ಕಳೆದ ಕೆಲ ದಿನಗಳಿಂದ ಪಂಜಾಬ್ನ ಹಲವು ನಗರಗಳಲ್ಲಿ ಕೊರೋನಾ ಸೋಂಕು ಹೆಚ್ಚಳ| 4 ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ| ಜಿಲ್ಲಾದ್ಯಂತ ಶನಿವಾರದಿಂದಲೇ ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 5 ಗಂಟೆವರೆಗೆ ನಿರ್ಬಂಧ
ಚಂಡೀಗಢ(ಮಾ.07): ಕಳೆದ ಕೆಲ ದಿನಗಳಿಂದ ಪಂಜಾಬ್ನ ಹಲವು ನಗರಗಳಲ್ಲಿ ಕೊರೋನಾ ಸೋಂಕಿನ ತೀವ್ರತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಜಲಂಧರ್, ಎಸ್ಬಿಎಸ್ ನಗರ, ಹೋಶಿಯಾರ್ಪುರ ಹಾಗೂ ಕಪೂರ್ತಲಾ ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ.
ಜಿಲ್ಲಾದ್ಯಂತ ಶನಿವಾರದಿಂದಲೇ ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 5 ಗಂಟೆವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರಲಿದೆ. ಆದಾಗ್ಯೂ ಕೆಲ ಕೈಗಾರಿಕೆಗಳ ಕಾರ್ಮಿಕರು, ವೈದ್ಯಕೀಯ ತುರ್ತು ಪರಿಸ್ಥಿತಿ, ಬಸ್ಸು, ರೈಲು ಮತ್ತು ವಿಮಾನಗಳಲ್ಲಿ ರಾತ್ರಿ ಆಗಮಿಸುವ ಪ್ರಯಾಣಿಕರಿಗೆ ರಾತ್ರಿ ಕರ್ಫ್ಯೂ ನೀತಿಯಿಂದ ವಿನಾಯ್ತಿ ನೀಡಲಾಗಿದೆ ಎಂದು ಪಂಜಾಬ್ ಮುಖ್ಯ ಕಾರ್ಯದರ್ಶಿ ವಿನಿ ಮಹಾಜನ್ ಟ್ವೀಟ್ ಮಾಡಿದ್ದಾರೆ.
To effectively manage 2nd wave of & to break the chain of transmission, a high level meeting was chaired by , wherein the DCs, Police Chiefs and key officers of other stakeholder departments like health and medical education were present.https://t.co/TPAdZkRq9b
— Government of Punjab (@PunjabGovtIndia)ಪಂಜಾಬ್ ಮುಖ್ಯ ಕಾರ್ಯದರ್ಶಿ ವಿನಿ ಮಹಾಜನ್ ಹಾಗೂ ಪೊಲೀಸ್ ಮಹಾ ನಿರ್ದೇಶಕ ದಿನ್ಕರ್ ಗುಪ್ತಾ ನೇತೃತ್ವದಲ್ಲಿ ಶನಿವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.