ರಾಷ್ಟ್ರೀಯ ಸಿನಿಮಾ ಪ್ರಶಸ್ತಿ: ಇಂದಿರಾಗಾಂಧಿ, ನರ್ಗೀಸ್‌ ದತ್‌ ಹೆಸರಿಗೆ ಕೊಕ್‌!

By Santosh NaikFirst Published Feb 13, 2024, 7:39 PM IST
Highlights

ಹಲವು ಪ್ರಶಸ್ತಿಗಳಿಗೆ ನೀಡಲಾಗುವ ನಗದು ಬಹುಮಾನದ ಹಣವನ್ನು ಏರಿಕೆ ಮಾಡಲಾಗಿದೆ. ಪ್ರತಿಷ್ಠಿತ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿಯ ಮೊತ್ತವನ್ನು ಏರಿಕೆ ಮಾಡಲಾಗಿದ್ದರೆ, ಇನ್ನೂ ಕೆಲವು ಹೆಸರಿನ ಪ್ರಶಸ್ತಿಗಳನ್ನು ನಿಲ್ಲಿಸಲಾಗಿದೆ.
 

ನವದೆಹಲಿ (ಫೆ.13): 'ಅತ್ಯುತ್ತಮ ಚೊಚ್ಚಲ ಚಿತ್ರಕ್ಕಾಗಿ ಇಂದಿರಾಗಾಂಧಿ ಪ್ರಶಸ್ತಿ' ಮತ್ತು 'ರಾಷ್ಟ್ರೀಯ ಏಕೀಕರಣದ ಅತ್ಯುತ್ತಮ ಚಲನಚಿತ್ರಕ್ಕಾಗಿ ನರ್ಗೀಸ್ ದತ್ ಪ್ರಶಸ್ತಿ'ಗಳ ಹೆಸರನ್ನು ಕೇಂದ್ರ ಸರ್ಕಾರ ಬದಲಾವಣೆ ಮಾಡಿದೆ. ಹೊಸ ಹೆಸರಿನಲ್ಲಿ ಮಾಜಿ ಪ್ರಧಾನಿ ಹಾಗೂ ದಿಗ್ಗಜ ನಟಿಯ ಹೆಸರನ್ನು ಕೈಬಿಡಲಾಗಿದೆ. ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯ ಪಟ್ಟಿಯಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದೆ ಎಂದು ನೋಟಿಫಿಕೇಶನ್‌ನಲ್ಲಿ ತಿಳಿಸಲಾಗಿದೆ. '70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ನಿಯಮಗಳು 2022' ವಿವಿಧ ವಿಭಾಗಗಳಲ್ಲಿ ನೀಡಲಾಗುವ ಗೌರವಗಳಿಗೆ  ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸ್ಥಾಪಿಸಿದ ಸಮಿತಿಯು ಸೂಚಿಸಿದ ಬದಲಾವಣೆಗಳನ್ನು ಪ್ರತಿಬಿಂಬಿಸುತ್ತದೆ. ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಸೇರಿದಂತೆ ಹಲವು ವಿಭಾಗಗಳ ಪ್ರಶಸ್ತಿಗೆ ನಗದು ಮೊತ್ತವನ್ನು ಏರಿಕೆ ಮಾಡಲಾಗಿದೆ. ಇನ್ನೂ ಕೆಲವು ಪ್ರಶಸ್ತಿಗಳನ್ನು ನಿಲ್ಲಿಸಲಾಗಿದೆ. ಕೋವಿಡ್‌ ಸಮಯದಲ್ಲಿಯೇ ಈ ಬದಲಾವಣೆಗಳನ್ನು ಮಾಡುವುದಾಗಿ ಪ್ರಸ್ತಾಪ ಮಾಡಲಾಗಿತ್ತು. ಕೊನೆಗೆ ಅವಿರೋಧವಾಗಿ ಹೆಸರು ಬದಲಾವಣೆ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದು ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಸಮಿತಿಯ ಸದಸ್ಯರೊಬ್ಬರು ಹೇಳಿದ್ದಾರೆ.

ಸಮಿತಿಯ ಸದಸ್ಯರಾಗಿರುವ ನಿರ್ದೇಶಕ ಪ್ರಿಯದರ್ಶನ್‌, ಕಳೆದ ಡಿಸೆಂಬರ್‌ನಲ್ಲಿ ನಾನು ಶಿಫಾರಸುಗಳನ್ನು ನೀಡಿದ್ದೆ. ನಾನು ತಾಂತ್ರಿಕ ವಿಭಾಗದಲ್ಲಿ ಧ್ವನಿ ವಿಚಾರವಾಗಿ ಕೆಲವೊಂದು ಶಿಫಾರಸು ಮಾಡಿದ್ದೆ ಎಂದು ಹೇಳಿದ್ದಾರೆ. 2022ರ ರಾಷ್ಟ್ರೀಯ ಪ್ರಶಸ್ತಿಯ ಎಂಟ್ರಿಗಳು ಜನವರಿ 30ಕ್ಕೆ ಕೊನೆಯಾಗಿದೆ. ಕೋವಿಡ್‌ ಸಾಂಕ್ರಾಮಿಕದ ಕಾರಣದಿಂದಾಗಿ ಒಂದು ವರ್ಷ ತಡವಾಗಿ ಪ್ರಶಸ್ತಿ ನೀಡಲಾಗುತ್ತಿದೆ. 2021ರ ರಾಷ್ಟ್ರೀಯ ಪ್ರಶಸ್ತಿಗಳನ್ನು ಕಳೆದ ವರ್ಷ ನೀಡಲಾಗಿತ್ತು.
ಅತ್ಯುತ್ತಮ ಚೊಚ್ಚಲ ಚಿತ್ರಕ್ಕಾಗಿ ಇಂದಿರಾ ಗಾಂಧಿ ಪ್ರಶಸ್ತಿಯನ್ನು ಸಮಿತಿಯು ಅಪ್‌ಲೋಡ್ ಮಾಡಿದ ಅಧಿಸೂಚನೆಯಲ್ಲಿ ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಿತ್ರ ಎಂದು

ಉಲ್ಲೇಖಿಸಲಾಗಿದೆ, ಆದರೆ ರಾಷ್ಟ್ರೀಯ ಏಕೀಕರಣದ ಅತ್ಯುತ್ತಮ ಚಲನಚಿತ್ರಕ್ಕಾಗಿ ನರ್ಗೀಸ್ ದತ್ ಪ್ರಶಸ್ತಿಯನ್ನು ರಾಷ್ಟ್ರೀಯ, ಸಾಮಾಜಿಕ ಮತ್ತು ಪರಿಸರವನ್ನು ಉತ್ತೇಜಿಸುವ ಅತ್ಯುತ್ತಮ ಚಲನಚಿತ್ರ ಎಂದು ಮರುನಾಮಕರಣ ಮಾಡಲಾಗಿದೆ. ಮೌಲ್ಯಗಳು, ಸಾಮಾಜಿಕ ಸಮಸ್ಯೆಗಳು ಮತ್ತು ಪರಿಸರ ಸಂರಕ್ಷಣೆಯ ವರ್ಗಗಳನ್ನು ಒಂದಾಗಿ ವಿಲೀನಗೊಳಿಸಲಾಗಿದೆ. ಸ್ವರ್ಣಕಮಲ ಗೌರವಕ್ಕೆ 3 ಲಕ್ಷ ರೂಪಾಯಿ ನಗದು, ರಜತ ಕಮಲಕ್ಕೆ 2 ಲಕ್ಷ ರೂಪಾಯಿ ನಗದು ನೀಡಲಾಗುತ್ತದೆ.

Latest Videos

ಸಮಿತಿಯ ನೇತೃತ್ವವನ್ನು I&B ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ನೀರ್ಜಾ ಶೇಖರ್ ವಹಿಸಿದ್ದರು. ಇದರಲ್ಲಿ ಚಲನಚಿತ್ರ ನಿರ್ಮಾಪಕರಾದ ಪ್ರಿಯದರ್ಶನ್, ವಿಪುಲ್ ಶಾ, ಹಾಬಾಮ್ ಪಬನ್ ಕುಮಾರ್, ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಮುಖ್ಯಸ್ಥ ಪ್ರಸೂನ್ ಜೋಶಿ, ಛಾಯಾಗ್ರಾಹಕ ಎಸ್ ನಲ್ಲಮುತ್ತು ಹಾಗೂ I&B ಜಂಟಿ ಕಾರ್ಯದರ್ಶಿ ಪೃಥುಲ್ ಕುಮಾರ್ ಮತ್ತು ಸಚಿವಾಲಯದ ನಿರ್ದೇಶಕ (ಹಣಕಾಸು) ಕಮಲೇಶ್ ಕುಮಾರ್ ಸಿನ್ಹಾ ಇದ್ದರು.

ಭಾರತೀಯ ಚಿತ್ರರಂಗಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಪ್ರತಿ ವರ್ಷ ಭಾರತೀಯ ಚಿತ್ರರಂಗದ ವ್ಯಕ್ತಿಗಳಿಗೆ ನೀಡಲಾಗುವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯ ನಗದು ಬಹುಮಾನವನ್ನು 10 ಲಕ್ಷದಿಂದ 15 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅಲ್ಲದೆ, ಸ್ವರ್ಣ್ ಕಮಲ್ ಪ್ರಶಸ್ತಿಗಳ ಬಹುಮಾನದ ಮೊತ್ತವನ್ನು 3 ಲಕ್ಷ ರೂ.ಗೆ ಮತ್ತು ರಜತ್ ಕಮಲ್ ವಿಜೇತರಿಗೆ ವಿಭಾಗಗಳಾದ್ಯಂತ 2 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಮೊದಲು, ಪ್ರಶಸ್ತಿಯ ಹಣವು ವರ್ಗದಿಂದ ವರ್ಗಕ್ಕೆ ಬದಲಾಗುತ್ತಿತ್ತು. ಸ್ವರ್ಣ್ ಕಮಲ್ ಪ್ರಶಸ್ತಿಯನ್ನು ಅತ್ಯುತ್ತಮ ಚಿತ್ರ, ಚೊಚ್ಚಲ ಚಿತ್ರ, ಆರೋಗ್ಯಕರ ಮನರಂಜನೆಯನ್ನು ಒದಗಿಸುವ ಚಿತ್ರ, ನಿರ್ದೇಶನ ಮತ್ತು ಮಕ್ಕಳ ಚಿತ್ರ ವಿಭಾಗದಲ್ಲಿ ನೀಡಲಾಗುತ್ತಿತ್ತು.

ಭಾರತದಲ್ಲಿ ಅತೀ ಹೆಚ್ಚು ನ್ಯಾಷನಲ್ ಅವಾರ್ಡ್ ಪಡೆದ ನಟಿ; ವಿದ್ಯಾ ಬಾಲನ್, ಕಂಗನಾ ರಣಾವತ್ ಅಲ್ಲ, ಮತ್ಯಾರು?

ರಾಷ್ಟ್ರೀಯ, ಸಾಮಾಜಿಕ ಮತ್ತು ಪರಿಸರ ಮೌಲ್ಯಗಳನ್ನು ಉತ್ತೇಜಿಸುವ ಅತ್ಯುತ್ತಮ ಚಲನಚಿತ್ರ, ಎಲ್ಲಾ ನಟನಾ ವಿಭಾಗಗಳು, ಅತ್ಯುತ್ತಮ ಚಿತ್ರಕಥೆ, ಸಂಗೀತ ಮತ್ತು ಇತರ ವಿಭಾಗಗಳ ವಿಜೇತರಿಗೆ ರಜತ ಕಮಲ ನೀಡಲಾಗುತ್ತದೆ. ಮತ್ತೊಂದು ಗಮನಾರ್ಹ ಬದಲಾವಣೆಯಲ್ಲಿ, 'ಅತ್ಯುತ್ತಮ ಅನಿಮೇಷನ್ ಚಲನಚಿತ್ರ' ಮತ್ತು 'ಅತ್ಯುತ್ತಮ ವಿಶೇಷ ಪರಿಣಾಮ' ಪ್ರಶಸ್ತಿಗಳನ್ನು ಎರಡು ಉಪ-ವರ್ಗಗಳೊಂದಿಗೆ "ಅತ್ಯುತ್ತಮ AVGC (ಅನಿಮೇಷನ್, ದೃಶ್ಯ ಪರಿಣಾಮಗಳು, ಗೇಮಿಂಗ್ ಮತ್ತು ಕಾಮಿಕ್ಸ್) ಚಲನಚಿತ್ರ" ಎಂಬ ಹೊಸ ವರ್ಗದ ಅಡಿಯಲ್ಲಿ ಕ್ಲಬ್ ಮಾಡಲಾಗಿದೆ. 'ಅತ್ಯುತ್ತಮ ಆಡಿಯೊಗ್ರಫಿ' ವಿಭಾಗವು ಈಗ ಅತ್ಯುತ್ತಮ ಧ್ವನಿ ವಿನ್ಯಾಸ ಎಂದು ಕರೆಯಲ್ಪಡುತ್ತದೆ. ಇದರ ಬಹುಮಾನ ಮೊತ್ತವನ್ನು 50 ಸಾವಿರದಿಂದ 2 ಲಕ್ಷಕ್ಕೆ ಏರಿಸಲಾಗಿದೆ.

ನಾನು ಸಾಧನವಷ್ಟೇ ನಿಜವಾದ ಸಾಧಕ ಅವರೆಂದ ಬನ್ನಿ: ನಟ ಅಲ್ಲು ಅರ್ಜುನ್‌ ಹೀಗೆ ಹೇಳಿದ್ದೇಕೆ ?

click me!