ರಾಮ ಮಂದಿರ ಭೂಮಿ ಪೂಜೆ: ಲಡ್ಡು ತಯಾರಿಕೆ ಉಸ್ತುವಾರಿ ಕನ್ನಡಿಗ

Published : Aug 06, 2020, 12:14 PM ISTUpdated : Aug 06, 2020, 12:26 PM IST
ರಾಮ ಮಂದಿರ ಭೂಮಿ ಪೂಜೆ: ಲಡ್ಡು ತಯಾರಿಕೆ ಉಸ್ತುವಾರಿ ಕನ್ನಡಿಗ

ಸಾರಾಂಶ

ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಶಿಲಾನ್ಯಾಸ| ಭಕ್ತರಿಗೆ ಲಡ್ಡು ಹಂಚಿದ ಟ್ರಸ್ಟ್| ಲಡ್ಡು ತಯಾರಿಕೆ 20 ಸಾವಿರ ಕೇಜಿ ನಂದಿನಿ ತುಪ್ಪ!| ಮುಹೂರ್ತ ನೀಡಿದ್ದೂ ಕನ್ನಡಿಗ!

ಅಯೋಧ್ಯೆ(ಆ.06): ರಾಮ ಮಂದಿರ ಶಿಲಾನ್ಯಾಸದ ಬಳಿಕ ಹಂಚಲು ಅಯೋಧ್ಯೆಯ ಹನುಮ ದೇಗುಲ ಟ್ರಸ್ಟ್‌ ತಯಾರಿಸಿದ್ದ ಲಡ್ಡುಗಳಿಗೆ ಸ್ವಾದ ನೀಡಿದ್ದು ಕರುನಾಡಿನಲ್ಲಿ ತಯಾರಾದ ತುಪ್ಪ ಎನ್ನುವುದು ವಿಶೇಷ. ಭಕ್ತರಿಗೆ ಹಂಚಲು ತಯಾರಿಸಿದ್ದ 1.5 ಲಕ್ಷ ಲಡ್ಡುಗಳನ್ನು 20 ಸಾವಿರ ಕೇಜಿ ನಂದಿನಿ ತುಪ್ಪ ಬಳಕೆ ಮಾಡಿ ತಯಾರಿಸಲಾಗಿದೆ. ಪ್ರತೀ 15 ಕೇಜಿಯ ಟಿನ್‌ಗಳಲ್ಲಿ ತುಂಬಿಸಿ ಟ್ರಕ್‌ ಮೂಲಕ 1800 ಕಿ.ಮಿ ದೂದರ ಅಯೋಧ್ಯೆಗೆ ಕಳುಹಿಸಿಕೊಡಲಾಗಿತ್ತು.

ಲಡ್ಡು ತಯಾರಿಕೆ ಉಸ್ತುವಾರಿ ಕನ್ನಡಿಗ!

ನಾನು ಕೆತ್ತಿದ ಮೂರ್ತಿ ಮೋದಿ ಕೈಲಿ ನೋಡಿ ಕಣ್ಣೀರು ಬಂತು!

ಅಯೋಧ್ಯೆ: ಭಕ್ತರಿಗೆ ಹಂಚಲಾದ ಲಡ್ಡು ತಯಾರಿಕೆಯ ಉಸ್ತುವಾರಿ ವಹಿಸಿದ್ದು ಕೂಡ ಕನ್ನಡಿಗ ಎನ್ನುವುದು ಮತ್ತೊಂದು ಹಿರಿಮೆ. ಅಯೋಧ್ಯಾ ಹನುಮ ದೇಗುಲದ ಪ್ರಬಂಧಕರಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಶೇಷಾದ್ರಿ ಆರ್‌. ಎಂಬವರ ಉಸ್ತುವಾರಿಯಲ್ಲಿ ಲಡ್ಡು ತಯಾರಿ ನಡೆದಿದೆ. 1.5 ಲಕ್ಷ ಲಡ್ಡುಗಳನ್ನು 60 ಮಂದಿಯ ತಂಡ ತಯಾರಿಸಿದೆ.

ಮುಹೂರ್ತ ನೀಡಿದ್ದೂ ಕನ್ನಡಿಗ!

ಬೆಂಗಳೂರು: ಮಂದಿರ ನಿರ್ಮಾಣದ ಶಂಕುಸ್ಥಾಪನೆಗೆ ಮುಹೂರ್ತ ನಿಗದಿ ಪಡಿಸಿದ್ದು ಕೂಡ ಓರ್ವ ಕನ್ನಡಿಗ ವಿದ್ವಾಂಸ. ಬೆಳಗಾವಿಯ ವಿದ್ಯಾ ವಿಹಾರ ವಿದ್ಯಾಲಯದ ಕುಲಪತಿ ಎನ್‌.ಆರ್‌ ವಿಜಯೇಂದ್ರ ಶರ್ಮಾ ಅವರೇ ಮಂದಿರ ಭೂಮಿ ಪೂಜೆಗೆ ಮುಹೂರ್ತ ಅಂತಿಮಗೊಳಿಸಿದ ವಿದ್ವಾಂಸ. ರಾಮ ಜನ್ಮಭೂಮಿ ಟ್ರಸ್ಟ್‌ನ ಸದಸ್ಯರಲ್ಲಿ ಓರ್ವರಾದ ಸ್ವಾಮಿ ಗೋವಿಂದ ದೇವಗಿರಿ ಅವರು ಸಂಪರ್ಕಿಸಿ ಒಳ್ಳೆಯ ಮುಹೂರ್ತ ನೀಡುವಂತೆ ಕೋರಿದ್ದರು. ಅಂತೆಯೇ ಜುಲೈ 29 ಬೆಳಿಗ್ಗೆ 9ರ ಬಳಿಕ, ಜುಲೈ 31ರ ಬೆಳಿಗ್ಗೆ 7-9 ಗಂಟೆ, ಆಗಸ್ಟ್‌ 3 ಬೆಳಿಗ್ಗೆ 10 ಗಂಟೆ ಬಳಿಕ ಹಾಗೂ ಆಗಸ್ಟ್‌ 5ರ ಇಡೀ ದಿನ ಹೀಗೆ ನಾಲ್ಕು ಮುಹೂರ್ತಗಳನ್ನು ಸೂಚಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ಚಿನ್ನ₹1.50 ಲಕ್ಷ, ಬೆಳ್ಳಿಗೆ ಬೆಲೆ 3 ಲಕ್ಷ: ಹೊಸ ದಾಖಲೆ, ಕಳೆದ 1 ವರ್ಷದಲ್ಲಿ ಚಿನ್ನದ ಬೆಲೆ 70000 ರು., ಬೆಳ್ಳಿ ಬೆಲೆ 2 ಲಕ್ಷ ರು. ಏರಿಕೆ
26ರ ವಯಸ್ಸಲ್ಲಿ ಶಾಸಕ, 45ಕ್ಕೆ ಸಂಘಟನಾ ಚತುರ ನಿತಿನ್‌ ಬಿಜೆಪಿ ರಾಷ್ಟ್ರಾಧ್ಯಕ್ಷ!