ಸಂಸತ್‌ ದಾಳಿ ಮಾಸ್ಟರ್‌ಮೈಂಡ್‌ ಮೈಸೂರಿನ ಮನೋರಂಜನ್‌..!

By Kannadaprabha NewsFirst Published Jan 14, 2024, 10:01 AM IST
Highlights

ಮಂಪರು ಪರೀಕ್ಷೆಯಲ್ಲಿ ಇಡೀ ಕೃತ್ಯದ ಮಾಸ್ಟರ್‌ ಮೈಂಡ್‌ ಮೈಸೂರು ಮೂಲದ ಮನೋರಂಜನ್‌ ಎಂಬುದು ದೃಢಪಟ್ಟಿದೆ. 

ನವದೆಹಲಿ(ಜ.14):  ಡಿ.13ರಂದು ಸಂಸತ್ ಭವನದ ಒಳಗೆ 'ಹೊಗೆ ಬಾಂಬ್‌' ಸಿಡಿಸಿ ಭದ್ರತಾ ಲೋಪ ಎಸಗಿದ ಆರೋಪದ ಮೇಲೆ ಐವರು ಆರೋಪಿಗಳನ್ನು ಶುಕ್ರವಾರ ಮಂಪರು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪರೀಕ್ಷೆಯಲ್ಲಿ ಇಡೀ ಕೃತ್ಯದ ಮಾಸ್ಟರ್‌ ಮೈಂಡ್‌ ಮೈಸೂರು ಮೂಲದ ಮನೋರಂಜನ್‌ ಎಂಬುದು ದೃಢಪಟ್ಟಿದೆ ಪೊಲೀಸ್ ಮೂಲಗಳು ತಿಳಿಸಿವೆ. 

ಶುಕ್ರವಾರ ಗುಜರಾತ್‌ನ ಗಾಂಧಿನಗರದಲ್ಲಿ ನಡೆದ ಮಂಪರು ಪರೀಕ್ಷೆಯಲ್ಲಿ ಮನೋರಂಜನ್ ಹಾಗೂ ಸಾಗರ್ ಶರ್ಮಗೆ ವಿಶೇಷ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆ ವೇಳೆ ಸತ್ಯ ಹೊರಬಂದಿದೆ. 

Latest Videos

‘ಹೊಗೆಬಾಂಬ್’ ಹಿಂದೆ ಬೇರೆ ಮಾಸ್ಟರ್‌ಮೈಂಡ್‌? ಸಂಸತ್‌ ದಾಳಿಗೆ ಪ್ಲ್ಯಾನ್‌ ಬಿ ಸಹ ಯೋಜಿಸಿದ್ದ ದಾಳಿಕೋರರು!

ಈ ಹಿಂದೆ ಸಂಸತ್ ಸ್ಫೋಟದ ರೂವಾರಿ ಬಂಗಾಳ ಮೂಲದ ಲಲಿತ್ ಝಾ ಎಂದು ಹೇಳಲಾಗಿತ್ತು. 

click me!