ತಿರುಪತಿಯಲ್ಲಿ ಮದುವೆಗೆ ಇನ್ನು ದಕ್ಷಿಣೆ ಇಲ್ಲ!

Kannadaprabha News   | Kannada Prabha
Published : Feb 10, 2026, 04:05 AM IST
Tirupati Temple

ಸಾರಾಂಶ

ಕನಿಷ್ಠ ಶುಲ್ಕ ಪಡೆದು ಭಕ್ತರಿಗೆ ವಿವಾಹ, ಉಪನಯನ, ಚೌಲ, ಸತ್ಯನಾರಾಯಣ ಪೂಜೆ ಮೊದಲಾದ ಕಾರ್ಯಕ್ರಮಗಳನ್ನು ನಡೆಸಿಕೊಡುವ ಯೋಜನೆಯನ್ನು ಸೋಮವಾರದಿಂದ ಆರಂಭಿಸಿರುವುದಾಗಿ ತಿರುಪತಿ ವೆಂಕಟೇಶ್ವರ ದೇವಸ್ಥಾನವನ್ನು ನಿರ್ವಹಿಸುವ ಟಿಟಿಡಿ ತಿಳಿಸಿದೆ.

ತಿರುಪತಿ: ಕನಿಷ್ಠ ಶುಲ್ಕ ಪಡೆದು ಭಕ್ತರಿಗೆ ವಿವಾಹ, ಉಪನಯನ, ಚೌಲ, ಸತ್ಯನಾರಾಯಣ ಪೂಜೆ ಮೊದಲಾದ ಕಾರ್ಯಕ್ರಮಗಳನ್ನು ನಡೆಸಿಕೊಡುವ ಯೋಜನೆಯನ್ನು ಸೋಮವಾರದಿಂದ ಆರಂಭಿಸಿರುವುದಾಗಿ ತಿರುಪತಿ ವೆಂಕಟೇಶ್ವರ ದೇವಸ್ಥಾನವನ್ನು ನಿರ್ವಹಿಸುವ ಟಿಟಿಡಿ ತಿಳಿಸಿದೆ.

ಅಡುಗೆ ಮತ್ತು ಹೂವಿನ ಅಲಂಕಾರಗಳಂತಹ ಇತರ ವ್ಯವಸ್ಥೆಗಳಿಗೆ ಹಣ

‘ತಿರುಮಲದ ಪಾಪ ವಿನಾಶನಂ ರಸ್ತೆಯಲ್ಲಿರುವ ವಿಶಾಲವಾದ ಕಲ್ಯಾಣ ಮಂಟಪದಲ್ಲಿ, ಪುರೋಹಿತರ ಮೂಲಕ ಭಕ್ತರಿಗೆ ಅಗತ್ಯವಿರುವ ಸಮಾರಂಭಗಳನ್ನು ಕನಿಷ್ಠ ಶುಲ್ಕದಲ್ಲಿ ನಡೆಸಿಕೊಡಲಾಗುತ್ತದೆ. ವಿವಾಹ ಉಚಿತವಾಗಿದ್ದು ಪುರೋಹಿತರು ದಕ್ಷಿಣೆ ಪಡೆಯಲ್ಲ. ಆದರೆ ಅಡುಗೆ ಮತ್ತು ಹೂವಿನ ಅಲಂಕಾರಗಳಂತಹ ಇತರ ವ್ಯವಸ್ಥೆಗಳಿಗೆ ಹಣ ಪಾವತಿಸಬೇಕಾಗುತ್ತದೆ’ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.

ಯಾವುದಕ್ಕೆ ಎಷ್ಟು ದಕ್ಷಿಣೆ?:

ಮದುವೆ - ಉಚಿತ, ಉಪನಯನ - 300 ರು., ಸತ್ಯನಾರಾಯಣ ವ್ರತ - 300 ರು., ಚೌಲ - 200 ರು., ನಾಮಕರಣ - 200 ರು., ಅನ್ನಪ್ರಾಶನ - 200 ರು., ಅಕ್ಷರಾಭ್ಯಾಸ - 200 ರು., ವಾಹನ ಪೂಜೆ - 200 ರು., ಕಿವಿ ಚುಚ್ಚುವಿಕೆ - 50 ರು., ಕಿವಿ ಚುಚ್ಚುವಿಕೆ (ಕುಟೀರದಲ್ಲಿ) - 100 ರು., ಮೇಳ (1 ಸೆಟ್) - 100 ರು., ಮೇಳ (2 ಸೆಟ್) - 300 ರು., ದಸ್ತ್ರ ಪೂಜೆ - 200 ರು. ಮತ್ತು ಇತರ ಧಾರ್ಮಿಕ ಸಮಾರಂಭಗಳಿಗೆ - 200 ರು. ನಿಗದಿಪಡಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Chinnu Pappu: ಕಾಸರಗೋಡಿನಲ್ಲಿ ಶವವಾಗಿ ಪತ್ತೆಯಾದ ಯುವ ಇನ್ಫ್ಲುಯೆನ್ಸರ್ ಚಿನ್ನು ಪಾಪು ಹಿನ್ನಲೆಯೇನು?
ಚಿನ್ನ ಅಡವಿಟ್ಟವರಿಗೆ ಗುಡ್ ನ್ಯೂಸ್... ಸಾಲ ಮನ್ನಾ ಬಗ್ಗೆ ಶೀಘ್ರದಲ್ಲೇ ಮಹತ್ವದ ಘೋಷಣೆ?