ರಾಮ ಮಂದಿರ ಭೂಮಿಪೂಜೆ ವೇಳೆ 250 ಮುಸ್ಲಿಮರು ಹಿಂದೂ ಧರ್ಮಕ್ಕೆ ಮತಾಂತರ!

Published : Aug 06, 2020, 02:15 PM ISTUpdated : Aug 06, 2020, 03:01 PM IST
ರಾಮ ಮಂದಿರ ಭೂಮಿಪೂಜೆ ವೇಳೆ 250 ಮುಸ್ಲಿಮರು ಹಿಂದೂ ಧರ್ಮಕ್ಕೆ ಮತಾಂತರ!

ಸಾರಾಂಶ

ರಾಮ ಮಂದಿರ ಭೂಮಿ ಪೂಜೆ ವೇಳೆ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸಲ್ಮಾನರು| ಯಜ್ಞ, ಹವನ ನಡೆಸಿ ಹಿಂದೂ ಧರ್ಮಕ್ಕೆ ಮರಳಿ ಬಂದ ಕುಟುಂಬ| ಮೂಲತಃ ಹಿಂದೂಗಳಾಗಿದ್ದ ಕುಟುಂಬ

ಜೈಪುರ(ಆ.06): ದೇಶದಲ್ಲಿ ಭವ್ಯ ರಾಮ ಮಂದಿರಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಸ್ಟ್ 5ರಂದು ಶಿಲಾನ್ಯಾಸ ನೆರವೇರಿಸಿದ್ದಾರೆ. ಹೀಗಿರುವಾಗ ರಾಜಸ್ಥಾನದಷ ಬರ್ಮರ್‌ನ ಸುಮಾರು 50 ಕುಟುಂಬದ 250 ಮಂದಿ ಇಸ್ಲಾಂನಿಂದ ಇಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಅಲ್ಲದೇ ತಾವು ಮೂಲತಃ ಹಿಂದೂಗಳಾಗಿದ್ದು, ಯಾವುದೇ ಒತ್ತಾಯವಿಲ್ಲದೇ ಸ್ವಂತ ಇಚ್ಛೆಯಿಂದ ಮತಾಂತರಗೊಂಡಿರುವುದಾಗಿ ಕುಟುಂಬದ ಹಿರಿಯ ಸದಸ್ಯರು ತಿಳಿಸಿದ್ದಾರೆ.

ಲಾಹೋರ್ ಗುರುದ್ವಾರವ ಮಸೀದಿಯಾಗಿಸಲು ಮುಂದಾದ ಪಾಕ್‌ಗೆ ಭಾರತದ ಬಿಸಿ

ಇನ್ನು ಈ ಸಂಬಂಧ ಪ್ರತಿಕ್ರಿಯಿಸಿರುವ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಸುಭಾನ್ರಮ್ 'ಮೊಘಲರ ಆಳ್ವಿಕೆ  ಸಂದರ್ಭದಲ್ಲಿ ನಮ್ಮ ವಂಶಸ್ಥರನ್ನು ಒತ್ತಾಯಪೂರ್ವಕವಾಗಿ ಇಸ್ಲಾಂ ಧರ್ಮ್ಕಕೆ ಮತಾಂತರಗೊಳಿಸಲಾಗಿತ್ತು. ಆದರೆ ನಾವು ಮೂಲತಃ ಹಿಂದೂ ಧರ್ಮದವರು, ಹೀಗಾಗಿ ಮುಸಲ್ಮಾನರು ನಮ್ಮಿಂದ ಅಂತರ ಕಾಯ್ದುಕೊಳ್ಳುತ್ತಿದ್ದರು. ಇತಿಹಾಸದಿಂದಲೂ ನಾವು ಹಿಂದೂಗಳೆಂದು ತಿಳಿದು ಬಂತು. ಹೀಗಾಗಿ ನಾವು ಮರಳಿ ಹಿಂದೂ ಧರ್ಮಕ್ಕೆ ಹೋಗಬೇಕೆಂದು ಅಂದುಕೊಂಡೆವು. ಅಲ್ಲದೇ ನಾವು ಅನುಸರಿಸುತ್ತಿದ್ದ ಅನೇಕ ಸಂಪ್ರದಾಯ ಹಾಗೂ ಪದ್ಧತಿಗಳು ಹಿಂದೂ ಧರ್ಮಕ್ಕೆ ಹೋಲಿಕೆಯಾಗುತ್ತಿದ್ದವು. ಹೀಗಾಗಿ ಇಡೀ ಕುಟುಂಬವೇ ಹಿಂದೂ ಧರ್ಮಕ್ಕೆ ಮರಳುವ ಆಕಾಂಕ್ಷೆ ವ್ಯಕ್ತಪಡಿಸಿತು. ಈ ನಿಟ್ಟಿನಲ್ಲಿ ಯಜ್ಞ, ಹವನ ನೆರವೇರಿಸಿ, ಜನಿವಾರ ಧರಿಸಿ 250 ಮಂದಿ ಹಹಿಂದೂ ಧರ್ಮಕ್ಕೆ ಮರಳಿದ್ದೇವೆ' ಎಂದಿದ್ದಾರೆ.

ಇನ್ನು ಈ ಕುಟುಂಬ ಸದಸ್ಯರು ಅನೇಕ ವರ್ಷಗಳಿಂದ ಹಿಂದೂ ಸಂಪ್ರದಾಯವನ್ನೇ ಅನುಸರಿಸುತ್ತಿದ್ದರು. ಹಿಂದೂ ಹಬ್ಬವನ್ನು ಆಚರಿಸುತ್ತಿದ್ದರು. ಮುಸಲ್ಮಾನರಾಗಿದ್ದರೂ ಅವರು ಈ ಧರ್ಮದ ಅನ್ವಯ ಯಾವುದೇ ಆಚರಣೆ ಮಾಡುತ್ತಿರಲಿಲ್ಲ ಎಂಬುವುದು ಗ್ರಾಮಸ್ಥರ ಮಾತಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಂದೇ.. ಚರ್ಚೆಯಿಂದ ಹೊಸ ಇತಿಹಾಸ ಸೃಷ್ಟಿಗೆ ಮೋದಿ ಯತ್ನ: ಕಾಂಗ್ರೆಸ್‌
ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ