
ಮುಂಬೈ [ಮಾ.20] : ಕೊರೋನಾ ಭೀತಿ ಹಿನ್ನೆಲೆ ಯುಎಇ, ಕುವೈತ್, ಕತಾರ್ ಮತ್ತು ಒಮಾನ್ ಸೇರಿಕೊಲ್ಲಿ ದೇಶಗಳಿಂದ ಸುಮಾರು 26 ಸಾವಿರ ಭಾರತೀಯರು ಮುಂಬೈಗೆ ಆಗಮಿಸಲಿದ್ದು, ಅವರೆಲ್ಲ ರನ್ನೂ 14 ದಿನಗಳ ಕಾಲ ಪ್ರತ್ಯೇಕವಾಗಿ ಇಡುವು ದಕ್ಕೆ ಮುಂಬೈ ಮಹಾನಗರ ಪಾಲಿಕೆ ವ್ಯವಸ್ಥೆ ಮಾಡಿಕೊಂಡಿದೆ.
ಗಲ್ಫ್ ರಾಷ್ಟ್ರಗಳಿಂದ ಮುಂಬೈಗೆ ನಿತ್ಯ 23 ವಿಮಾನಗಳು ಆಗಮಿಸುತ್ತಿವೆ. ಮಾ.31ರ ಒಳಗಾಗಿ ಸುಮಾರು 26,000 ಮಂದಿ ಆಗಮಿಸುವ ನಿರೀಕ್ಷೆ ಇದೆ.
ಭಾರತದಲ್ಲಿ ಕೊರೋನಾಗೆ 5ನೇ ಬಲಿ : ಜೈಪುರದಲ್ಲಿ ವ್ಯಕ್ತಿ ಸಾವು..
ಇದುವರೆಗೆ ಮಹಾರಾಷ್ಟ್ರಕ್ಕೆ ದುಬೈ ನಿಂದ 15 ಮಂದಿ ಆಗಮಿಸಿದ್ದು ಅವರಿಗೆ ಕೊರೋನಾ ವೈರಸ್ ಇರುವುದು ದೃಢಪಟ್ಟಿದೆ. ಹೀಗಾಗಿ ಸ್ಥಳೀಯವಾಗಿ ಆತಂಕ ಹೆಚ್ಚಿಸಿದೆ.
ದೇಶದಲ್ಲಿ ಇದೀಗ ಕೊರೋನಾ ಸೋಂಕಿತರ ಸಂಖ್ಯೆ 200ರ ಗಡಿ ದಾಟಿದೆ. ಭಾರತದಲ್ಲಿ ಇಟಲಿ ಪ್ರವಾಸಿಗನೋರ್ವ ಸಾವಿಗೀಡಾಗಿದ್ದು, ಒಟ್ಟು ಕೊರೋನಾದಿಂದ ಐದು ಮಂದಿ ಸಾವಿಗೀಡಾದಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ