'ಬಾಬಾರನ್ನು ಕೂಡಲೇ ಬಂಧಿಸಿ' ರಾಮ್ ದೇವ್ ವಿರುದ್ಧ  ದೂರು

Published : Jun 01, 2021, 10:20 PM IST
'ಬಾಬಾರನ್ನು ಕೂಡಲೇ ಬಂಧಿಸಿ' ರಾಮ್ ದೇವ್ ವಿರುದ್ಧ  ದೂರು

ಸಾರಾಂಶ

* ಬಾಬಾ ರಾಮದೇವ್ ವಿರುದ್ಧ  ದೆಹಲಿ ಪೊಲೀಸ್ ಕಮಿಷನರ್ ಗೆ ದೂರ * ಅಲೋಪತಿ ಚಿಕಿತ್ಸೆ ಬಗ್ಗೆ ರಾಮದೇವ್ ಹಗುರವಾಗಿ ಮಾತನಾಡುತ್ತಿದ್ದಾರೆ * ಸರ್ಕಾರ ಅಲೋಪತಿ ಚಿಕಿತ್ಸೆ ಮೇಲೆ ಕೋಟ್ಯಾಂತರ ಹಣ ಖರ್ಚು ಮಾಡಿದೆ * ಮೈಸೂರು ಮೂಲದ ನಾಗೇಶ್ ಅವರಿಂದ ದೂರು

ಬೆಂಗಳೂರು (ಜೂ. 01)  ಯೋಗಗುರು ಬಾಬಾ ರಾಮ್ ದೇವ್ ವಿರುದ್ಧ ದೂರು ದಾಖಲಾಗಿದೆ. ದೆಹಲಿ ಪೊಲೀಸ್ ಕಮಿಷನರ್ ಗೆ ದೂರು  ನೀಡಲಾಗಿದ್ದು  ಬಾಬಾ ರಾಮದೇವ್ ಬಂಧನಕ್ಕೆ ಆಗ್ರಹ ಮಾಡಲಾಗಿದೆ.

ಅಲೋಪಥಿ ಚಿಕಿತ್ಸೆ ಬಗ್ಗೆ ರಾಮದೇವ್ ಹಗುರವಾಗಿ ಮಾತನಾಡುತ್ತಿದ್ದಾರೆ. ಸರ್ಕಾರ ಅಲೋಪತಿ ಚಿಕಿತ್ಸೆ ಮೇಲೆ ಕೋಟ್ಯಾಂತರ ಹಣ ಖರ್ಚು ಮಾಡಿದೆ. ಕೊವ್ಯಾಕ್ಸಿನ್ ನೀಡುವ ಕಾರ್ಯ ನಡೆಯುತ್ತಿದೆ. ಇಂತಹ ಸಂಧರ್ಭದಲ್ಲಿ ಅಲೋಪತಿ ಚಿಕಿತ್ಸೆ ಮೇಲೆ ಅನುಮಾನ ಬರುವಂತೆ ರಾಮದೇವ್ ಮಾತನಾಡುತ್ತಿದ್ದಾರೆ.

ಕ್ಷಮೆ ಕೇಳಿ ಹೇಳಿಕೆ ಹಿಂಪಡೆದ ಬಾಬಾ ರಾಮ್ ದೇವ್

ಈ ಕಾರಣದಿಂದ ಅವರನ್ನು ಬಂಧಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಎನ್ಎಸ್‌ಯುಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾಗೇಶ್ ಕರಿಯಪ್ಪ  ಒತ್ತಾಯಿಸಿದ್ದಾರೆ.

ನಾಗೇಶ್ ಕರಿಯಪ್ಪ ಮೈಸೂರು ಮೂಲದವರು.  ಅಲೋಪಥಿ ಚಿಕಿತ್ಸಾ ವಿಧಾನದ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ ರಾಮ್ ದೇವ್  ಕೇಂದ್ರ ಆರೋಗ್ಯ ಸಚಿವರ ಪತ್ರದ ನಂತರ ಮಾತನ್ನು ಹಿಂದಕ್ಕೆ ಪಡೆದುಕೊಂಡಿದ್ದರು .

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?
ಅಗರ್ಭ ಶ್ರೀಮಂತನೆಂದು ಎಂಜಿನಿಯರ್‌ನನ್ನ ಮದುವೆಯಾದಳು... ಫಸ್ಟ್‌ ನೈಟ್‌ನಲ್ಲೇ ಬಯಲಾಯ್ತು ಕರಾಳ ಸತ್ಯ!