ಸಮವಸ್ತ್ರ ಧರಿಸದ ಹುಡು​ಗಿಯರಿಗೆ ಬಟ್ಟೆ ಬಿಚ್ಚಿ ಎಂದ ಪ್ರಾಚಾರ್ಯ!

Published : Sep 07, 2021, 12:18 PM IST
ಸಮವಸ್ತ್ರ ಧರಿಸದ ಹುಡು​ಗಿಯರಿಗೆ ಬಟ್ಟೆ ಬಿಚ್ಚಿ ಎಂದ ಪ್ರಾಚಾರ್ಯ!

ಸಾರಾಂಶ

* ಮಧ್ಯಪ್ರದೇಶದ ರಾಜಘರ್‌ ಜಿಲ್ಲೆಯ ಪ್ರೌಢಶಾಲೆಗೆ ಸಮವಸ್ತ್ರ ಧರಿಸದೇ ಬಂದಿದ್ದ ವಿದ್ಯಾರ್ಥಿನಿಯರು * ಸಮವಸ್ತ್ರ ಧರಿಸದ ಹುಡು​ಗಿಯರಿಗೆ ಬಟ್ಟೆಬಿಚ್ಚಿ ಎಂದ ಪ್ರಾಚಾ​ರ‍್ಯನ ವಿರುದ್ಧ ಕೇಸು

ರಾಜ್‌ಘರ್‌(ಸೆ.07): ಮಧ್ಯಪ್ರದೇಶದ ರಾಜಘರ್‌ ಜಿಲ್ಲೆಯ ಪ್ರೌಢಶಾಲೆಗೆ ಸಮವಸ್ತ್ರ ಧರಿಸದೇ ಬಂದಿದ್ದ ವಿದ್ಯಾರ್ಥಿನಿಯರಿಗೆ ಬಟ್ಟೆತೆಗೆಯುವಂತೆ ಹೇಳಿದ್ದ ಪ್ರಾಂಶುಪಾಲ ರಾಧೇ ಶ್ಯಾಂ ಮಾಳವೀಯ ವಿರುದ್ಧ ಪ್ರಕರಣ ದಾಖಲಾಗಿದೆ.

‘ಶಾಲೆಗಳು ಈಗಷ್ಟೇ ಆರಂಭಗೊಂಡಿವೆ. ಸಮವಸ್ತ್ರಗಳನ್ನು ಹೊಲಿಸಿಕೊಳ್ಳಲು ಆಗಿಲ್ಲ’ ಎಂದ ವಿದ್ಯಾರ್ಥಿನಿಯರಿಗೆ ರಾಧೇಶ್ಯಾಂ ಧರಿಸಿರುವ ಬಟ್ಟೆತೆಗೆಯುವಂತೆ ಹೇಳಿದ್ದರು. ಈ ಘಟನೆಯ ಕುರಿತು ಮೂವರು ವಿದ್ಯಾರ್ಥಿನಿಯರು ಮಾಚಲಪುರ ಠಾಣೆಯಲ್ಲಿ ದೂರು ನೀಡಿದ್ದರು. ವಿದ್ಯಾರ್ಥಿಗಳು ಠಾಣೆಯ ಎದುರು ಪ್ರತಿಭಟನೆ ನಡೆಸಿದ ನಂತರ ಪ್ರಾಂಶುಪಾಲನ ವಿರುದ್ಧ ಪೋಕ್ಸೋ ಕಾಯಿದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

‘ವಿದ್ಯಾರ್ಥಿನಿಯರ ಹೇಳಿಕೆ ಪಡೆದ ನಂತರ ಆತನನ್ನು ಬಂಧಿಸಲು ಮನೆಯ ಬಳಿ ಹೋಗಿದ್ದೆವು. ಆದರೆ ಆತ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀ​ಸರು ಹೇಳಿ​ದ್ದಾ​ರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!