ಅಂಗಾಂಗ ದಾನ ಮಾಡಿದ 8 ವರ್ಷದ ಬಾಲಕನಿಗೆ ನಮನ: ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ

Published : Mar 07, 2024, 12:35 PM ISTUpdated : Mar 07, 2024, 12:38 PM IST
ಅಂಗಾಂಗ ದಾನ ಮಾಡಿದ 8 ವರ್ಷದ ಬಾಲಕನಿಗೆ ನಮನ: ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ

ಸಾರಾಂಶ

ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ 8 ವರ್ಷದ ಬಾಲಕನಿಗೆ ಒಡಿಶಾ ಸರ್ಕಾರ ವಿಶೇಷ ಗೌರವ ನೀಡಿದೆ. ಸಂಪೂರ್ಣ ಸರ್ಕಾರಿ ಗೌರವದೊಂದಿಗೆ ಬಾಲಕನ ಅಂತ್ಯಸಂಸ್ಕಾರ ಮಾಡಲಾಗಿದೆ.  

ಒಡಿಶಾ: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ 8 ವರ್ಷದ ಬಾಲಕನಿಗೆ ಒಡಿಶಾ ಸರ್ಕಾರ ವಿಶೇಷ ಗೌರವ ನೀಡಿದೆ. ಸಂಪೂರ್ಣ ಸರ್ಕಾರಿ ಗೌರವದೊಂದಿಗೆ ಬಾಲಕನ ಅಂತ್ಯಸಂಸ್ಕಾರ ಮಾಡಲಾಗಿದೆ.  ಮೆದುಳು ನಿಷ್ಕ್ರಿಯಗೊಂಡು 8 ವರ್ಷದ ಸುಭಜಿತ್ ಸಾಹು ಎಂಬ ಬಾಲಕ ಸಾವಿಗೀಡಾಗಿದ್ದ. ಈ ಹಿನ್ನೆಲೆಯಲ್ಲಿ ಈತನ ಅಂಗಾಗಗಳನ್ನು ದಾನ ಮಾಡಲಾಗಿತ್ತು. ಹೀಗೆ ಅಂಗಾಗ ದಾನ ಮಾಡಿ ಬೇರೆಯವರ ಬದುಕಿಗೆ ಬೆಳಕಾದ ಸುಭಜಿತ್ ಸಾಹು ಆತ್ಮಕ್ಕೆ ಗೌರವ ಸಲ್ಲಿಸುವ ಸಲುವಾಗಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ಮಾಡಲಾಗಿದೆ.  ಸತ್ಯನಗರದ ಶವಾಗಾರದಲ್ಲಿ ನಡೆದ ಈ ಅಂತ್ಯಸಂಸ್ಕಾರದಲ್ಲಿ ರಾಜ್ಯ ಪೊಲೀಸ್ ಕಮೀಷನರ್‌ಗಳಾದ ಸಂಜೀವ್ ಪಂಡಾ ಹಾಗೂ ಡಿಸಿಪಿ ಪ್ರತೀಕ್ ಸಿಂಗ್  ಅವರು ಭಾಗಿಯಾಗಿ ಗೌರವ ಸಲ್ಲಿಸಿದ್ದಾರೆ. 

2ನೇ ತರಗತಿಯಲ್ಲಿ ಓದುತ್ತಿದ್ದ ಸುಭಜಿತ್‌ಗೆ ಕಳೆದ ವಾರ ಪರೀಕ್ಷೆ ಬರೆಯುತ್ತಿದ್ದಾಗಲೇ ಮೆದುಳು ನಿಷ್ಕ್ರಿಯಗೊಂಡಿತ್ತು. ಕೂಡಲೇ ಬಾಲಕನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಆತ ಕೋಮಾಗೆ ಜಾರಿದ್ದ. ನಮ್ಮ ಎಲ್ಲಾ ಪ್ರಯತ್ನಗಳ ನಂತರವೂ ಆತನನ್ನು ನಮಗೆ ಬದುಕಿಸಿಕೊಳ್ಳಲಾಗಲಿಲ್ಲ, ಹೀಗಾಗಿ ಅವನ ಕಿಡ್ನಿ, ಶ್ವಾಸಕೋಶ, ಯಕೃತ್, ಕಣ್ಣು, ಹೃದಯ, ಮೆಧೋಜಿರಕ ಗ್ರಂಥಿ( pancreas ಪಿತ್ತಕೋಶ) ಸೇರಿದಂತೆ ದೇಹದ ದಾನ ಮಾಡಬಹುದಾದ ಎಲ್ಲ ಅಂಗಾಂಗಗಳನ್ನು ದಾನ ಮಾಡಿದೆವು ಎಂದು ಬಾಲಕನ ತಂದೆ ಬಿಶ್ವಜಿತ್ ಸಾಹು ಹೇಳಿದ್ದಾರೆ. ತನ್ನ ಅಂಗಾಂಗಗಳ ಮೂಲಕ ಅನೇಕರ ಜೀವ ಉಳಿಸಿದ ನನ್ನ ಧೈರ್ಯವಂತ ಮಗನ ಬಗ್ಗೆ ಹೆಮ್ಮೆ ಇದೆ ಎಂದು ಮಗನ ಅಗಲಿಕೆಯ ನೋವಿನಲ್ಲೂ ಬಿಶ್ವಜಿತ್ ಹೇಳಿದ್ದಾರೆ. 

'ಸರ್ಕಾರಿ ಗೌರವದೊಂದಿಗೆ ಅಂಗಾಂಗ ದಾನ ಮಾಡಿದವರ ಅಂತ್ಯಸಂಸ್ಕಾರ..' ಒಡಿಶಾ ಸಿಎಂ ನವೀನ್‌ ಪಟ್ನಾಯಕ್‌ ಘೋಷಣೆ!

ಆತನ ವಯಸ್ಸು 8 ವರ್ಷವಾದರೂ 80 ವರ್ಷವಾದವರೂ ಮಾಡಲಾಗದಂತಹ ಶ್ರೇಷ್ಠವಾದ ಕಾರ್ಯವನ್ನು ಮಾಡಿದ್ದಾನೆ. ಅಂಗಾಂಗ ದಾನದ ಮೂಲಕ ನಮ್ಮ ಮಗ ಬೇರೆಯವರ ದೇಹದಲ್ಲಿ ಜೀವಂತವಾಗಿದ್ದಾನೆ ಎಂದು ಭಾವಿಸುವ ಮೂಲಕ ನಾವು ನಮ್ಮನ್ನು ಸಮಾಧಾನಿಸಿಕೊಳ್ಳುತ್ತಿದ್ದೇವೆ ಎಂದು ಬಾಲಕನ ತಾಯಿ ಶುಭಶ್ರೀ ಹೇಳಿದ್ದಾರೆ. ಒಡಿಶಾ ಸರ್ಕಾರವು ಇತ್ತೀಚೆಗೆ ಅಂಗಾಂಗ ದಾನಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಸಕಲ ಸರ್ಕಾರಿ ಗೌರವದ ಅಂತ್ಯಸಂಸ್ಕಾರ ನಡೆಸಲು ಕಾನೂನು ತಂದಿದೆ. ಅಂಗಾಂಗ ದಾನಿಗಳ ಅಂತಿಮ ಸಂಸ್ಕಾರವನ್ನು ಸಂಪೂರ್ಣ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕಳೆದ ತಿಂಗಳು ಘೋಷಿಸಿದ್ದರು. ಅದರಂತೆ ರಾಜ್ಯ ಸರ್ಕಾರ ಈಗ ಬಾಲಕನಿಗೆ ಸರ್ಕಾರಿ ಗೌರವದ ಮೂಲಕ ನಮನ ಸಲ್ಲಿಸಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. 

ಬೆಂಗಳೂರು: ಮೆದುಳು ನಿಷ್ಕ್ರಿಯಗೊಂಡಿದ್ದ ಮಗನ ಅಂಗಾಂಗ ದಾನ ಮಾಡಿದ ಪೋಷಕರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್