ಆರೆಸ್ಸೆಸ್‌ ನಿರೀಕ್ಷೆಗಳು ಏನೇ ಇರಲಿ, ಅವುಗಳನ್ನು ಈಡೇರಿಸುವುದು ನಮ್ಮ ಜವಾಬ್ದಾರಿ: ನಿತಿನ್‌ ಗಡ್ಕರಿ

Published : Mar 31, 2024, 12:58 PM ISTUpdated : Mar 31, 2024, 01:05 PM IST
ಆರೆಸ್ಸೆಸ್‌ ನಿರೀಕ್ಷೆಗಳು ಏನೇ ಇರಲಿ, ಅವುಗಳನ್ನು ಈಡೇರಿಸುವುದು ನಮ್ಮ ಜವಾಬ್ದಾರಿ: ನಿತಿನ್‌ ಗಡ್ಕರಿ

ಸಾರಾಂಶ

ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಕೇಂದ್ರ ಸಚಿವ ನಿತಿನ್‌ ಗಡ್ಕರಿ, ದೇಶದಲ್ಲಿ ಆರೆಸ್ಸೆಸ್‌ ನಿರೀಕ್ಷೆಗಳು ಏನೇ ಇರಲಿ, ಅವುಗಳನ್ನು ಈಡೇರಿಸುವುದು ನಮ್ಮ ಜವಾಬ್ದಾರಿ ಎಂದಿದ್ದಾರೆ.

ನವದೆಹಲಿ (ಮಾ.31): ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದ ನಾಗ್ಪುರ ಕ್ಷೇತ್ರದಿಂದ ಸ್ಪರ್ಧೆ ಮಾಡಲಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ, ಆರೆಸ್ಸೆಸ್‌ನ ನಿರೀಕ್ಷೆಗಳು ಏನೇ ಇರಲಿ ಅವುಗಳನ್ನು ಈಡೇರಿಸುವುದು ನಮ್ಮ ಜವಾಬ್ದಾರಿ ಎಂದು ಹೇಳಿದ್ದಾರೆ. ಪಿಟಿಐಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಹಲವಾರಿ ವಿಚಾರಗಳ ಬಗ್ಗೆ ಮಾತನಾಡಿರುವ ನಿತಿನ್‌ ಗಡ್ಕರಿ ಅವರಿಗೆ ಆರೆಸ್ಸೆಸ್‌ ಕುರಿತಾಗಿಯೂ ಪ್ರಶ್ನೆಗಳು ಎದುರಾದವು. ನಾಗ್ಪರ ಆರೆಸ್ಸೆಸ್‌ನ ಕೇಂದ್ರ ಸ್ಥಾನ. ರಾಮಜನ್ಮಭೂಮಿ, ಜಮ್ಮು ಕಾಶ್ಮೀರ ವಿಶೇಷಾಧಿಕಾರ ರದ್ದು ಸೇರಿದಂತೆ ಆರೆಸ್ಸೆಸ್‌ನ ಪ್ರಮುಖ ನಿರೀಕ್ಷೆಗಳನ್ನು ಸರ್ಕಾರ ಪೂರ್ತಿ ಮಾಡಿದೆ. ಮುಂದಿನ ವರ್ಷ ಅರೆಸ್ಸೆಸ್‌ ತನ್ನ ಶತಮಾನೋತ್ಸವವನ್ನೂ ಆಚರಣೆ ಮಾಡಿಕೊಳ್ಳಲಿದೆ.  ಹೀಗಿರುವಾಗಿ ಆರೆಸ್ಸೆಸ್‌ ಆಗಲಿ ನಿಮ್ಮದಾಗಲಿ ಮುಂದಿನ ಅಜೆಂಡಾಗಳೇನು ಎಂದು ಪ್ರಶ್ನೆ ಕೇಳಲಾಗಿದೆ.

ಇದಕ್ಕೆ ಉತ್ತರ ನೀಡಿರುವ ನಿತಿನ್‌ ಗಡ್ಕರಿ, ನನ್ನ ವೈಯಕ್ತಿಕ ಅಜೆಂಡಾ ನನ್ನ ಕ್ಷೇತ್ರ ನಾಗ್ಪುರ ಮಾತ್ರ. ಇಲ್ಲಿಂದಲೇ ನಾನು ಸಂಸತ್ತಿಗೆ ಆಯ್ಕೆಯಾಗಿದ್ದೇನೆ. ಆರೆಸ್ಸೆಸ್‌ನ ಅಜೆಂಡಾಗಳೇನು ಅನ್ನೋದನ್ನು ಆರೆಸ್ಸೆಸ್‌ ತಿಳಿಸುತ್ತದೆ. ಆದರೆ, ಒಬ್ಬ ಸ್ವಯಂಸೇವಕನಾಗಿ ಅವರ ನಿರೀಕ್ಷೆಗಳು ಏನೇ ಇರಲಿ, ಅವುಗಳನ್ನು ಈಡೇರಿಸುವುದು ನಮ್ಮ ಜವಾಬ್ದಾರಿ ಎಂದು ಉತ್ತರ ನೀಡಿದ್ದಾರೆ.

ಭಾರತಕ್ಕೆ ವಿಶ್ವದ 2ನೇ ಅತಿದೊಡ್ಡ ರಸ್ತೆ ಜಾಲದ ಹೆಗ್ಗಳಿಕೆ, 9 ವರ್ಷದಲ್ಲಿ ಶೇ. 59ರಷ್ಟು ಏರಿಕೆ!

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎನ್ನುವ ವಿಚಾರದಲ್ಲಿಯೂ ಪ್ರತಿಕ್ರಿಯೆ ನೀಡಿರುವ ಅವರು, 'ಈ ವಿಚಾರದಲ್ಲಿ ಪ್ರತಿ ರಾಜ್ಯಗಳ ವಿಶ್ಲೇಷಣೆ ಮಾಡುವ ಅಗತ್ಯವಿಲ್ಲ. ಈ ಬಾರಿ ನಾವು ದಕ್ಷಿಣದಲ್ಲಿಯೂ ಯಶಸ್ಸಿನ ಸವಿ ಪಡೆಯಲಿದ್ದೇವೆ.  ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಕಳೆದ 10 ವರ್ಷಗಳಲ್ಲಿ ನಾವು ದಕ್ಷಿಣ ಮತ್ತು ಈಶಾನ್ಯದಲ್ಲಿ ಮಾಡಿದ ಕೆಲಸಗಳ ಫಲಿತಾಂಶವನ್ನು ನಾವು ಪಡೆಯಲಾರಂಭಿಸಿದ್ದೇವೆ.ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ನಾವು ಶ್ರಮಿಸಿದ್ದೇವೆ. ಈ ರಾಜ್ಯಗಳಲ್ಲಿ ನಾವು ಬಹಳ ಕಡಿಮೆ ಅಸ್ತಿತ್ವವನ್ನು ಹೊಂದಿದ್ದೇವೆ. ಈ ಬಾರಿ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಉತ್ತಮ ಸಾಧನೆ ಮಾಡುತ್ತೇವೆ. ಉತ್ತರ ಭಾರತದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದೇವೆ. ಹಾಗಾಗಿ, ಬಿಜೆಪಿ ಏಕಾಂಗಿಯಾಗಿ 370 ಸ್ಥಾನಗಳನ್ನು ಪಡೆಯುತ್ತದೆ ಮತ್ತು ಎನ್‌ಡಿಎ 400 ದಾಟಲಿದೆ ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದ್ದಾರೆ.

'ಪ್ಲ್ಯಾನ್‌ ರೆಡಿ ಮಾಡಿ, ಕೇಂದ್ರದ ಸಹಕಾರ ಇದ್ದೇ ಇರಲಿದೆ..' ಬೆಂಗಳೂರು ಟ್ರಾಫಿಕ್‌ ಸಮಸ್ಯೆಗೆ ಡಿಕೆಶಿಗೆ ನಿತಿನ್‌ ಗಡ್ಕರಿ ಸಲಹೆ

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಂಕೆ ಬಿಹಾರಿ ದೇಗುಲದಲ್ಲಿ ಶಾಲಿನ ಮೇಲೆ ಬಿತ್ತು ಚಿನ್ನದ ಉಂಗುರ: ಶ್ರೀಕೃಷ್ಣನ ಪ್ರತಿಮೆಯನ್ನೇ ಮದುವೆಯಾದ ಪಿಂಕಿ
'ವಂದೇ ಮಾತರಂ..' ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಿದ ಮಂತ್ರ ಎಂದ ಪ್ರಧಾನಿ ಮೋದಿ