ಶಾಸ​ಕ, ಸಂಸ​ದರ ವಿರುದ್ಧ ತನಿ​ಖೆಗೆ ಅನು​ಮತಿ ಕಡ್ಡಾ​ಯ: ಕೇಂದ್ರದ ಹೊಸ ಮಾರ್ಗ​ಸೂ​ಚಿ!

Published : Sep 07, 2021, 08:21 AM IST
ಶಾಸ​ಕ, ಸಂಸ​ದರ ವಿರುದ್ಧ ತನಿ​ಖೆಗೆ ಅನು​ಮತಿ ಕಡ್ಡಾ​ಯ: ಕೇಂದ್ರದ ಹೊಸ ಮಾರ್ಗ​ಸೂ​ಚಿ!

ಸಾರಾಂಶ

* ಕೇಂದ್ರ ಸರ್ಕಾ​ರದಿಂದ ಹೊಸ ಮಾರ್ಗ​ಸೂ​ಚಿ * ಶಾಸ​ಕ, ಸಂಸ​ದರ ವಿರುದ್ಧ ತನಿ​ಖೆಗೆ ಅನು​ಮತಿ ಕಡ್ಡಾ​ಯ

ನವದೆಹಲಿ(ಸೆ.07): ಸಾರ್ವಜನಿಕ ಸೇವಕರ (ಶಾ​ಸ​ಕ/ಸಂಸ​ದ​ರು​) ವಿರುದ್ಧ ಕೇಳಿಬರುವ ಯಾವುದೇ ಭ್ರಷ್ಟಾಚಾರ ಪ್ರಕರಣದ ತನಿಖೆ ಕೈಗೊಳ್ಳುವ ಮುನ್ನ ಇನ್ನು ಮುಂದೆ ಪೊಲೀಸ್‌ ಅಧಿಕಾರಿಗಳು ಕಡ್ಡಾಯ ಅನುಮತಿ ಪಡೆಯಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.

1988ರ ಭ್ರಷ್ಟಾಚಾರ ನಿಯಂತ್ರಣದ ಕಾಯ್ದೆಗೆ 2018ರಲ್ಲಿ ತಿದ್ದುಪಡಿ ಮಾಡುವ ಮುಖಾಂತರ ಸಾರ್ವಜನಿಕ ಸೇವಕರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಕಡ್ಡಾಯ ಅನುಮತಿ ಪಡೆಯುವ ಕಾನೂನು ಜಾರಿಗೊಳಿಸಲಾಗಿತ್ತು. ಇದರ ಅನುಷ್ಠಾನಕ್ಕಾಗಿ ಸೋಮವಾರ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಈ ಪ್ರಕಾರ ಕೇಂದ್ರ ಸಚಿವರು, ಸಂಸದರು, ರಾಜ್ಯಗಳ ಸಚಿವರು, ಶಾಸಕರು, ಸುಪ್ರೀಂ ಮತ್ತು ಹೈಕೋರ್ಟ್‌ ನ್ಯಾಯಾಧೀಶರು, ಸಾರ್ವಜನಿಕ ವಲಯದ ಸಂಸ್ಥೆಗಳ ಅಧ್ಯಕ್ಷರು ಅಥವಾ ವ್ಯವಸ್ಥಾಪಕ ನಿರ್ದೇಶಕರು, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಮಂಡಳಿ ಹಂತದ ಅಧಿಕಾರಿಗಳ ವಿರುದ್ಧದ ಭ್ರಷ್ಟಾಚಾರ ದೂರುಗಳ ತನಿಖೆಗೆ ಕಡ್ಡಾಯ ಅನುಮತಿಯನ್ನು ಪಡೆಯಲೇಬೇಕು. ಪೊಲೀಸರು ಮತ್ತು ಸಿಬಿಐ ಸೇರಿದಂತೆ ಇನ್ನಿತರ ತನಿಖಾ ಸಂಸ್ಥೆಗಳಿಗೆ ಇಂಥ ಅನುಮತಿ ನೀಡಲು ಕಾರ್ಯದರ್ಶಿಗಿಂತಲೂ ಕೆಳಗಿನ ರಾರ‍ಯಂಕ್‌ನ ಅಧಿಕಾರಿಯನ್ನು ನೇಮಿಸಬಾರದು ಎಂದು ಇದರಲ್ಲಿ ಸೂಚಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

5 States Assembly Election Results 2026: ಇಂದು 5 ರಾಜ್ಯಗಳ ವಿಧಾನಸಭಾ ಫಲಿತಾಂಶ: ಪಂಚ ಗದ್ದುಗೆ ಯಾರಿಗೆ?
West Bengal Election Results: ಮತ ಎಣಿಕೆಗೂ ಮುನ್ನ ಮಮತಾ ಬ್ಯಾನರ್ಜಿ 'ಪವರ್' ಫುಲ್ ಆರೋಪ!