ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಗಣೇಶನಿಗೆ ಪ್ರಥಮ ಆಹ್ವಾನ ನೀಡಿದ ಮುಸ್ಲಿಂ ಯುವಕ; ಕಾರ್ಡ್ ವೈರಲ್

Published : Feb 25, 2024, 01:48 PM IST
ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಗಣೇಶನಿಗೆ ಪ್ರಥಮ ಆಹ್ವಾನ ನೀಡಿದ ಮುಸ್ಲಿಂ ಯುವಕ; ಕಾರ್ಡ್ ವೈರಲ್

ಸಾರಾಂಶ

ಮುಸ್ಲಿಂ ಯುವಕನೊಬ್ಬ ಕೋಮು ಸೌಹಾರ್ದತೆ ಸಂದೇಶ ಸಾರಲು ತನ್ನ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಪ್ರಥಮ ಪೂಜಿತ ಗಣಪತಿಯ ಫೋಟೋ ಹಾಕಿಸಿ, ಗಣೇಶನಿಗೆ ಮೊದಲ ಆಹ್ವಾನ ನೀಡಿದ್ದಾನೆ.

ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಸಫಿಪುರ್ ಗ್ರಾಮದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಹಿಂದೂ ಸಂಪ್ರದಾಯಗಳಿಗೆ ಅನುಗುಣವಾಗಿ ತನ್ನ ಮಗನ ಮದುವೆಗೆ ಆಮಂತ್ರಣಗಳನ್ನು ಮುದ್ರಿಸಿದ್ದಾರೆ.

ಕೋಮು ಸೌಹಾರ್ದತೆಯ ಹೃದಯಸ್ಪರ್ಶಿ ಪ್ರದರ್ಶನ ಇದಾಗಿದ್ದು, ಪತ್ರಿಕೆಯು ವೈರಲ್ ಆಗಿದೆ.

ಗಣೇಶನಿಗೆ ಪ್ರಥಮ ಆಹ್ವಾನ
ಈ ಕಾರ್ಡ್ ಮುಸ್ಲಿಂ ಯುವಕನ ಮದುವೆಯದ್ದಾಗಿದೆ. ಆದರೆ ಇದನ್ನು ಉರ್ದುವಿನ ಬದಲು ಹಿಂದಿಯಲ್ಲಿ ಮುದ್ರಿಸಲಾಗಿದೆ. ಮಾತ್ರವಲ್ಲ, ಹಿಂದೂ ಸಂಪ್ರದಾಯಗಳಿಗೆ ಸಂಬಂಧಿಸಿದ ಪದಗಳನ್ನು ಸಹ ಬಳಸಲಾಗಿದೆ. ಇದರಲ್ಲಿ ಮೊದಲ ಆಮಂತ್ರಣವನ್ನು ಗಣೇಶನಿಗೆ ನೀಡಲಾಗಿದೆ. ಜೊತೆಗೆ ಗಣೇಶನ ಚಿತ್ರವನ್ನು ಹಾಕಲಾಗಿದೆ. ಮದುವೆಗೆ ಸಾಕ್ಷಿಯಾಗಲು ಪಂಚ ಪ್ರಕೃತಿಗೂ ಆಹ್ವಾನ ನೀಡಲಾಗಿದೆ.

145 ಕೋಟಿ ರೂ. ಆಫರ್ ತಿರಸ್ಕರಿಸಿ 8300 ಕೋಟಿ ರೂ. ಕಂಪನಿ ಕಟ್ಟಿದ ಸುಂದ ...
 

ಇದು ಬಹುಶಃ ಮುಸ್ಲಿಂ ಕುಟುಂಬವೊಂದು   ಮೊದಲ ಆಮಂತ್ರಣವನ್ನು ಭಗವಾನ್ ಗಣೇಶನಿಗೆ  ಅರ್ಪಿಸಿದ ಮದುವೆಯ ಮೊದಲ ಕಾರ್ಡ್ ಆಗಿದೆ. ಯುವಕ ತನ್ನ ಮದುವೆ ಕಾರ್ಡ್ ಅನ್ನು ತನ್ನ ಸಮುದಾಯದವರು ಮತ್ತು ಸಂಬಂಧಿಕರಿಗೆ ನೀಡಿದ್ದಲ್ಲದೆ ಹಿಂದೂ ಧರ್ಮಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೂ ನೀಡಿದ್ದಾನೆ.

ಸಫಿಪುರ್ ಗ್ರಾಮದಲ್ಲಿ ವಾಸಿಸುತ್ತಿರುವ ಅಝುಲ್ ಕಮರ್ ಅವರ ಪುತ್ರ ಸಮೀರ್ ಅಹ್ಮದ್ ಫೆಬ್ರವರಿ 29ರಂದು ವಿವಾಹವಾಗಲಿದ್ದಾರೆ.  ಮದುವೆಗೆ ಇನ್ನೂ ಒಂದು ವಾರ ಬಾಕಿ ಇದೆ, ಆದರೆ ಈ ಮದುವೆ ಕಾರ್ಡ್ ಈಗಾಗಲೇ ವೈರಲ್ ಆಗಿದೆ. ಹಿಂದೂ ಪದ್ಧತಿಯಂತೆ ಮುದ್ರಿತವಾಗಿರುವ ಈ ಕಾರ್ಡ್ 'ಶ್ರೀ ಗಣೇಶಾಯ ನಮಃ' ಎಂದು ಪ್ರಾರಂಭವಾಗುತ್ತದೆ. ಹಿಂದಿ ಭಾಷೆಯಲ್ಲಿ ಮುದ್ರಿಸಲಾದ ಈ ಕಾರ್ಡ್ ಅನ್ನು ವಿನಮ್ರ ಮತ್ತು ದರ್ಶನಾಭಿಲಾಷಿಯೊಂದಿಗೆ ಮುಕ್ತಾಯಗೊಳಿಸಲಾಗಿದೆ. ಪತ್ರಿಕೆಯಲ್ಲಿ ಶ್ರೀ ಶುಭ್ ಎಂದು ಕಳಶದ ಚಿತ್ರವನ್ನೂ ಹಾಕಲಾಗಿದೆ. 

ಹಿಂದೂಗಳಿಗಾಗಿ ಹಿಂದಿಯಲ್ಲಿ ಮುದ್ರಿಸಲಾದ ಕಾರ್ಡ್
ಅದರ ಮೇಲೆ ಸಂಭ್ರಮದಿಂದ ಶುಭ ವಿವಾಹ, ವರನಿಗೆ ಚಿರಂಜೀವಿ ಮತ್ತು ವಧುವಿಗೆ ಆಯುಷ್ಮತಿ ಕುಮಾರಿ ಎಂದು ಬರೆಯಲಾಗಿದೆ. ಸಾಮಾನ್ಯವಾಗಿ ಇಂತಹ ಪದಗಳನ್ನು ಹಿಂದೂ ಮದುವೆ ಕಾರ್ಡ್‌ಗಳಲ್ಲಿ ಬಳಸಲಾಗುತ್ತದೆ. ಜರ್ವಾಲ್ ರಸ್ತೆಯ ನಿವಾಸಿ ಜುಮೆರಾತಿ ಅವರ ಪುತ್ರಿ ಸಾನಿಯಾ ಖಾತೂನ್ ಅವರೊಂದಿಗೆ ಸಮೀರ್ ಅವರ ಮದುವೆ ನಿಶ್ಚಯವಾಗಿದೆ. ನಿಯಮಗಳ ಪ್ರಕಾರ, ಮುಸ್ಲಿಂ ಸಮಾಜದ ಮದುವೆ ಕಾರ್ಡ್‌ಗಳಲ್ಲಿ, ಮದುವೆಯ ಬದಲಿಗೆ, 'ನಿಕಾಹ್' ಅಥವಾ 'ವೆಡ್ಸ್' ಎಂಬ ಇಂಗ್ಲಿಷ್ ಪದವನ್ನು ಬಳಸಲಾಗುತ್ತದೆ. ಆದರೆ ಇಲ್ಲಿ 'ಶುಭ ವಿವಾಹ' ಪದವನ್ನು ಬಳಸಲಾಗಿದೆ.

ಹೆಚ್ಚು ಸ್ಟ್ರೆಚ್ ಮಾಡಿಸಲು ಹೋಗಿ ಮಹಿಳೆಯ ಕಾಲನ್ನೇ ಮುರಿದ ಯೋಗ ಟೀಚರ್! ...
 

ಮುಸ್ಲಿಮರಿಗೆ ಉರ್ದುವಿನಲ್ಲಿ ಮುದ್ರಿತ ಕಾರ್ಡ್ 
ಈ ಕಾರ್ಡ್ ಬಗ್ಗೆ ಪತ್ರಕರ್ತರು ಸಮೀರ್ ಅವರ ತಂದೆ ಉಜುಲ್ ಅವರನ್ನು ಕೇಳಿದಾಗ, ಅವರು ಈ ಮದುವೆಯ ಆಮಂತ್ರಣಗಳನ್ನು ಹೆಚ್ಚಾಗಿ ಹಿಂದೂ ಸಹೋದರರಿಗೆ ಕಳುಹಿಸಲಾಗುವುದು ಎಂದು ಹೇಳಿದರು. ಹೀಗಾಗಿ ಹಿಂದೂ ಸಂಪ್ರದಾಯದಂತೆ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಲಾಗಿದೆ. ತಮ್ಮ ಸಮುದಾಯದ ಜನರು ಮತ್ತು ಸಂಬಂಧಿಕರಿಗಾಗಿ ಉರ್ದು ಭಾಷೆಯಲ್ಲಿ ಮುದ್ರಿಸಲಾದ ಕಾರ್ಡ್‌ಗಳನ್ನು ಪಡೆದಿರುವುದಾಗಿ ಹೇಳಿದರು. ಈ ಮದುವೆಯಲ್ಲಿ ಕಾರ್ಡ್ ಮಾತ್ರವಲ್ಲ, ಬಹಳಷ್ಟು ವಿಷಯಗಳು ವಿಭಿನ್ನವಾಗಿರುತ್ತವೆ ಎಂದು ಅವರು ಹೇಳಿದರು. ಇದರಲ್ಲಿ ಮದುವೆಗೆ ಒಂದು ದಿನ ಮುಂಚಿತವಾಗಿ ಹಿಂದೂ ಬಾಂಧವರಿಗೆ ಔತಣ ಕೂಟ ಏರ್ಪಡಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮಾಲೀಕನ ನಿಧನಕ್ಕೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಶ್ವಾನ; ವಿಡಿಯೋ ನೋಡಿ ಭಾವುಕರಾದ ಜನರು
India Latest News Live: ಭಾರತ-ದಕ್ಷಿಣ ಆಫ್ರಿಕಾ 2ನೇ ಟಿ20 - ಮತ್ತೊಂದು ಗೆಲುವಿನ ವಿಶ್ವಾಸದಲ್ಲಿ ಟೀಂ ಇಂಡಿಯಾ!