ಕೊರೋನಾ ಸೋಂಕು ತೀವ್ರ: 4 ಜಿಲ್ಲೆ​ಗ​ಳಲ್ಲಿ ರಾತ್ರಿ ಕರ್ಫ್ಯೂ!

Published : Mar 07, 2021, 08:20 AM IST
ಕೊರೋನಾ ಸೋಂಕು ತೀವ್ರ: 4 ಜಿಲ್ಲೆ​ಗ​ಳಲ್ಲಿ ರಾತ್ರಿ ಕರ್ಫ್ಯೂ!

ಸಾರಾಂಶ

 ಕಳೆದ ಕೆಲ ದಿನ​ಗ​ಳಿಂದ ಪಂಜಾ​ಬ್‌​ನ ಹಲವು ನಗ​ರ​ಗ​ಳಲ್ಲಿ ಕೊರೋನಾ ಸೋಂಕು ಹೆಚ್ಚಳ| 4 ಜಿಲ್ಲೆ​ಗ​ಳಲ್ಲಿ ರಾತ್ರಿ ಕರ್ಫ್ಯೂ| ಜಿಲ್ಲಾ​ದ್ಯಂತ ಶನಿ​ವಾರದಿಂದಲೇ ರಾತ್ರಿ 11 ಗಂಟೆ​ಯಿಂದ ಬೆಳ​ಗಿನ ಜಾವ 5 ಗಂಟೆ​ವ​ರೆಗೆ ನಿರ್ಬಂಧ

ಚಂಡೀ​ಗ​ಢ(ಮಾ.07): ಕಳೆದ ಕೆಲ ದಿನ​ಗ​ಳಿಂದ ಪಂಜಾ​ಬ್‌​ನ ಹಲವು ನಗ​ರ​ಗ​ಳಲ್ಲಿ ಕೊರೋನಾ ಸೋಂಕಿನ ತೀವ್ರತೆ ಹೆಚ್ಚಾ​ಗಿದೆ. ಈ ಹಿನ್ನೆ​ಲೆ​ಯಲ್ಲಿ ಜಲಂಧರ್‌, ಎಸ್‌​ಬಿ​ಎಸ್‌ ನಗರ, ಹೋಶಿ​ಯಾ​ರ್‌​ಪುರ ಹಾಗೂ ಕಪೂರ್ತಲಾ ಜಿಲ್ಲೆ​ಗ​ಳಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡ​ಲಾ​ಗಿದೆ.

ಜಿಲ್ಲಾ​ದ್ಯಂತ ಶನಿ​ವಾರದಿಂದಲೇ ರಾತ್ರಿ 11 ಗಂಟೆ​ಯಿಂದ ಬೆಳ​ಗಿನ ಜಾವ 5 ಗಂಟೆ​ವ​ರೆಗೆ ರಾತ್ರಿ ಕರ್ಫ್ಯೂ ಜಾರಿ​ಯ​ಲ್ಲಿ​ರ​ಲಿದೆ. ಆದಾಗ್ಯೂ ಕೆಲ ಕೈಗಾ​ರಿ​ಕೆ​ಗ​ಳ ಕಾರ್ಮಿ​ಕರು, ವೈದ್ಯ​ಕೀಯ ತುರ್ತು ಪರಿ​ಸ್ಥಿತಿ, ಬಸ್ಸು, ರೈಲು ಮತ್ತು ವಿಮಾ​ನ​ಗ​ಳಲ್ಲಿ ರಾತ್ರಿ ಆಗ​ಮಿ​ಸುವ ಪ್ರಯಾ​ಣಿ​ಕ​ರಿಗೆ ರಾತ್ರಿ ಕರ್ಫ್ಯೂ ನೀತಿ​ಯಿಂದ ವಿನಾಯ್ತಿ ನೀಡ​ಲಾ​ಗಿದೆ ಎಂದು ಪಂಜಾಬ್‌ ಮುಖ್ಯ ಕಾರ್ಯ​ದರ್ಶಿ ವಿನಿ ಮಹಾ​ಜನ್‌ ಟ್ವೀಟ್‌ ಮಾಡಿ​ದ್ದಾರೆ.

ಪಂಜಾಬ್‌ ಮುಖ್ಯ ಕಾರ್ಯ​ದರ್ಶಿ ವಿನಿ ಮಹಾ​ಜನ್‌ ಹಾಗೂ ಪೊಲೀಸ್‌ ಮಹಾ ನಿರ್ದೇ​ಶಕ ದಿನ್‌​ಕರ್‌ ಗುಪ್ತಾ ನೇತೃ​ತ್ವ​ದಲ್ಲಿ ಶನಿ​ವಾರ ವಿಡಿಯೋ ಕಾನ್ಫ​ರೆನ್ಸ್‌ ಮೂಲಕ ನಡೆದ ಸಭೆ​ಯಲ್ಲಿ ಈ ಕ್ರಮ ಕೈಗೊ​ಳ್ಳ​ಲಾ​ಗಿ​ದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಸ್ತೆಗಳಿರುವುದು ನಮಾಜ್‌ಗಲ್ಲ; ಮಸೀದಿಯಲ್ಲಿ ಜಾಗ ಕಡಿಮೆ ಇದ್ರೆ ಪಾಳಿ ಮಾಡಿ, ಬಕ್ರೀದ್‌ ಆಚರಣೆಗೆ ಕ್ಷಣಗಣನೆ ಹೊತ್ತಲ್ಲೇ ಸಿಎಂ ಯೋಗಿ ಖಡಕ್ಎಚ್ಚರಿಕೆ!
ಉತ್ತರಾಖಂಡದ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಅವಳಿ ಮರಿಗಳಿಗೆ ಜನ್ಮ ನೀಡಿದ ಆನೆ! 100ರಲ್ಲಿ ಒಂದು ಅಪರೂಪದ ಘಟನೆ