
ನವದೆಹಲಿ(j.೧೭): ಮೊಬೈಲ್ ಕರೆ ವೇಳೆ ನಟ ಅಮಿತಾಭ್ ಬಚ್ಚನ್ ಧ್ವನಿಯಲ್ಲಿ ಕೇಳಿಬರುತ್ತಿದ್ದ, ಕೊರೋನಾ ಜಾಗೃತಿ ಕುರಿತ ಕಾಲರ್ ಟ್ಯೂನ್ ಅನ್ನು ಶುಕ್ರವಾರದಿಂದಲೇ ಹಿಂದಕ್ಕೆ ಪಡೆಯಲಾಗಿದೆ. ಅದರ ಬದಲು ಮಹಿಳೆಯ ಧ್ವನಿಯಲ್ಲಿ ಕೊರೋನಾ ಲಸಿಕೆ ಅಭಿಯಾನ ಕುರಿತ ಕಾಲರ್ಟ್ಯೂನ್ ಬಿಡುಗಡೆ ಮಾಡಲಾಗಿದೆ.
ಲಸಿಕೆಯ ಬಗೆಗಿನ ವದಂತಿ ನಿವಾರಿಸಲು ಹೊಸ ಕಾಲರ್ಟ್ಯೂನ್ ಒಳಗೊಂಡಿದೆ. ಈ ಹೊಸ ವರ್ಷವು ಕೊರೋನಾ ವಿರುದ್ಧ ಹೋರಾಡುವ ಸಾಮರ್ಥ್ಯದ ಲಸಿಕೆಗಳೊಂದಿಗೆ ನಮಗೆ ಹೊಸ ಆಶಾಕಿರಣವನ್ನು ಹೊತ್ತು ತಂದಿವೆ. ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿರುವ ಲಸಿಕೆಗಳು ಸಂಪೂರ್ಣ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದ್ದು, ಅವು ಕೊರೋನಾ ಸೋಂಕಿನಿಂದ ರಕ್ಷಣೆ ನೀಡಲಿವೆ.
ನಿಮ್ಮ ಪಾಳಿ ಬಂದಾಗ ಲಸಿಕೆಯನ್ನು ಪಡೆಯಿರು. ಯಾವುದೇ ಕಾರಣಕ್ಕೂ ಗಾಳಿ ಸುದ್ದಿಯನ್ನು ನಂಬಬೇಡಿ ಎಂಬ ಧ್ವನಿ ಇದೀಗ ಕೇಳಿಬರುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ