರೇಶ್‌ ಭಯ್ಯಾಜಿ ಜೋಶಿ ಹೇಳಿದ್ದಾರೆ. ಬಿಜೆಪಿಯ ಸೈದ್ಧಾಂತಿಕ ಸಂಸ್ಥೆಯಾದ ಆರ್‌ಎಸ್‌ಎಸ್‌ನ ಈ ಹೇಳಿಕೆ ಭಾರೀ ಸಂಚಲನವನ್ನುಂಟು ಮಾಡಿದೆ.

ಭಾರತದಲ್ಲಿ ಹಿಂದೂ ಸಮುದಾಯದೊಂದಿಗೆ ವ್ಯವಹರಿಸಿ: ಆರ್‌ಎಸ್‌ಎಸ್‌ ನಾಯಕ!

ಗೋವಾದಲ್ಲಿ ನಡೆದ ವಿಶ್ವಗುರು ಭಾರತ ಕಾರ್ಯಕ್ರಮದಲ್ಲಿ ಹಿಂದುಗಳು ಏಕೆ ತಮ್ಮ ಸ್ವಂತ ಸಮುದಾಯದ ವಿರೋಧಿಗಳಾಗುತ್ತಿದ್ದಾರೆ? ಎಂಬ ಪ್ರಶ್ನೆಗೆ ಉತ್ತರಿಸಿದ ಭಯ್ಯಾಜಿ, ಬಿಜೆಪಿ ವಿರೋಧಿಸುವವರನ್ನು ಹಿಂದುಗಳ ವಿರೋಧಿಗಳಂತೆ ಭಾವಿಸಬೇಕಿಲ್ಲ. ರಾಜಕೀಯ ಹೋರಾಟ ನಡೆಯುತ್ತಲೇ ಇರುತ್ತದೆ. ಅದನ್ನು ಧರ್ಮಕ್ಕೆ ಜೋಡಿಸುವುದು ಸರಿಯಲ್ಲ ಎಂದು ಪ್ರತಿಪಾದಿಸಿದರು.

ಅಯೋಧ್ಯೆ ರಾಮಮಂದಿರ ಟ್ರಸ್ಟ್‌ಗೆ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ನೇಮಕ

ಕೆಲವರು ಸ್ವಾಮಿ ವಿವೇಕಾನಂದ ಅವರ ಹಿಂದುತ್ವ ಶ್ರೇಷ್ಠ ಎನ್ನುತ್ತಾರೆ ಮತ್ತೆ ಕೆಲವರು ವಿನಾಯಕ ಸಾವರ್ಕರ್‌ ಅವರದ್ದು ಶ್ರೇಷ್ಠ ಎಂದು ಪ್ರತಿಪಾದಿಸುವರು. ಪಶ್ಚಿಮಬಂಗಾಳ ಮತ್ತು ಕೇರಳದಲ್ಲಿ ಕಮ್ಯುನಿಸ್ಟ್‌ಗಳು ತಾವು ಹಿಂದುಗಳ ವಿರೋಧಿಗಳೆಂದು ಹೇಳಿಕೊಳ್ಳುತ್ತಾರೆ. ಆದರೆ, ಬಂಗಾಳದಲ್ಲಿ ದುರ್ಗಾಪೂಜೆ ಮಂಡಲದ ಮುಖ್ಯಸ್ಥರಾಗಲು ಹಾಗೆಯೇ, ಕೇರಳದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷರಾಗುತ್ತಾರೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕೇವಲ 2 ನಿಮಿಷ ಮಗಳ ನೋಡಲು 11ಗಂಟೆಗೆ ಸ್ಟೇಶನ್‌ಗೆ ಬಂದ ತಂದೆ, ಭಾವುಕ ಕ್ಷಣದ ವಿಡಿಯೋ
ಬೀದಿಯಲ್ಲಿ ಬಿದ್ದಿದ್ದ ಕಲ್ಲಿಂದ ಹಣ ಮಾಡೋದು ಹೇಗೆ ಎಂದು ತೋರಿಸಿಕೊಟ್ಟ ಹುಡುಗ: ವೀಡಿಯೋ ಭಾರಿ ವೈರಲ್