ಬಿಸಿಲಿನ ತಾಪಕ್ಕೆ ಬಳಲಿದ್ದ ರಾಷ್ಟ್ರ ರಾಜಧಾನಿಯಲ್ಲಿ ತಂಪೆರದ ಮಳೆರಾಯ!

Published : Jul 13, 2021, 05:20 PM ISTUpdated : Jul 13, 2021, 05:22 PM IST
ಬಿಸಿಲಿನ ತಾಪಕ್ಕೆ ಬಳಲಿದ್ದ ರಾಷ್ಟ್ರ ರಾಜಧಾನಿಯಲ್ಲಿ ತಂಪೆರದ ಮಳೆರಾಯ!

ಸಾರಾಂಶ

* ದೀರ್ಘ ವಿಳಂಬದ ಬಳಿಕ ದೇಶದ ರಾಜಧಾನಿಗೆ ಕೊನೆಗೂ ಮುಂಗಾರು ಮಳೆ * ದೆಹಲಿಯ ಹಲವೆಡೆ ಬೆಳಿಗ್ಗೆಯಿಂದ ಗುಡುಗು, ಸಿಡಿಲು ಸಹಿತ ಭಾರಿ ಮಳೆ  * ಗುರುಗ್ರಾಮ ಮತ್ತು ಫರಿದಾಬಾದ್‌ನಲ್ಲಿಯೂ ಮಳೆ

ನವದೆಹಲಿ(ಜು.13): ಕಾದ ಕಾವಲಿಯಂತಾಗಿರುವ ರಾಷ್ಟ್ರ ರಾಜಧಾನಿ ನವದೆಹಲಿಗೆ ಮಳೆರಾಯ ತಂಪೆರೆದಿದ್ದಾನೆ. ಬೆಳಗ್ಗೆ ಹೆಚ್ಚು ಕಡಿಮೆ ಒಂದು ಗಂಟೆ ದೆಹಲಿಯ ಅಕ್ಕಪಕ್ಕದ ಪ್ರದೇಶಗಳಲ್ಲೂ ಮಳೆ ಸುರಿಯಿತು. ಕಳೆದ ಒಂದೂವರೆ ಎರಡು ತಿಂಗಳಿಂದ ಬಿಸಿಲಿನ ತಾಪಮಾನಕ್ಕೆ ದೆಹಲಿಗರು ಹೈರಾಣಾಗಿದ್ದರು. ತಾಪಮಾನ 42 ಡಿಗ್ರಿ ಸೆಲ್ಸಿಯಸ್ ದಾಟುವ ಜೊತೆಗೆ ಧಗೆ ಕೂಡ ಜಾಸ್ತಿಯಾಗಿತ್ತು. 

ರಾಜ್ಯದ 8 ಜಿಲ್ಲೆಗಳಲ್ಲಿ ವರುಣನ ಆರ್ಭಟ

19 ವರ್ಷಗಳ ಹಿಂದೆ..! 

ಕೊನೆಗೂ ಮುಂಗಾರು ಮಳೆ ದೆಹಲಿ ಪ್ರವೇಶ ಮಾಡಿದೆ. ಈ ಭಾರಿ 16 ದಿನಗಳು ತಡವಾಗಿ ದೆಹಲಿ ಪ್ರವೇಶವಾಗಿದೆ. 19 ವರ್ಷಗಳ ಹಿಂದೆ ಇದೇ ರೀತಿ ತಡವಾಗಿ ಬಂದಿತ್ತು.  ಮುಂಗಾರು ಪ್ರವೇಶ ತಡವಾದರೆ‌ ದೆಹಲಿ ಬಿಸಿಲಿನ ಆಟಾಟೋಪ ಸಹಿಸಿಕೊಳ್ಳುವುದು ಕಷ್ಟ. ಬಿಸಿಲಿನ ಪರಿಣಾಮಗಳು ಊಹಿಸುವುದಕ್ಕೂ ಕಷ್ಟ. ಬಿಸಿಲಿನ ಝಳಕ್ಕೆ ಎಸಿಗಳು ಆರ್ಭಟವೂ ಹೆಚ್ಚು. ಇದರಿಂದ ಪ್ರತಿನಿತ್ಯ ಏಳು ಸಾವಿರ ಮೆಗಾವ್ಯಾಟ್ ವಿದ್ಯುತ್ ಬೇಕಾಗುತ್ತದೆ.

ತುಂಗಭದ್ರಾ ಜಲಾಶಯಕ್ಕೆ ತಗ್ಗಿದ ಒಳಹರಿವು, ಹೆಚ್ಚಿದ ರೈತರ ಆತಂಕ..!

ಈ ಮಧ್ಯೆ, ಹವಾಮಾನ ಇಲಾಖೆಯ ಕಳಪೆ ಮುನ್ಸೂಚನೆ ಬಗ್ಗೆ ಭಾರೀ ಟೀಕೆ ಕೇಳಿಬಂದಿದೆ. ಅಂತಿಮವಾಗಿ, ದೆಹಲಿಯಲ್ಲಿ ವರುಣನ ಸಿಂಚನವಾದ ಬಳಿಕ ಮುಂಗಾರಿನ ಆರಂಭವಾಗಿದೆ ಎಂದು ಹವಾಮಾನ ಇಲಾಖೆ ಘೋಷಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!