ನಮ್ಮ ಜೀವನದ ಸಂತೋಷ, ಸುಷ್ಮಾ: ಒಡತಿ ಇಲ್ಲದ ಮನೆಯಲ್ಲಿ...!

Published : Feb 14, 2020, 12:13 PM ISTUpdated : Feb 14, 2020, 12:39 PM IST
ನಮ್ಮ ಜೀವನದ ಸಂತೋಷ, ಸುಷ್ಮಾ: ಒಡತಿ ಇಲ್ಲದ ಮನೆಯಲ್ಲಿ...!

ಸಾರಾಂಶ

ಸುಷ್ಮಾ ಸ್ವರಾಜ್ ಜನ್ಮ ಜಯಂತಿ| ಸುಷ್ಮಾ ಹುಟ್ಟುಹಬ್ಬ ಪ್ರಯುಕ್ತ ವಿದೇಶಾಂಗ ಸಚಿವಾಲಯದ ಪ್ರಮುಖ ಎರಡು ಸಂಸ್ಥೆಗಳಿಗೆ ಮರುನಾಮಕರಣ| ಹುಟ್ಟುಹಬ್ಬದಂದು ಪತ್ನಿಯನ್ನು ನೆನಪಿಸಿಕೊಂಡ ಸುಷ್ಮಾ ಪತಿ ಕೌಶಲ್

ನವದೆಹಲಿ[ಫೆ.14]: ಫೆಬ್ರವರಿ 14 ವಿಶ್ವದೆಲ್ಲೆಡೆ ಇದು ಇಂದು ಪ್ರೇಮಿಗಳ ದಿನ. ಭಾರತದಲ್ಲೂ ಪ್ರೇಮಿಗಳು ಈ ದಿನವನ್ನು ವಿಶೇಷವಾಗಿ ಆಚರಿಸುತ್ತಿದ್ದಾರೆ. ಆದರೆ ಇದನ್ನು ಹೊರತುಪಡಿಸಿ ಭಾರತಕ್ಕೆ ಇದು ವಿಭಿನ್ನ ಕಾರಣಗಳಿಂದ ಮಹತ್ತರವಾದ ದಿನ. ಒಂದೆಡೆ ಪುಲ್ವಾಮಾ ದಾಳಿ, ಭಗತ್ ಸಿಂಗ್ ನೇಣಿಗೇರಿಸಿದ ಕಹಿ ನೆನಪು. ಮತ್ತೊಂದೆಡೆ ದೇಶ ಕಂಡ ಅತ್ಯದ್ಭುತ ರಾಜಕೀಯ ನಾಯಕಿ ದಿವಂಗತ ಸುಷ್ಮಾ ಸ್ವರಾಜ್ ಹುಟ್ಟುಹಬ್ಬ.

ಏಮ್ಸ್ ಸಾಕು ವಿದೇಶಿ ಆಸ್ಪತ್ರೆ ಬೇಡವೆಂದಿದ್ದ ಸುಷ್ಮಾ ಸ್ವರಾಜ್!

ಹೌದು ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದ ಗಣ್ಯ ನಾಯಕರಲ್ಲಿ ಸುಷ್ಮಾ ಸ್ವರಾಜ್ ಕೂಡಾ ಒಬ್ಬರು. ರಾಜಕೀಯದಲ್ಲಿ ಅದೆಷ್ಟು ಶಿಸ್ತಿನ ನಾಯಕಿಯಾಗಿದ್ದರೋ ಅಷ್ಟೇ, ಪ್ರೀತಿಯ ಮಡದಿ ಹಾಗೂ ತಾಯಿ ಕೂಡಾ ಅವರಾಗಿದ್ದರು. ಹೀಗಿರುವಾಗ ಒಡತಿ ಇಲ್ಲದ ಮನೆಯಲ್ಲಿ, ಆಕೆಯ ಮೊದಲ ವರ್ಷದ ಹುಟ್ಟುಹಬ್ಬಕ್ಕೆ ಅವರ ಪತಿ ಕೋರಿದ ಶುಭಾಷಯಗಳು ಬಹುತೇಕರನ್ನು ಭಾವುಕರನ್ನಾಗಿಸಿದೆ. ಸುಷ್ಮಾ ಜನ್ಮ ಜಯಂತಿಯಂದು ಪತ್ನಿಯನ್ನು ನೆನಪಿಸಿಕೊಂಡಿರುವ ಸ್ವರಾಜ್ ಕೌಶಲ್ ಟ್ವೀಟ್ ಒಂದನ್ನು ಮಾಡುತ್ತಾ 'ಹುಟ್ಟುಹಬ್ಬದ ಶುಭಾಶಯಗಳು ಸುಷ್ಮಾ ಸ್ವರಾಜ್, ನಮ್ಮ ಜೀವನದ ಸಂತೋಷ ಆಕೆ' ಎಂದು ಬರೆದಿದ್ದಾರೆ.

ಇನ್ನು ಸುಷ್ಮಾ ಸ್ವರಾಜ್ ಜನ್ಮ ಜಯಂತಿ ಸಂದರ್ಭದಲ್ಲಿ ಸರ್ಕಾರವು ವಿದೇಶಾಂಗ ಇಲಾಖೆಗೆ ಸಂಬಂಧಿಸಿದ ಪ್ರಮುಖ ಎರಡು ಸಂಸ್ಥೆಗಳಿಗೆ ವರ ಹೆಸರಿಡಲು ಸರ್ಕಾರ ನಿರ್ಧರಿಸಿದೆ. ಪ್ರವಾಸೀ ಭಾರತೀಯ ಕೇಂದ್ರವನ್ನು ಸುಷ್ಮಾ ಸ್ವರಾಜ್ ಭವನ್ ಹಾಗೂ ಫಾರಿನ್ ಸರ್ವಿಸ್ ಇನ್ಸ್ಟಿಟ್ಯೂಟ್‌ನ್ನು ಸುಷ್ಮಾ ಸ್ವರಾಜ್‌ ಇನ್ಸ್ಟಿಟ್ಯೂಟ್‌ ಆಫ್ ಫಾರಿನ್ ಸರ್ವಿಸ್ ಎಂದು ಮರುನಾಮಕರಣ ಮಾಡಲು ಸಿದ್ಧತೆ ನಡೆದಿದೆ. 

ಪ್ರೇಮಿಗಳ ದಿನದಂದು ಜನಿಸಿದ ಸುಷ್ಮಾ ಓರ್ವ ಎಲ್ಲರೂ ಇಷ್ಟಪಡುವ ನಾಯಕಿಯಾಗಿದ್ದರು. ರಾಜಕೀಯದಲ್ಲಿ ಅವರು ಬಿಜೆಪಿ ಪಕ್ಷದಲ್ಲಿದ್ದರೂ, ಪ್ರತಿಪಕ್ಷಗಳೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದರು. ವಿದೇಶಾಂಗ ಸಚಿವೆಯಾಗಿದ್ದಾಗ ಅವರು ಮಾಡಿದ ಕಾರ್ಯ, ತೆಗೆದುಕೊಂಡ ನಿರ್ಧಾರಗಳಿಂದ ಇಡೀ ದೇಶವೇ ಹೆಮ್ಮೆಪಟ್ಟುಕೊಂಡಿತ್ತು. ವಿಶ್ವದ ಯಾವುದೇ ಭಾಗದಲ್ಲಿ ನೀವು ಸಿಲುಕಿಕೊಂಡರೂ ಭಾರತೀಯ ವಿದೇಶಾಂಗ ಸಚಿವಾಲಯ ನಿಮ್ಮ ನೆರವಿಗಿದೆ ಎಂಬ ಭರವಸೆ ಮೂಡಿಸಿದ್ದರು. ನಡು ರಾತ್ರಿಯಾದರೂ ಸರಿ ಒಂದು ಟ್ವೀಟ್ ಮಾಡಿದರೆ ಸಾಕಿತ್ತು. ಕೂಡಲೇ ಪ್ರತಿಕ್ರಿಯಿಸುತ್ತಿದ್ದ 'ಟ್ವಿಟರ್ ಮಿನಿಸ್ಟರ್' ಅವರ ಸಹಾಯಕ್ಕೆ ಧಾವಿಸುತ್ತಿದ್ದರು. 

ಜನಸಾಮಾನ್ಯರಿಗೆ ಸುಷ್ಮಾ ಯಾಕೆ ಇಷ್ಟ? ಈ ಸಾಧನೆಗಳೆ ಹೇಳುತ್ತವೆ ಉತ್ತರ

ಇವರು ರಾಜಕೀಯದಲ್ಲಿ ಅದೆಷ್ಟು ಶಿಸ್ತಿನ ನಾಯಕಿ ಎನಿಸಿಕೊಂಡಿದ್ದರೋ, ಅಷ್ಟೇ ಮಮತಾಮಯಿ ತಾಯಿ ಹಾಗೂ ಪ್ರೀತಿಯ ಮಡದಿಯಾಗಿದ್ದರು. ಆದರೆ ಅವರ ಅಕಾಲಿಕ ನಿಧನ ಕುಟುಂಬ ಸದಸ್ಯರನ್ನು ಅನಾಥರನ್ನಾಗಿಸಿದರೆ, ಪಕ್ಷಕ್ಕೂ ಭರಿಸಲಾರದ ನಷ್ಟವುಂಟು ಮಾಡಿದೆ. ಸುಷ್ಮಾರಿಲ್ಲದ ಮನೆಯಲ್ಲಿ ಮೊದಲ ಬಾರಿ ಅವರ ಜನ್ಮ ಜಯಂತಿ ಆಚರಿಸಲಾಗುತ್ತಿದೆ.

ಇದನ್ನೂ ನೋಡಿ: #NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್..

"

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

'ಮಹಿಳೆಯರು ಇರೋದು ಗಂಡನ ಜೊತೆ ಮಲಗೋಕೆ ಮಾತ್ರ..' ವಿಜಯೋತ್ಸವ ಭಾಷಣದಲ್ಲಿ ಸಿಪಿಎಂ ನಾಯಕನ ವಿವಾದಿತ ಮಾತು
ರೈಲ್ ಇಂಡಿಯಾ ನೇಮಕಾತಿ: 154 ಹುದ್ದೆಗಳಿಗೆ ಅರ್ಜಿ ಆಹ್ವಾನ, ತಕ್ಷಣವೇ ಅರ್ಜಿ ಸಲ್ಲಿಸಿ