Animal Cruelty: ಮಗನನ್ನು ಕಚ್ಚಿದ ನಾಯಿಗೆ ಇದೆಂತಹಾ ಘೋರ ಶಿಕ್ಷೆ, ಕಾಲು ಕತ್ತರಿಸಿ ಕೊಂದೇ ಹಾಕಿದ!

By Suvarna NewsFirst Published Dec 2, 2021, 9:49 AM IST
Highlights

* ಮಗನಿಗೆ ಕಚ್ಚಿದ ಬೋಈದಿ ನಾಯಿ

* ಕೋಪಗೊಂಡು ನಾಯಿಯ ಕಾಲನ್ನೇ ಕತ್ತರಿಸಿದ ತಂದೆ

* ಕಾಲು ಕತ್ತರಿಸಿಯೂ ಸುಮ್ಮನಾಗಲಿಲ್ಲ, ಹಿಗ್ಗಾಮುಗ್ಗ ಥಳಿಸಿ ಕೊಂದೇ ಹಾಕಿದ

ಗ್ವಾಲಿಯರ್(ಡಿ.02): ಮಧ್ಯಪ್ರದೇಶದ ಗ್ವಾಲಿಯರ್ (Madhya Pradesh, Gwalior) ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬನ ಮಗನಿಗೆ ಬೀದಿ ನಾಯಿ ಕಚ್ಚಿದ್ದು, ಇದರಿಂದ ಕೋಪಗೊಂಡ ವ್ಯಕ್ತಿ ನಾಯಿಯನ್ನು ಕೊಂದಿದ್ದಾನೆ ಎನ್ನಲಾಗಿದೆ. ಪೊಲೀಸರು ಬುಧವಾರ ಈ ಮಾಹಿತಿ ನೀಡಿದ್ದಾರೆ. ಸುಮಾರು ಒಂದು ತಿಂಗಳ ಹಿಂದೆ ಸಿಮಾರಿಯಾ ತಾಲ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನಾಯಿಯನ್ನು (Dog) ಕೊಂದಿರುವ ವಿಡಿಯೋ ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ ಎಂದು ದೇಹತ್ ಪೊಲೀಸ್ ಠಾಣೆಯ ಉಸ್ತುವಾರಿ ಆನಂದ್ ಕುಮಾರ್ ಹೇಳಿದ್ದಾರೆ. ಇದಾದ ಬಳಿಕ ಪ್ರಾಣಿ ಹಕ್ಕುಗಳ ಕಾರ್ಯಕರ್ತರೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

ದೂರದಿಂದ ಚಿತ್ರೀಕರಿಸಲಾದ ವೀಡಿಯೊದಲ್ಲಿ, ವ್ಯಕ್ತಿ ನಾಯಿಯನ್ನು ಥಳಿಸುತ್ತಿರುವುದು, ನಾಯಿ ನೋವಿನಿಂದ ಕಿರುಚುತ್ತಿರುವುದನ್ನು ಕಾಣಬಹುದು. ಇದಾದ ನಂತರ ವ್ಯಕ್ತಿ ಚೂಪಾದ ಆಯುಧದಿಂದ ನಾಯಿಯ ಕಾಲನ್ನು ಕತ್ತರಿಸಿದ್ದಾನೆ. ಪ್ರಾಣಿಗಳ ಹಕ್ಕುಗಳಿಗಾಗಿ ಕೆಲಸ ಮಾಡುತ್ತಿರುವ ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (PETA) ನ ಕಾರ್ಯಕರ್ತರೊಬ್ಬರು ಈ ವಿಷಯದಲ್ಲಿ ಗ್ವಾಲಿಯರ್ ಪೊಲೀಸರಿಂದ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಕಂಬಳದ ವಿರುದ್ಧ ಮತ್ತೆ ಧ್ವನಿ ಎತ್ತಿದ ಪೆಟಾ..!

ದೂರಿನ ಮೇರೆಗೆ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಮಿತ್ ಸಂಘಿ ಪಿಟಿಐಗೆ ತಿಳಿಸಿದ್ದಾರೆ. ಗ್ರಾಮಸ್ಥರ ಪ್ರಕಾರ, ಆರೋಪಿ ಸಾಗರ್ ವಿಶ್ವಾಸ್ ಕೋಪಗೊಂಡಿದ್ದು, ನಾಯಿ ತನ್ನ ಮಗನ ಮೇಲೆ ದಾಳಿ ಮಾಡಿದ್ದಕ್ಕೆ ಹೀಗೆ ಮಾಡಿರುವುದಾಗಿ ತಿಳಿಸಿದ್ದಾನೆ. ಗ್ರಾಮದಲ್ಲಿ ಕನಿಷ್ಠ ಐದು ಜನರಿಗೆ ಈ ನಾಯಿ ಕಚ್ಚಿದೆ ಎನ್ನಲಾಗಿದೆ.

ಆರೋಪಿಗಳಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ. ಸರ್ಕಾರೇತರ ಸಂಸ್ಥೆ (ಎನ್‌ಜಿಒ) ಪೀಪಲ್ ಫಾರ್ ಅನಿಮಲ್ಸ್ (ಪಿಎಫ್‌ಎ) ಕಾರ್ಯಕರ್ತೆ ಛಾಯಾ ತೋಮರ್ ಅವರ ದೂರಿನ ಆಧಾರದ ಮೇಲೆ ಪೊಲೀಸರು ಭಾರತೀಯ ದಂಡ ಸಂಹಿತೆ (ಐಪಿಸಿ) 429 (ಪ್ರಾಣಿಗಳ ಅನಾಗರಿಕ ಚಿಕಿತ್ಸೆ, ವಿಷಪೂರಿತ, ಅಂಗವಿಕಲತೆ, ಕೊಲ್ಲುವುದು) ಸೆಕ್ಷನ್‌ಗಳನ್ನು ದಾಖಲಿಸಿದ್ದಾರೆ. ) ಮತ್ತು ಪ್ರಾಣಿ ಹಿಂಸೆ, ಪ್ರತಿಬಂಧಕ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪೇಟಾ ಕಾರ್ಯಕರ್ತರಾದ ಅಶರ್ ಮತ್ತು ಪ್ರಿಯಾಂಶು ಜೈನ್ ಅವರನ್ನು ಭೇಟಿ ಮಾಡಿ ಘಟನೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ಹೇಳಿದ್ದಾರೆ. ಮನುಷ್ಯ ಪದೇ ಪದೇ ರಾಡ್‌ನಿಂದ ಥಳಿಸಿ ನಂತರ ಚಾಕುವಿನಿಂದ ಅದರ ಕಾಲನ್ನು ತುಂಡರಿಸಿದ್ದಾನೆ ಎಂದು ತಿಳಿದು ಬಂದಿದೆ ಎಂದು ಪೇಟಾ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ಸಹಿಸಬೇಡಿ ಎಂಬ ಗ್ವಾಲಿಯರ್ ಪೊಲೀಸರ ಸಂದೇಶವನ್ನು ಪೇಟಾ ಇಂಡಿಯಾ ಮೆಚ್ಚುತ್ತದೆ ಎಂದು ಅಶರ್ ಹೇಳಿದರು. ಆರೋಪಿಯನ್ನು ಮನೋವೈದ್ಯರಿಂದ ಪರೀಕ್ಷಿಸಿ ಸಮಾಲೋಚನೆ ನಡೆಸಬೇಕಾಗಿದೆ ಎಂದು ಜೈನ್ ಹೇಳಿದ್ದಾರೆ. ಇಂತಹ ಪ್ರಕರಣಗಳು ಪ್ರಾಣಿ ಹಿಂಸೆಯ ವಿರುದ್ಧ ಬಲವಾದ ಕಾನೂನುಗಳ ಅಗತ್ಯವನ್ನು ತೋರಿಸುತ್ತವೆ ಎಂದಿದ್ದಾರೆ.

ಕಂಬಳದ ವಿರುದ್ಧ ಮತ್ತೆ ಧ್ವನಿ ಎತ್ತಿದ ಪೆಟಾ..!

 

40  ವರ್ಷದ ವ್ಯಕ್ತಿ ಬೀದಿ ಬದಿಯ ಹೆಣ್ಣು ನಾಯಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ವಾಗ್ಲೆ ಎಸ್ಟೇಟ್ ಪಾದಚಾರಿ ಮಾರ್ಗದ ಬಳಿ ಮಂಗಳವಾರ ಸಂಜೆ 4.30ರ ವೇಳೆ ನಡೆದ ಅಸಹ್ಯಕರ ಘಟನೆ ಬೆಳಕಿಗೆ ಬಂದಿದೆ.

ಅದಿತಿ ನಾಯರ್ ಎಂಬ ಪ್ರಾಣಿ ಹೋರಾಟಗಾರ್ತಿ ನೀಡಿದ ದೂರಿನ ಆಧಾರದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

ಕಿರುತೆರೆ ನಟಿಯ ಮೇಲೆ ರೇಪ್..ಬ್ಲಾಕ್ ಮೇಲ್

ಮ್ಯಾನ್ ಹೋಲ್ ಸ್ವಚ್ಛ ಮಾಡುವ ಕೆಲಸ ಮಾಡುತ್ತಿದ್ದ ವ್ಯಕ್ತಿ ಅತ್ಯಾಚಾರದ ಆರೋಪಿ.  ಮಾಮೂಲಿಯಂತೆ ಹುಡುಗರ ತಂಡವೊಂದು ಬೀದಿ ಬದಿ ನಾಐಇಗಳಿಗೆ ಆಹಾರ ನೀಡುತ್ತಿತ್ತು. ಮಂಗಳವಾರ ಆಹಾರ ನೀಡಲು ಹೋದಾಗ ಈ ವ್ಯಕ್ತಿ ಹೆಣ್ಣು ನಾಯಿಯ ಮೇಲೆ ದೌರ್ಜನ್ಯ ಎಸಗುತ್ತಿದ್ದುದನ್ನು ಕಂಡಿದ್ದಾರೆ.  ತಕ್ಷಣವೇ ಅವರು  ಹೋರಾಟಗಾರ್ತಿ ನಾಯರ್ ಅವರಿಗೆ ಸುದ್ದಿ ಮುಟ್ಟಿಸಿದ್ದಾರೆ.

ಅನೈಸರ್ಗಿಕ ಸೆಕ್ಸ್ ಮತ್ತು ಪ್ರಾಣಿ ದಯಾ ಕಾನೂನಿನ ಅನ್ವಯ ದೂರು ದಾಖಲಿಸಿಕೊಂಡು ಆರೋಪಿಯನ್ನು ವಿಚಾರಣೆಗೆ ಒಳಡಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಈ ಹಿಂದೆಯೂ ಇತರ ಪ್ರಾಣಿಗಳಿಗೆ ಲೈಂಗಿಕ ಕಿರುಕುಳ ನೀಡಿರಬಹುದು ಎಂದು ಹೇಳಲಾಗಿದೆ. 

click me!