
ನಾಗ್ಪುರ(ಅ.28): ಭಾರತದ ಸಂಸ್ಕೃತಿ ಮತ್ತು ಹಿಂದೂ ಸಂಸ್ಕೃತಿ ದೇಶ ಮತ್ತಷ್ಟು ವಿಸ್ತಾರ ಮಾಡಿಕೊಳ್ಳೋ ಸಂಸ್ಕೃತಿ ಅಲ್ಲ. ನೆರೆಯ ರಾಷ್ಟ್ರಗಳಿಗೆ ಭಾರತ ಎಂದೂ ಬೆದರಿಸಲ್ಲ, ಅವುಗಳು ಬೆದರಿಕೆ ಎದಿರಿಸಿಲ್ಲ. ಆದರೆ ನೆರೆ ರಾಷ್ಟ್ರಗಳಿಗೆ ಚೀನಾ ಬಗ್ಗೆ ಈ ಭಾವನೆ ಇಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಭಾರತ ಜಗತ್ತಿನ ಸುಖವನ್ನು ಬಯಸುತ್ತದೆ. ಚೀನಾ ತನ್ನ ಪ್ರಭಾವ ವಿಸ್ತರಿಸುವುದನ್ನು ನಂಬುತ್ತದೆ. ಅವರಿಗೆ ಈ ಸಂಸ್ಕೃತಿಯೇ ಆಧಾರ ಎಂದು ಹೇಳಿದ್ದಾರೆ. ಈಶಾನ್ಯ ಲಡಾಖ್ ಘಟನೆ ಬೆನ್ನಲ್ಲೇ ಸಚಿವ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ.
ಭಾರತದ ನೌಕಾದಳಕ್ಕೆ F-18 ಫೈಟರ್ಸ್ ಜೆಟ್ ನೀಡಲು ಮುಂದಾದ ಅಮೆರಿಕ
ಭೂತಾನ್, ನೇಪಾಳ, ಶ್ರೀಲಂಕಾ, ಬಂಗ್ಲಾದೇಶ ಭಾರತ ಅವುಗಳ ಮೇಲೆ ಆಕ್ರಮಿಸುತ್ತದೆ ಎಂದು ಹೆದರುವುದಿಲ್ಲ. ಆದರೆ ಚೀನಾದಲ್ಲಿ ಈ ನಂಬಿಕೆ ಇಲ್ಲ, ಅವರು ಇನ್ನೊಂದು ದೇಶ ಆಕ್ರಮಿಸುವ ಸಂಸ್ಕೃತಿಯವರು ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ