ಯುಪಿಐ ಮೂಲಕ ಪಿಎಫ್‌ ಪಡೆಯಲು ಹೊಸ ಆ್ಯಪ್

Kannadaprabha News   | Kannada Prabha
Published : Feb 10, 2026, 04:17 AM IST
Upi

ಸಾರಾಂಶ

ನೌಕರರ ಭವಿಷ್ಯ ನಿಧಿಯ ಹಣವನ್ನು ಬ್ಯಾಂಕ್‌ ಖಾತೆಗೆ ಸುಲಭವಾಗಿ ವರ್ಗಾಯಿಸಲು ಅನುಕೂಲವಾಗುವಂತೆ ಹೊಸ ಆ್ಯಪ್‌ಅನ್ನು ಅಭಿವೃದ್ಧಿಪಡಿಸಲಾಗಿದ್ದು, ಏಪ್ರಿಲ್‌ನಲ್ಲಿ ಬಿಡುಗಡೆ ಆಗಲಿದೆ. ಈ ಆ್ಯಪ್‌ನಲ್ಲಿ ಯುಪಿಐ ಮೂಲಕ ಪಿಎಫ್‌ ಹಣವನ್ನು ಸುಲಭವಾಗಿ ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆ ಮಾಡಬಹುದು.

ನವದೆಹಲಿ : ನೌಕರರ ಭವಿಷ್ಯ ನಿಧಿಯ ಹಣವನ್ನು ಬ್ಯಾಂಕ್‌ ಖಾತೆಗೆ ಸುಲಭವಾಗಿ ವರ್ಗಾಯಿಸಲು ಅನುಕೂಲವಾಗುವಂತೆ ಹೊಸ ಆ್ಯಪ್‌ಅನ್ನು ಅಭಿವೃದ್ಧಿಪಡಿಸಲಾಗಿದ್ದು, ಏಪ್ರಿಲ್‌ನಲ್ಲಿ ಬಿಡುಗಡೆ ಆಗಲಿದೆ. ಈ ಆ್ಯಪ್‌ನಲ್ಲಿ ಯುಪಿಐ ಮೂಲಕ ಪಿಎಫ್‌ ಹಣವನ್ನು ಸುಲಭವಾಗಿ ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆ ಮಾಡಬಹುದು.

ಸದ್ಯ ಇದರ ಪರೀಕ್ಷೆ ಹಾಗೂ ಸುಧಾರಣೆ

ಸದ್ಯ ಇದರ ಪರೀಕ್ಷೆ ಹಾಗೂ ಸುಧಾರಣೆ ನಡೆಯುತ್ತಿದೆ. ಪ್ರಸ್ತುತ ಪಿಎಫ್‌ ಹಣವನ್ನು ಸಾರ್ವತ್ರಿಕ ಖಾತೆ ಸಂಖ್ಯೆ (ಯುಎಎನ್‌) ಪೋರ್ಟಲ್‌ ಅಥವಾ ಉಮಂಗ್‌ ಆ್ಯಪ್‌ನಲ್ಲಿ ನಿರ್ವಹಿಸಬಹುದಾಗಿದೆ. ಆ ಹಣವನ್ನು ಪಡೆಯಬೇಕಾದರೆ ಅದಕ್ಕೆ ಮೊದಲು ಅರ್ಜಿ ಸಲ್ಲಿಸಬೇಕು. ಇದು ಸುದೀರ್ಘ ಪ್ರಕ್ರಿಯೆಯಾಗಿದೆ. ಇದನ್ನು ಸರಳ ಹಾಗೂ ಕ್ಷಿಪ್ರಗೊಳಿಸಲು ಹೊಸ ಆ್ಯಪ್‌ ಪರಿಚಯಿಸಲಾಗುತ್ತಿದೆ. ಇದರಡಿ, ಲಿಂಕ್‌ ಆಗಿರುವ ಯುಪಿಐ ಪಿನ್‌ ಸಂಖ್ಯೆ ಬಳಸಿ ಲಭ್ಯ ಇರುವ ಪಿಎಫ್‌ ಮೊತ್ತವನ್ನು ಪರಿಶೀಲಿಸಬಹುದು ಹಾಗೂ ಅದನ್ನು ಬ್ಯಾಂಕ್‌ ಖಾತೆಗೆ ವರ್ಗಾಯಿಸಿಕೊಳ್ಳಬಹುದು.

ತುರ್ತಾಗಿ ಹಣ ಬೇಕಾದಲ್ಲಿ 3 ದಿನಗಳ ಒಳಗಾಗಿ ಬ್ಯಾಂಕ್‌ಗೆ ಜಮೆ

ಅನಾರೋಗ್ಯ, ಶಿಕ್ಷಣ, ಮದುವೆ, ಮನೆ ಖರೀದಿಯಂತಹ ಉದ್ದೇಶಗಳಿಗೆ ತುರ್ತಾಗಿ ಹಣ ಬೇಕಾದಲ್ಲಿ, ಯುಪಿಐ ಮೂಲಕ ಆದು ಬೇಡಿಕೆಯಿಟ್ಟ 3 ದಿನಗಳ ಒಳಗಾಗಿ ಬ್ಯಾಂಕ್‌ಗೆ ಜಮೆಯಾಗಲಿದೆ. ಇದರ ಮೊತ್ತವನ್ನು ಈಗಾಗಲೇ 1 ಲಕ್ಷ ರು.ನಿಂದ 5 ಲಕ್ಷ ರು.ಗೆ ಏರಿಸಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಪಿಎಫ್‌ನ ನಿರ್ದಿಷ್ಟ ಮೊತ್ತವನ್ನು ಫ್ರೀಜ್‌ ಮಾಡಿ, ಉಳಿದದ್ದನ್ನು ಬ್ಯಾಂಕುಗಳ ಮೂಲಕ ಪಡೆಯಲು ಸಂಬಂಧಿಸಿದಂತೆ ಕಾರ್ಮಿಕ ಸಚಿವಾಲಯ ಕೆಲಸ ಮಾಡುತ್ತಿದೆ.

ಇಪಿಎಫ್‌ಒ ಅಭಿವೃದ್ಧಿಪಡಿಸಿರುವ ಈ ಆ್ಯಪ್‌ನ 100 ಖಾತೆಗಳನ್ನು ಪ್ರಸ್ತುತ ಪರೀಕ್ಷಿಸಿ, ಅಗತ್ಯ ಸುಧಾರಣೆಗಳನ್ನು ಮಾಡಲಾಗುತ್ತಿದೆ. ಇದು ಏಪ್ರಿಲ್‌ನಲ್ಲಿ ಬಳಕೆಗೆ ಲಭ್ಯವಾಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಊಟ ಮಾಡುವಾಗಲೂ ಮೊಬೈಲ್ ಏಕೆ ? : ಪ್ರಧಾನಿ ಮೋದಿ
ತಿರುಪತಿಯಲ್ಲಿ ಮದುವೆಗೆ ಇನ್ನು ದಕ್ಷಿಣೆ ಇಲ್ಲ!