
ನವದೆಹಲಿ(ಅ.21): ಕೇಂದ್ರ ಸರ್ಕಾರ ಅಂಗೀಕರಿಸಿರುವ ಮೂರು ಕೃಷಿ ಕಾಯ್ದೆಗಳು ವಿವಾದಕ್ಕೀಡಾಗಿರುವಾಗಲೇ ಕುತೂಹಲಕಾರಿ ಮಾಹಿತಿಯೊಂದು ಲಭಿಸಿದೆ. ಕಾಯ್ದೆಯನ್ನು ಶೇ.52ರಷ್ಟುರೈತರು ವಿರೋಧಿಸುತ್ತಿದ್ದು, ಆ ಪೈಕಿ ಶೇ.36ರಷ್ಟುಮಂದಿಗೆ ಕಾಯ್ದೆಯಲ್ಲಿನ ವಿವರಗಳೇ ತಿಳಿದಿಲ್ಲ ಎಂದು ಸಮೀಕ್ಷೆಯೊಂದು ತಿಳಿಸಿದೆ.
ಇದೇ ವೇಳೆ, ಸಮೀಕ್ಷೆಯಲ್ಲಿ ಶೇ.35 ಮಂದಿ ಕಾಯ್ದೆಯನ್ನು ಬೆಂಬಲಿಸಿದ್ದು, ಆ ಪೈಕಿ ಶೇ.18ರಷ್ಟುಮಂದಿಗೆ ಕಾಯ್ದೆ ವಿವರಗಳು ಗೊತ್ತಿಲ್ಲ ಎಂದು ಗಾಂವ್ ಕನೆಕ್ಷನ್ ಎಂಬ ಸಂಸ್ಥೆಯ ಸಮೀಕ್ಷೆ ತಿಳಿಸಿದೆ.
ಅ.3ರಿಂದ ಅ.9ರವರೆಗೆ ದೇಶದ 16 ರಾಜ್ಯಗಳ 53 ಜಿಲ್ಲೆಗಳಲ್ಲಿ ಮುಖಾಮುಖಿ ಮಾತನಾಡಿಸಿ ಈ ಸಮೀಕ್ಷೆ ನಡೆಸಲಾಗಿದೆ. 5022 ರೈತರನ್ನು ಸಂದರ್ಶಿಸಲಾಗಿದೆ ಎಂದು ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದೆ.
‘ಹೊಸ ಕೃಷಿ ಕಾನೂನುಗಳ ಕುರಿತು ಭಾರತೀಯ ರೈತರ ಪರಿಕಲ್ಪನೆ’ ಎಂಬ ಹೆಸರಿನ ಸಮೀಕ್ಷೆ ಇದಾಗಿದೆ. ಸಮೀಕ್ಷೆಯಲ್ಲಿ ಭಾಗಿಯಾದ ಶೇ.57 ಮಂದಿ ತಮ್ಮ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕಾಗುತ್ತದೆ ಎಂಬ ಆತಂಕ ಹೊಂದಿದ್ದಾರೆ. ಶೇ.33ರಷ್ಟುಮಂದಿ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ಸರ್ಕಾರ ಅಂತ್ಯಗೊಳಿಸಲಿದೆ ಎಂದು ಭೀತಿ ಹೊಂದಿದ್ದಾರೆ ಎಂದು ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ