
ಶ್ರೀನಗರ(ಜು.05): ಜಮ್ಮು-ಕಾಶ್ಮೀರದ ಉಧಾಂಪುರದ ವಿದ್ಯಾರ್ಥಿ ಮನ್ದೀಪ್ ಸಿಂಗ್ ಕೊರೋನಾ ಲಾಕ್ಡೌನ್ ಕಾರಣದಿಂದ ಶಾಲೆಗೂ ತೆರಳದೆ, ಆನ್ಲೈನ್ ಪಾಠದಲ್ಲಿ ಭಾಗಿಯಾಗಲೂ ಸಾಧ್ಯವಾಗದೆ 10ನೇ ತರಗತಿಯಲ್ಲಿ ಶೇ.98.06 ಅಂಕ ಪಡೆದಿದ್ದಾನೆ. ಈ ಮೂಲಕ ಜಿಲ್ಲೆಗೇ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾನೆ.
ರಾಜ್ಯ ಶಿಕ್ಷಣ ಮಂಡಳಿ ಭಾನುವಾರ 10ನೇ ತರಗತಿ ಫಲಿತಾಂಶ ಪ್ರಕಟಿಸಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಮನ್ದೀಪ್, ‘ಲಾಕ್ಡೌನ್ನಿಂದಾಗಿ ಕಳೆದ ವರ್ಷ ಶಾಲೆಗೆ ಹೋಗಲು ಸಾಧ್ಯವಾಗಿರಲಿಲ್ಲ. ಮನೆಯಲ್ಲಿ ಫೋನ್, ಕಂಪ್ಯೂಟರ್ ಯಾವುದೂ ಇಲ್ಲದ ಕಾರಣ ಆನ್ಲೈನ್ ಕ್ಲಾಸ್ನಲ್ಲಿ ಪಾಲ್ಗೊಳ್ಳಲಾಗಲಿಲ್ಲ.
ಆದರೆ ಕುಟುಂಬಸ್ಥರು, ಶಿಕ್ಷಕರ ನೆರವು ಮತ್ತು ಶ್ರದ್ಧೆ ಓದಿನಿಂದಾಗಿ ಈ ಅಂಕ ಲಭಿಸಿದೆ’ ಎಂದಿದ್ದಾನೆ. ಓದಿನ ಜೊತೆಗೆ ಮನೆಗೆಲಸದಲ್ಲೂ ನೆರವಾಗುವ ಮನ್ದೀಪ್ ಭವಿಷ್ಯದಲ್ಲಿ ವೈದ್ಯರಾಗುವ ಕನಸು ಕಂಡಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ