
ನವದೆಹಲಿ (ಜು.29): ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್ನಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' (CJP) ನಾಯಕತ್ವದಲ್ಲಿ ನಡೆದ ವಿದ್ಯಾರ್ಥಿಗಳ ಶಾಂತಿಯುತ ಪ್ರತಿಭಟನೆಯಲ್ಲಿ ಭಾರಿ ಪ್ರಮಾಣದ ಕ್ರಿಮಿನಲ್ಗಳು ನುಸುಳಿರುವುದು ದೆಹಲಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಎಐ (AI) ಫೇಸ್ ರೆಕಗ್ನಿಷನ್ ಕ್ಯಾಮೆರಾ, ಸ್ಮಾರ್ಟ್ ಗ್ಲಾಸ್ ಹಾಗೂ ಬಾಡಿ ಕ್ಯಾಮೆರಾಗಳನ್ನು ಬಳಸಿ ನಡೆಸಿದ 'ಆಪರೇಷನ್ 2873' ತನಿಖೆಯಲ್ಲಿ, ವಿದ್ಯಾರ್ಥಿಗಳ ಸೋಗಿನಲ್ಲಿ ಬಂದಿದ್ದ ಭೀಕರ 2,873 ಅಪರಾಧಿಗಳ ಸತ್ಯಾಸತ್ಯತೆ ಬಯಲಾಗಿದೆ.
ಜೀಪಿಗೆ ಬೆಂಕಿ ಹಚ್ಚಿದ ಮುಲ್ಲಾನಿಗೂ ನನ್ನ ಮೇಲೆ ಕೇಸ್ ಕೊಟ್ಟವನಿಗೂ ಏನು ಸಂಬಂಧ? ಪೊಲೀಸರು ತನಿಖೆ ಮಾಡಲಿ: ಸಿಟಿ ರವಿ
ಇವರಲ್ಲಿ ಕೊಲೆ, ಅ*ತ್ಯಾಚಾ*ರ, ದರೋಡೆ ಮತ್ತು ಎನ್ಡಿಪಿಎಸ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ 989 ಕಡು ಅಪರಾಧಿಗಳು ಪ್ರತಿಭಟನೆಯಲ್ಲಿ ನುಸುಳಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದರು ಎಂಬುದು ತಿಳಿದುಬಂದಿದೆ. ವಿದ್ಯಾರ್ಥಿಗಳ ಹೋರಾಟವನ್ನು ರೌಡಿಗಳು ಹೈಜಾಕ್ ಮಾಡಿದ್ದ ಈ ಸತ್ಯೀಕರಣ ದೇಶವನ್ನೇ ಬೆಚ್ಚಿಬೀಳಿಸಿದೆ.